Site icon Ullalavani

ಉಳ್ಳಾಲವಾಣಿ ಪತ್ರಿಕೆ ವರದಿ ಫಲಶ್ರುತಿ; ಕುಂಪಲ- ಮಡ್ಯಾರ್‌ ರಸ್ತೆ ಸಂಪರ್ಕಕ್ಕೆ ಮೊದಲ ಅಂಕುಶ


ಕುಂಪಲ: ಕುಂಪಲ-ಮಡ್ಯಾರ್‌ ಸಂಪರ್ಕ ರಸ್ತೆಯ ಕುರಿತು ಉಳ್ಳಾಲವಾಣಿ ಸರಣಿ ಲೇಖನ ಪ್ರಕಟಿಸಿ ಅಭಿಯಾನ ನಡೆಸಿತ್ತು. ಅದರ ಫಲವಾಗಿ ಇತ್ತೀಚೆಗೆ ಕೋಟೆಕಾರು ಪಟ್ಟಣ ಪಂಚಾಯತ್‌ ನಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್‌ ವಿಚಾರವನ್ನು ಮಂಡಿಸಿದ ಹಿನ್ನೆಲೆಯಲ್ಲಿ ಇದೀಗ ಆಡಳಿತಾತ್ಮಕ ನಿರ್ಣಯದಲ್ಲಿ ಸಂಪರ್ಕ ರಸ್ತೆ ಕಲ್ಪಿಸುವ ಕುರಿತು ನಿರ್ಣಯ ದಾಖಲಾಗುವ ಮೂಲಕ ರಸ್ತೆ ನಿರ್ಮಾಣಕ್ಕೆ ಮೊದಲ ಅಂಕುಶ ದೊರೆತಿದೆ.


ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಭಾಗದಿಂದ ಕೋಟೆಕಾರು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಬೀರಿ ದೇರಳಕಟ್ಟೆ ಮುಖ್ಯ ರ್ಸತೆಗೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಎರಡು ಗ್ರಾಮದ ಜನರ ಬೇಡಿಕೆಯಾಗಿದೆ. ಈ ಬಗ್ಗೆ ರಸ್ತೆ ನಿರ್ಮಾಣಕ್ಕೆ ಕೆಲವು ಖಾಸಗಿ ಜಮೀನಿನ ಅಗತ್ಯವಿದೆ. ಜಮೀನು ಮಾಲಕರಲ್ಲಿ ಮಾತುಕತೆ ನಡೆಸಿ ಖಾಸಗಿ ರಸ್ತೆ ನಿರ್ಮಿಸಿಲು ಒಪ್ಪಿದ್ದಲ್ಲಿ ಅದಕ್ಕೆ ಬೇಕಾದ ರಸ್ತೆ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಲಾಗುವುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.



೨೦೨೫ರ ಅ.೧೬-೩೦ ರ ಉಳ್ಳಾಲವಾಣಿ ಪತ್ರಿಕೆಯ ಸಂಚಿಕೆಯಲ್ಲಿ ಎರಡು ಗ್ರಾಮಗಳ ಸಂಪರ್ಕಕ್ಕೆ ಒಲವು ಹರಿಸುವ ಕುರಿತು ವರದಿ ಪ್ರಕಟಿಸಲಾಗಿತ್ತು. ಅದರಂತೆ ಸಾಮಾನ್ಯ ಸಭೆಯಲ್ಲಿ ಉಳ್ಳಾಲವಾಣಿಯ ವರದಿಯನ್ನು ಆಧರಿಸಿ ಕೌನ್ಸಿಲರ್‌ ಹರೀಶ್‌ ರಾವ್‌ ವಿಚಾರವನ್ನು ಮಂಡಿಸಿದಾಗ, ಅಧ್ಯಕ್ಷೆ ದಿವ್ಯಾ ಸತೀಶ್‌ ಶೆಟ್ಟಿ ಅವರು ಒಲವು ಹರಿಸಿದ್ದರು. ಇದರಿಂದ ಕಿರಿದಾದ ಕುಂಪಲದ ರಸ್ತೆಯಿಂದ ದಿನಕ್ಕೆ ನೂರಾರು ಜನರು ಸಂಚರಿಸುವವರಿಗೆ ಮುಕ್ತಿ ದೊರಕಲಿದೆ. ಎರಡು ಗ್ರಾಮಗಳ ಸಂಪರ್ಕ ಆದಾಗ ಅಭಿವೃದ್ಧಿ ಕಾರ್ಯಗಳು ಭರಪೂರವಾಗಿ ನಡೆಯಲಿದೆ. ಅನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದೀಗ ಅದರಂತೆ ನಿರ್ಣಯ ಪ್ರತಿಯಲ್ಲಿ ರಸ್ತೆ ಕಲ್ಪಿಸುವ ವಿಚಾರ ದಾಖಲಾಗುವ ಮುಖೇನ ಮೊದಲ ಯಶಸ್ಸು ದೊರೆತಿದೆ.

Exit mobile version