ತೊಕ್ಕೊಟ್ಟು; ಉಳ್ಳಾಲ ತಾಲೂಕಿನಲ್ಲಿ ಆರೋಗ್ಯ ಮತ್ತು ಶೈಕ್ಷಣಿಕ ಕ್ರಾಂತಿಯನ್ನು ನಡೆಸಿರುವ ಸೇವಾ ಮಾಣಿಕ್ಯ ನಿಟ್ಟೆ ಸಮೂಹ ಸಂಸ್ಥೆಯ ಅಧ್ಯಕ್ಷರು ಡಾ.ಎನ್ ವಿನಯ ಹೆಗ್ಡೆಯವರಿಗೆ ಶ್ರದ್ಧಾಂಜಲಿ ಸಭೆ ಮತ್ತು ನುಡಿನಮನವನ್ನು ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ತೊಕ್ಕೊಟು ವಿನಂಬ್ರಾ ಸಭಾಂಗಣದಲ್ಲಿ ನಡೆಯಿತು. ಸರಳ, ಸಜ್ಜನಿಕೆಯ ನಿಸ್ವಾರ್ಥ ಗುಣದ ಡಾ.ವಿನಯ ಹೆಗ್ಡೆ ಅವರ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡುವ ಮೂಲಕ ಗಣ್ಯರು ಗೌರವದ ನಮನ ಸಲ್ಲಿಸಿದ್ದಾರೆ.
ಸಹಕಾರಿ ಪ್ರಕೊಷ್ಠ ಜಿಲ್ಲಾ ಸಂಚಾಲಕರಾದ ಟಿ ರಾಜಾರಾಮ್ ಭಟ್ ಅವರು ಮಾತನಾಡಿ, ಹುಟ್ಟು ಮತ್ತು ಸಾವುಗಳ ನಡುವಿನ ಸಾಧನೆ ಆದರ್ಶಮಯ ಅನ್ನುವ ಮಾತಿದೆ. ಇದಕ್ಕೆ ಶಿಕ್ಷಣದಲ್ಲಿ ಕ್ರಾಂತಿಯನ್ನು ಮಾಡಿದ ಡಾ.ವಿನಯ ಹೆಗ್ಡೆ ಅವರ ಬದುಕು ಸಾಕ್ಷಿಯಾಗತ್ತೆ. ಡಾ.ವಿನಯ ಹೆಗ್ಡೆಯವರ ಜೀವನ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ ಎಂದು ಹಾರೈಸಿದ್ರು.
ಈ ವೇಳೆ ಅರೆಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ವಿನಯ ಹೆಗ್ಡೆ ಅವರು ದೇರಳಕಟ್ಟೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ಪ್ರಮುಖ ಕಾರಣಕರ್ತರು. ನಿಟ್ಟೆ ಹೆಸರನ್ನು ದೇಶದಾದ್ಯಂತ ಪಸರಿಸುವಲ್ಲಿ ಶ್ರಮಿಸಿದವರು ವಿನಯ ಹೆಗ್ಡೆ. ದೊಡ್ಡ ಮಟ್ಟದಲ್ಲಿ ಬೆಳೆದಿದ್ದರೂ ಸರಳ ಜೀವನವನ್ನೇ ಸದಾ ಅನುಸರಿಸುತ್ತಾ ಹಲವರಿಗೆ ನಿದರ್ಶನವಾಗಿದ್ದಾರೆ. ಇಂದು ಡಾ.ವಿನಯ ಹೆಗ್ಡೆಯವರು ನಮ್ಮ ಜೊತೆ ಇಲ್ಲದಿದ್ದರೂ ಅವರ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಕೊಟ್ಟು ಹೋಗಿದ್ದಾರೆ ಎಂದ್ರು.
ಬಿ.ಜೆ.ಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಜಗದೀಶ ಕುವ್ಯೆತ್ತಬ್ಯೆಲ್ ಮಾತನಾಡಿ, ದೇರಳಕಟ್ಟೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸುವುದು ಸುಲಭವಲ್ಲ. ಅಂತಹ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾದವರು ವಿನಯ ಹೆಗ್ಡೆ. ಅಂದು 500 ರೂ ಖರೀದಿಸಿದ ಪ್ರದೇಶ ಇಂದು 20,30 ಲಕ್ಷ ಬೆಲೆಬಾಳುವಂತೆ ಮಾಡಿದವರು ಇದೇ ಹೆಗ್ಡೆಯವರು. ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಕರುಣಾಯಿ ಆಗಿದ್ದರು. ಪಕ್ಷದ ತತ್ವಗಳನ್ನು ಆಳವಡಿಸಿಕೊಂಡು, ಯಾವುದೇ ಹುದ್ದೆಗೆ ಹಾತೊರೆಯದೇ ಉತ್ತಮ ವ್ಯಕ್ತಿಯಾಗಿ ಬದುಕಿ ಬಾಳಿದವರು ಎಂದು ಡಾ.ವಿನಯ ಹೆಗ್ಡೆಯವರ ಸರಳತೆಯ ಬಗ್ಗೆ ವಿವರಿಸಿದ್ರು.
ಕಾರ್ಯಕ್ರಮದದಲ್ಲಿ ಮಾಜಿ ಶಾಸಕರಾದ ಕೆ ಜಯರಾಮ್ ಶೆಟ್ಟಿ, ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಚಂದ್ರಹಾಸ್ ಉಚ್ಚಿಲ್,ಚಂದ್ರಹಾಸ್ ಉಳ್ಳಾಲ್ ರವರು ಶ್ರದ್ಧಾಂಜಲಿ ಅರ್ಪಿಸಿ ನುಡಿ ನಮನ ಸಲ್ಲಿಸಿದ್ರು.
ಇನ್ನು ಈ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯರಾದ ಸಂಜೀವ ಶೆಟ್ಟಿ ಅಂಬ್ಲಮೊಗರು, ಭಾಸ್ಕರ ಶೆಟ್ಟಿ, ಫಲಾನುಭವಿಗಳ ಪ್ರಕೋಷ್ಠ ರಾಜ್ಯ ಸದಸ್ಯರಾದ ಧನಲಕ್ಷ್ಮಿ ಗಟ್ಟಿ, ಮಂಡಲ ಉಪಾಧ್ಯಕ್ಷರಾದ ಯಶವಂತ ದೇರಾಜೆ, ಶೈಲೇಶ್ ಶೆಟ್ಟಿ ದೇವಿಪುರ, ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಸತೀಶ್ ಶೆಟ್ಟಿ, ಮಂಡಲ ಕಾರ್ಯಾಲಯ ಕಾರ್ಯದರ್ಶಿ ಸುಜಾತ ಶೆಟ್ಟಿ ನಡಾರ್, ಮಂಡಲ ಕೋಶಾಧಿಕಾರಿ ಸುಮಲತಾ ಕೊಣಾಜೆ, ಹಿರಿಯ ನಾಗರಿಕ ಪ್ರಕೊಷ್ಠ ಜಿಲ್ಲಾ ಸಂಚಾಲಕರಾದ ದೇವದಾಸ್ ಕೊಲ್ಯ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ರು.
ಈ ಸಂದರ್ಭದಲ್ಲಿ ಹಿರಿಯರಾದ ಸಂಜೀವ ಶೆಟ್ಟಿ ಅಂಬ್ಲಮೊಗರು, ಭಾಸ್ಕರ ಶೆಟ್ಟಿ, ಫಲಾನುಭವಿಗಳ ಪ್ರಕೋಷ್ಠ ರಾಜ್ಯ ಸದಸ್ಯರಾದ ಧನಲಕ್ಷ್ಮಿ ಗಟ್ಟಿ, ಮಂಡಲ ಉಪಾಧ್ಯಕ್ಷರಾದ ಯಶವಂತ ದೇರಾಜೆ, ಶೈಲೇಶ್ ಶೆಟ್ಟಿ ದೇವಿಪುರ, ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಸತೀಶ್ ಶೆಟ್ಟಿ, ಮಂಡಲ ಕಾರ್ಯಾಲಯ ಕಾರ್ಯದರ್ಶಿ ಸುಜಾತ ಶೆಟ್ಟಿ ನಡಾರ್, ಮಂಡಲ ಕೋಶಾಧಿಕಾರಿ ಸುಮಲತಾ ಕೋಣಾಜೆ, ಹಿರಿಯ ನಾಗರಿಕ ಪ್ರಕೊಷ್ಠ ಜಿಲ್ಲಾ ಸಂಚಾಲಕರಾದ ದೇವದಾಸ್ ಕೊಲ್ಯ, ಸಹಕಾರಿ ಪ್ರಕೋಷ್ಠ ಜಿಲ್ಲಾ ಸಹ ಸಂಚಾಲಕರಾದ ಜಿತೇಂದ್ರ ಶೆಟ್ಟಿ ತಲಪಾಡಿ, ಮಹಾ ಶಕ್ತಿಕೇಂದ್ರ ಅಧ್ಯಕ್ಷರುಗಳಾದ ಸುರೇಂದ್ರ ಶೆಟ್ಟಿ ಮಂಚಿಲ, ಪುರುಷೋತ್ತಮ ಗಟ್ಟಿ ಕೊಲ್ಯ, ನಿತ್ಯಾನಂದ ಭಂಡಾರಿ, ಮಹಾ ಶಕ್ತಿಕೇಂದ್ರ ಕಾರ್ಯದರ್ಶಿಗಳಾದ ಅರುಣ್ ಬೀರಿ, ಅತುಲ್ ಬಗಂಬಿಲ, ಶಕ್ತಿಕೇಂದ್ರ ಪ್ರಮುಖರಾದ ಶಿವಪ್ರಸಾದ್ ಅಡಪ, ನಿತಿನ್ ಪೂಜಾರಿ, ಶರತ್ ಶೆಟ್ಟಿ, ಮಹಾ ಶಕ್ತಿಕೇಂದ್ರ ಪ್ರಮುಖ್ ದೇವೀಶ್ ಪೂಜಾರಿ, ಅಲ್ಪಸಂಖ್ಯಾತ ಮೋರ್ಚಾ ಮಂಡಲ ಅಧ್ಯಕ್ಷರಾದ ಕರೀಮ್ ಉಚ್ಚಿಲ್, ಎಸ್ ಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ವರುಣ್ ರಾಜ್ ತಲಪಾಡಿ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದೀಕ್ ತಲಪಾಡಿ, ಸೋಮೇಶ್ವರ ಪುರಸಭೆ ಸದಸ್ಯರಾದ ಮೋಹನ್ ಶೆಟ್ಟಿ ಕುಂಪಲ, ಸಾಮಾಜಿಕ ಜಾಲತಾಣದ ಮಂಡಲ ಸಂಚಾಲಕರಾದ ಗಣೇಶ್ ಭಂಡಾರಿ, ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಉಳ್ಳಾಲ್ ಬೈಲ್, ಉಪಾಧ್ಯಕ್ಷರಾದ ಸೂರಜ್ ಸಾಗರ್ ಕುಂಪಲ, ಬೂತ್ ಅಧ್ಯಕ್ಷರಾದ ದೀಕ್ಷಿತ್ ನಿಸರ್ಗ ಹಾಗೂ ಪ್ರಕಾಶ್ ಉಳ್ಳಾಲ್ ಬೈಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ ಆರ್ ರವರು ಬಂದಂತಹ ಅತಿಥಿಗಳು ಹಾಗೂ ಪ್ರಮುಖರ ಉಪಸ್ಥಿತಿಯನ್ನು ಗೌರವಿಸಿದರು. ದಯಾನಂದ ತೊಕ್ಕೋಟ್ಟು ರವರು ಕಾರ್ಯಕ್ರಮ ನಿರೂಪಿಸಿ ವಂದನೆಗೈದರು.
