ಸೇವೆಯಲ್ಲಿ ನಾವು ತೃಪ್ತಿ ಕಾಣಬೇಕು. ಸೇವಾ ಚಟುವಟಿಕೆಗಳೊಂದಿಗೆ ಮಾನವೀಯ ಸಂಬಂಧವನ್ನು ಬೆಳೆಸುವುದೇ ಲಯನ್ಸ್ ಸಂಸ್ಥೆಯ ಉದ್ದೇಶ ಎಂದು ಅಂತರಾಷ್ಟ್ರೀಯ ಲಯನ್ಸ್ ವಿಚಾರಗಳ ಮುಖ್ಯ ಸಂಯೋಜಕ ವೆಂಕಟೇಶ್ ಹೆಬ್ಬಾರ್ ತಿಳಿಸಿದರು.
ಕೊಲ್ಯ ಕುಲಾಲ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಛೋಟಾ ಮಂಗಳೂರು ಲಯನ್ಸ್ ಕ್ಲಬ್ ನ 2025-26ನೇ ಸಾಲಿನ ನೂತನ ಅಧ್ಯಕ್ಷ- ಪದಾಧಿಕಾರಿಗಳ ಪದಗ್ರಹಣವನ್ನು ನಡೆಸಿ ಪ್ರಮಾಣ ವಚನ ಬೋಧಿಸಿ, ವೆಂಕಟೇಶ್ ಹೆಬ್ಬಾರ್ ಲಯನ್ಸ್ ಸಂಸ್ಥೆಯ ಧ್ಯೇಯ ಉದ್ದೇಶಗಳ ಕುರಿತು ತಿಳಿಸಿದರು.
ಹರಿಣಾಕ್ಷಿ ಕೊಲ್ಯ ನೂತನ ಅಧ್ಯಕ್ಷರಾಗಿ ದೀಪ ಬೆಳಗಿಸಿ ಅಧಿಕಾರ ಸ್ವೀಕರಿಸಿ, ತನ್ನ ಅಧಿಕಾರ ಅವಧಿಯಲ್ಲಿ ಆದಷ್ಟು ಸಾಮಾಜಿಕ ಸೇವಾ ಚಟುವಟಿಕೆಗಳನ್ನೂ ಅರ್ಥಪೂರ್ಣವಾಗಿ ನಡೆಸಿ, ಛೋಟಾ ಮಂಗಳೂರು ಲಯನ್ಸ್ ಕ್ಲಬ್ನ್ನು ಇನ್ನಷ್ಟು ಅಭಿವೃದ್ಧಿಯಲ್ಲಿ ಮುಂದುವರೆಸುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು.
ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಅರ್ಹ ಕುಟುಂಬಕ್ಕೆ ವೈದ್ಯಕೀಯ ವೆಚ್ಚದ ನೆರವು ಸೇವಾ ಚಟುವಟಿಕೆಯಾಗಿ ವಿತರಿಸಲಾಯಿತು.
ಉಳ್ಳಾಲ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಹಿರಿಯ ಸಾಮಾಜಿಕ ಕಾರ್ಯಕರ್ತೆ ಸುಹಾಸಿನಿ ಬಬ್ಬು ಕಟ್ಟೆ ಡಿ ಎಮ್ ಉನ್ನತ ವೈದ್ಯಕೀಯ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 2ನೇ ರ್ಯಾಂಕ್ ಪಡೆದ ಡಾ. ಶಶಾಂಕ್ ಪರವಾಗಿ ಅವರ ತಂದೆ- ತಾಯಿ ಶ್ರೀಮತಿ ಶೋಭಾ ಆನಂದ್ ದಂಪತಿಗಳಿಗೆ, ಬೀಡಿ ಉದ್ಯಮದ ಅದ್ಯಯನ ಸಂಶೋಧನ ಪ್ರಬಂಧಕ್ಕಾಗಿ ಡಾಕ್ಟರೇಟ್ ಪಡೆದ ಡಾ. ಹರಿಣಾಕ್ಷಿ ಸುವರ್ಣ ಕುಂಪಲ, ಸಿ.ಎ ಪದವಿಯನ್ನು ಒಂದೇ ಹಂತದಲ್ಲಿ ಪೂರೈಸಿದ ಕು. ಹಂಶಿತಾ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಪದಗ್ರಹಣ ನಡೆಸಿಕೊಟ್ಟ ವೆಂಕಟೇಶ್ ಹೆಬ್ಬಾರ್ ಶ್ರೀಮತಿ ಪ್ರತಿಭಾ ಹೆಬ್ಬಾರ್ ದಂಪತಿಗಳನ್ನು, ಛೋಟಾ ಮಂಗಳೂರು ಲಯನ್ಸ್ ಕ್ಲಬ್ ಸದಸ್ಯೆ, ಪ್ರಾಂತೀಯಾ ಅಧ್ಯಕ್ಷರಾಗಿ, ಉಳ್ಳಾಲ ವಲಯ ಬಂಟರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾ .ಎಸ್. ಭಂಡಾರಿ, ಹಾಗೂ ಛೋಟಾ ಮಂಗಳೂರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಹರಿಣಾಕ್ಷಿ ಕೊಲ್ಯ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವಲಯಾಧ್ಯಕ್ಷೆ ಜೆಸಿಂತಾ ಮೆಂಡೊನ್ಸಾ ಉಪಸ್ಥಿತರಿದ್ದರು. ಪ್ರಜ್ಞಾ ಭಂಡಾರಿ ಪ್ರಾರ್ಥಿಸಿದರು. ಸರಿತಾ ಮಹೇಶ್ ಧ್ವಜವಂದನೆಗೈದರು. ಮಹೇಶ್ ನೀತಿ ಸಂಹಿತೆ ವಾಚಿಸಿದರು. ನಿರ್ಗಮನ ಉಪಾಧ್ಯಕ್ಷೆ ಭಾನುಮತಿ ಸ್ವಾಗತಿಸಿದರು. ಸತೀಶ್ ಭಂಡಾರಿ ನೂತನ ಸದಸ್ಯರನ್ನು ಪರಿಚಯಿಸಿದರು. ವಕೀಲ ಕೆ. ಸಿ ನಾರಾಯಣನ್ ಅತಿಥಿಗಳನ್ನು ಪರಿಚಯಿಸಿದರು. ಗೀತಾ ಸಂದೀಪ್ ಹೆಗ್ಡೆ, ಪ್ರಕಾಶ್ ಗಟ್ಟಿ, ಡಾ. ರವಿವರ್ಮ ಆಳ್ವ ನೂತನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಗಳನ್ನು ಪರಿಚಯಿಸಿದರು. ಬಿ.ಬಿ. ಶೆಟ್ಟಿ ಮತ್ತು ನಮಿತಾ ಶ್ಯಾಮ್ ಅಭಿನಂದಿತರ ಪರಿಚಯಿಸಿದರು. ನಿಶಾಂತ್ ಕುಮಾರ್ ಶೆಟ್ಟಿ ಸೇವಾಯೋಜನೆಯ ವಿವರ ನೀಡಿದರು. ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕಮಲಗೌಡ ವಂದಿಸಿದರು.
