Site icon Ullalavani

ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ರಾಷ್ಟೋತ್ಥಾನ ವಿದ್ಯಾ ಕೇಂದ್ರದ ತಂಡ ಪ್ರಥಮ

ಉಳ್ಳಾಲ : ತೊಕ್ಕೊಟ್ಟಿನಲ್ಲಿರುವ ಮಂಗಳೂರು ರಾಷ್ಟೋತ್ಥಾನ ವಿದ್ಯಾ ಕೇಂದ್ರದ 10 ವಿದ್ಯಾರ್ಥಿನಿಯರ ತಂಡವು ಹರಿಯಾಣದ ಕುರುಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಫುಟ್ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, 2026 ಜನವರಿಯ ಮೊದಲ ವಾರದಲ್ಲಿ ಜಾರ್ಖಂಡಿನ ರಾಂಚಿಯಲ್ಲಿ ನಡೆಯುವ ಎಸ್ ಜಿಎಫ್‌ಐ ಫುಟ್ಬಾಲ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದುಕೊಂಡಿದೆ.

ವಿದ್ಯಾ ಕೇಂದ್ರದ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜಪ್ಪ ಮತ್ತು ಮಾಲಾಶ್ರೀ ಅವರು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿದ್ದರು. ಈ ತಂಡವನ್ನು ವಿದ್ಯಾ ಕೇಂದ್ರದ ಪ್ರಾಂಶುಪಾಲರಾದ ವಿದ್ಯಾಕಾಮತ್ ಜಿ. ಮತ್ತು ಕಾರ್ಯನಿರ್ವಹಣಾಧಿಕಾರಿ ಪ್ರಖ್ಯಾತ್ ರೈ, ಶಿಕ್ಷಕರು, ಮಾತೃಭಾರತಿ ಸದಸ್ಯರು ಅಭಿನಂದಿಸಿದರು.

ಫುಟ್‌ಬಾಲ್ ಪಂದ್ಯಾಟದಲ್ಲಿ ಮೌಲ್ಯಾ ಪಿ, ಶಾರಧಿ, ಪ್ರಣ್ಯಾ ಪಿ. ಶೆಟ್ಟಿ, ಪ್ರತೀಕ್ಷಾ ಕೆ.ಎಸ್. ಲಕ್ಷ್ಯಾ ಸಿ. ಅಜಂತಾ, ಕುಶಿ ಕರ್ಕೇರಾ, ದೇವಿಕಾ ಎಸ್. ಅಳ್ವ, ಕೀರ್ತನಾ ಶೆಟ್ಟಿ, ಮೌಲ್ಯಾಶ್ರೀ, ತಸ್ಮಯಿ ಭಟ್ನಾಗ‌ರ್ ಭಾಗವಹಿಸಿದ್ದರು.

Exit mobile version