ತಿರುವನಂತಪುರಂ : ರಾಜ್ಯದಲ್ಲಿ ಇಂದು ಸಹ ಸಿಡಿಲು, ಮಿಂಚು ಸಹಿತ ಮಳೆ ಕಾಣಿಸಿಕೊಳ್ಳಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪತ್ತನಂತಿಟ್ಟ ಇಡುಕ್ಕಿ ಪಾಲಕ್ಕಾಡ್, ಮಲಪ್ಪುರಂ, ವಯನಾಡ್ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜತೆ ಸಿಡಿಲು, ಮಿಂಚು, 30 ರಿಂದ 40 ಕಿ.ಮೀ.ವೇಗದ ಗಾಳಿಯೂ ಕಾಣಿಸಿಕೊಳ್ಳಲಿದೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಮಳೆ ಇರಲಿದೆ.
ರಾಜ್ಯದಲ್ಲಿ ಮುಂದುವರಿಯುತ್ತಿರುವ ಸಿಡಿಲು ಸಹಿತ ಮಳೆ : ಕಾಸರಗೋಡು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ
