ದೇಶದ ಕ್ರಿಶ್ಚಿಯನ್ ನಾಗರಿಕರ ಹಕ್ಕು-ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ Concerned Christian Citizens of India (CCCI) ಸಂಘಟನೆಯು ರಾಷ್ಟ್ರೀಯ ಕ್ರಿಶ್ಚಿಯನ್ ಕನ್ವೆನ್ನನ್ನನ್ನು ನವೆಂಬರ್ 29ರಂದು ಶನಿವಾರ ನವದೆಹಲಿಯ ಜಂತರ್ ಮಂತರ್ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲು ಘೋಷಿಸಿದೆ. AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇದರಲ್ಲಿ ಭಾಗಿಯಾಗಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದವರನ್ನು ಪ್ರತಿನಿಧಿಸಲಿದ್ದಾರೆ. ವಿಭಿನ್ನ ಪಂಥಗಳ ನಾಗರಿಕರ ಒಕ್ಕೂಟದಿಂದ ಆರಂಭವಾದ ಈ ಚಳವಳಿಗೆ ಯುನೈಟೆಡ್ ಕ್ರಿಶ್ಚಿಯನ್ ಫೋರಂ (UCF) ಸಂಪೂರ್ಣ ಬೆಂಬಲ ಘೋಷಿಸಿದೆ.
ಸಂಘಟಕರು ತಿಳಿಸಿದಂತೆ, ಈ ಕನ್ವೆನ್ನನ್ ಭಾರತದ ಧರ್ಮ ನಿರಪೇಕ್ಷತೆ ಮತ್ತು ಕ್ರಿಶ್ಚಿಯನ್ ಸಮುದಾಯದ ಸಂವಿಧಾನಿಕ ಹಕ್ಕುಗಳಿಗೆ ಎದುರಾಗಿರುವ ತುರ್ತು ಸಂವಿಧಾನ ಸಂಕಟದ” ಬಗ್ಗೆ ರಾಷ್ಟ್ರದ ಗಮನ ಸೆಳೆಯುವ ಗುರಿ ಹೊಂದಿದೆ. ನಾಯಕರು, ಬುದ್ಧಿಜೀವಿಗಳು ಮತ್ತು ಸಮುದಾಯ ಪ್ರತಿಸಿಧಿಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಸಂವಿಧಾನ ಸಂಕಟದ ನಡುವೆ ಕ್ರಿಶ್ಚಿಯನ್ ಸಮುದಾಯದ ಮೂರು ಮುಖ್ಯ ಪ್ರಮುಖ ಸಂವಿಧಾನಿಕ ಬೇಡಿಕೆಗಳು:
- ವ್ಯಕ್ತಿಗಳ ಮತ್ತು ಸಂಸ್ಥೆಗಳ ಮೇಲೆ “ಆಯುಧೀಕೃತ ಕಾನೂನುಗಳ” ಬಳಕೆಯನ್ನು ನಿಲ್ಲಿಸಿ: ಕನ್ನೆನ್ನನ್ ಸಮಿತಿ ತಿಳಿಸಿದಂತೆ ರಿವಾಜುಗೊಳಿಸಿರುವ ಆಂಟಿ-ಕನ್ವರ್ಷನ್ ಕಾನೂನುಗಳ ರದ್ದತಿ, ಕ್ರಿಶ್ಚಿಯನ್ ಸಂಸ್ಥೆಗಳ ವಿರುದ್ಧ ಆಡಳಿತಾತ್ಮಕ ಹಿಂಸೆಗಾಗಿರುವ FCRA ಕಾಯ್ದೆಯ ಸುಧಾರಣೆ ಮುಖ್ಯ ಬೇಡಿಕೆಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ 750ಕ್ಕೂ ಹೆಚ್ಚು ಕ್ರಿಶ್ಚಿಯನ್ನರನ್ನು ಈ ಕಾನೂನುಗಳಡಿ ತಪ್ಪಾಗಿ ಬಂಧಿಸಲಾಗಿದೆ. ಆದರೆ ಶಿಕ್ಷೆ ಪ್ರಮಾಣ ಶೂನ್ಯ ಮಟ್ಟದಲ್ಲಿ ಇರುವುದರಿಂದ ಆರೋಪಗಳು ವ್ಯವಸ್ಥಿತವಾಗಿ ಸುಳ್ಳು ಎನ್ನುವುದನ್ನು ತೋರಿಸುತ್ತದೆ. ಹಾಗೆಯೇ 1,626 ಕ್ರಿಶ್ಚಿಯನ್ ಎನ್ಜಿಒ-ಗಳ FCRA ನೋಂದಣಿಯನ್ನು ರದ್ದುಪಡಿಸಿರುವುದು ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಸೇವೆಗಳ ಮೇಲೆ ಭಾರೀ ಪರಿಣಾಮ ಬೀರಿದೆ.
- ದಲಿತ ಕ್ರಿಶ್ಚಿಯನ್ನರಿಗೆ ನಿಗದಿತ ಜಾತಿ (SC) ಹಕ್ಕುಗಳನ್ನು ಮರುನೀಡಿ : ದಲಿತ ಕ್ರಿಶ್ಚಿಯನ್ನರಿಗೆ 75 ವರ್ಷಗಳಿಂದ ಎಸಿ ವರ್ಗದ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿರುವುದು ಸಂವಿಧಾನದ 14 (ಕಾನೂನಿನ ಮುಂದೆ ಸಮಾನತೆ) ಮತ್ತು 15 (ಧಾರ್ಮಿಕ ಆಧಾರದ ಮೇಲೆ ಭೇದಭಾವ ನಿಷೇಧ) ಎಂಬ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಆಯೋಜಕರು ಹೇಳಿದ್ದಾರೆ. 8-10 ಮಿಲಿಯನ್ ದಲಿತ ಕ್ರಿಶ್ಚಿಯನ್ನರು, ಹಿಂದೂ ದಲಿತರಂತೆಯೇ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಲ್ಲಿದ್ದರೂ, ಕೇವಲ ಧರ್ಮದ ಆಧಾರದ ಮೇಲೆ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಈ ಅನ್ಯಾಯವನ್ನು ಸರಿಪಡಿಸಲು ಸಂವಿಧಾನ ತಿದ್ದುಪಡಿ ಅಥವಾ ಕಾರ್ಯನಿರ್ವಾಹಕ ಆದೇಶದ ಅಗತ್ಯವಿದೆ ಎಂದು ಕನ್ನೆನ್ನನ್ ಒತ್ತಾಯಿಸಿದೆ.
- ಕ್ರಿಶ್ಚಿಯನ್ ಬುಡಕಟ್ಟು ಸಮುದಾಯಗಳ ST ಸ್ಥಾನಮಾನ ವಜಾಗೊಳಿಸುವ ಪ್ರಯತ್ನಗಳನ್ನು ತಡೆಯಿರಿ: ಹಲವು ರಾಜ್ಯಗಳಲ್ಲಿ ಬುಡಕಟ್ಟು ಕ್ರಿಶ್ಚಿಯನ್ನರ ಎಸ್ಟಿ ಹಕ್ಕುಗಳನ್ನು ಕಳೆದು ಹಾಕುವ ಒತ್ತಡ ಹೆಚ್ಚುತ್ತಿದೆ. ‘ಬುಡಕಟ್ಟು ಗುರುತು ಉಳಿಸಿಕೊಳ್ಳೋ ಒಳ್ಳೆಯದೋ, ಕ್ರೈಸ್ತ ಧರ್ಮ ಪಾಲಿಸೋ ಒಳ್ಳೆಯದೋ?” ಎಂಬ ರೀತಿಯ ಬಲವಂತದ ಆಯ್ಕೆ ಒಡ್ಡಲಾಗುತ್ತಿರುವುದರಿಂದ ಇದು ಸಂವಿಧಾನದ ಎಸ್ಟಿ ಸ್ನಾನ ಕಳೆದುಕೊಂಡರೆ ಸುಮಾರು 4-5 ಮಿಲಿಯನ್ ಬುಡಕಟ್ಟು ಕ್ರಿಶ್ಚಿಯನ್ನರು ವಿದ್ಯಾರ್ಥಿವೇತನ, ಉದ್ಯೋಗ ಮೀಸಲಾತಿ, ಭೂಹಕ್ಕು ಹಾಗೂ ಕಲ್ಯಾಣ ಯೋಜನೆಗಳ ಸೌಲಭ್ಯ ಕಳೆದುಕೊಳ್ಳುವ ಅಪಾಯ ಇದೆ. ರಾಜ್ಯ ಮಟ್ಟದಲ್ಲಿ ನಡೆಯುವ ಯಾವುದೇ ಡಿಲಿಸ್ನಿಂಗ್ ಕ್ರಮಗಳನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು ಎಂದು ಬೇಡಿಕೆ ಮಾಡಲಾಗಿದೆ