Site icon Ullalavani

ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾಗಿ ವಿಜೇತ್‌ ಪಜೀರ್‌ ಆಯ್ಕೆ

ಕೊಣಾಜೆ: ಇಲ್ಲಿನ ಗ್ರಾಮಚಾವಡಿ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇದರ 2025-2027ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ವಿಜೇತ್ ಪಜೀರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸುಭಾಷ್ ಬೋಳ್ಯಾ‌ರ್, ಪ್ರಧಾನ ಕಾರ್ಯದರ್ಶಿಯಾಗಿ ವೇಣುಗೋಪಾಲ್ ಪಾವೂರು, ಜತೆ ಕಾರ್ಯದರ್ಶಿಯಾಗಿ ಸುಜಾತ ಹರೇಕಳ, ಕೋಶಾಧಿಕಾರಿಯಾಗಿ ದಿನೇಶ್ ಬಂಗೇರ ಕೊಣಾಜೆ, ಪೂಜಾ ಸಂಚಾಲಕರಾಗಿ ಜನಾರ್ಧನ ಕೋಟ್ಯಾನ್ ಕೊಣಾಜೆ, ಭಜನಾ ಸಂಚಾಲಕರಾಗಿ ಸುರೇಶ್ ಪೂಜಾರಿ ಹರೇಕಳ, ಪ್ರವಾಸ ಸಂಚಾಲಕರಾಗಿ ರವೀಂದ್ರ ಬಂಗೇರ ಕೊಣಾಜೆ ಮತ್ತು ದಾಮೋದರ ಕುಂದರ್ ಕೊಣಾಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂರ್ಣಿಮಾ ಪಜೀರು, ಆ್ಯಂಬುಲೆನ್ಸ್ ಸಂಚಾಲಕರಾಗಿ ಹರೀಶ್ ಕೊಣಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಖ ಹರೀಶ್ ಕೊಣಾಜೆ, ಮಹಿಳಾ ಘಟಕದ ಅಧ್ಯಕ್ಷರಾಗಿ ಬಬಿತಾ ಪಜೀರು, ಉಪಾಧ್ಯಕ್ಷರಾಗಿ ಲಾವಣ್ಯ ಬೋಳ್ಯಾರು, ಪ್ರಧಾನ ಕಾರ್ಯದರ್ಶಿಯಾಗಿ ಜಯಂತಿ ಪಾವೂರು, ಜತೆಕಾರ್ಯದರ್ಶಿಯಾಗಿ ಉಮಾವತಿ ಹರೇಕಳ, ಕೋಶಾಧಿಕಾರಿಯಾಗಿ ಸುರೇಖ ಹರೀಶ್ ಕೊಣಾಜೆ ಇವರುಗಳು ಆಯ್ಕೆಯಾಗಿರುತ್ತಾರೆ.

Exit mobile version