ಮಂಗಳೂರು : 1975ರಲ್ಲಿ ಅಸ್ತಿತ್ವಕ್ಕೆ ಬಂದು ಐದು ದಶಕಗಳ ಯಶಸ್ವಿ ಪಯಣವನ್ನು ಪೂರ್ಣಗೊಳಿಸುತ್ತಿರುವ ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ನಿಯಮಿತ (MACO) ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ತೊಕ್ಕೊಟ್ಟು – ಪೆರ್ಮನ್ನೂರು ಪ್ರದೇಶದಲ್ಲಿ ಹೊಸ ಶಾಖೆಯನ್ನು ಅತೀ ಶೀಘ್ರದಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ.
ಹೊಸ ಶಾಖೆ ಸಂತ ಸೆಬಾಸ್ಟಿಯನ್ ಚರ್ಚ್ ಆಡಿಟೋರಿಯಂ ವಾಣಿಜ್ಯ ಕಟ್ಟಡದಲ್ಲಿ, ತೊಕ್ಕೊಟ್ಟು ಒಳಪೇಟೆಯಲ್ಲಿ ಕಾರ್ಯಾರಂಭ ಮಾಡುವುದಾಗಿ ಸಂಘ ತಿಳಿಸಿದೆ. (ಸಂಪರ್ಕ: 8762597057)
ಸಂಘದ ಇತಿಹಾಸ ಮತ್ತು ವಿಸ್ತರಣೆ:
1975ರ ಡಿಸೆಂಬರ್ನಲ್ಲಿ ಸಂತ ಕ್ರಿಸ್ಟೋಫರ್ ಅಸೋಸಿಯೇಶನ್ ಕಟ್ಟಡದಲ್ಲಿ ಸ್ಥಾಪನೆಯಾದ ಈ ಸಹಕಾರಿ ಸಂಘವು ಕಳೆದ 50 ವರ್ಷಗಳಲ್ಲಿ ಸದಸ್ಯರ ಸಹಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದೆ. ಮಂಗಳೂರು, ಬಂಟ್ವಾಳ, ಪುತ್ತೂರು, ಕಡಬ, ಸುಳ್ಯ, ಮುಡುಬಿದ್ರೆ, ಮೂಲ್ಕಿ ಸೇರಿದಂತೆ ಹಲವೆಡೆ ಸಹಕಾರ ಸಂಘಗಳ ಉಪನಿಬಂಧಕರ ಅನುಮತಿಯಿಂದ ಕಾರ್ಯಕ್ಷೇತ್ರ ವಿಸ್ತರಣೆಗೊಂಡಿದೆ.
ಸಂಘದ ಸೇವೆಗಳು:
ಸಂಘವು ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಬಿಕ್ಕಟ್ಟು ಸಾಲ, ಚಿನ್ನಾಭರಣ ಈಡಿನ ಮೇಲಿನ ಸಾಲ (11% ಬಡ್ಡಿ), ಆಟೋರಿಕ್ಷಾ/ಟೆಂಪೋ/ಕಾರ್/ದ್ವಿಚಕ್ರ ವಾಹನ ಖರೀದಿಗಾಗಿ ಸಾಲ, ಮನೆ ನಿರ್ಮಾಣ ಹಾಗೂ ಖರೀದಿಗಾಗಿ ಸ್ಥಿರಾಸ್ತಿ ಸಾಲ, ಎಲ್.ಐ.ಸಿ. ಭದ್ರತೆಯ ಮೇಲೆ ಸಾಲದ ಸೌಲಭ್ಯವನ್ನು ಒದಗಿಸುತ್ತಿದೆ.
ಠೇವಣಿ ಯೋಜನೆಗಳ ಬಡ್ಡಿ ದರಗಳು:
46–180 ದಿನಗಳು: 5%
181 ದಿನ–12 ತಿಂಗಳು: 7%
13 ತಿಂಗಳು ಮೇಲ್ಪಟ್ಟು: 8.5%
ಹಿರಿಯ ನಾಗರಿಕರು ಹಾಗೂ ಸಂಘ ಸಂಸ್ಥೆಗಳಿಗೆ ಹೆಚ್ಚುವರಿ 0.5% ಬಡ್ಡಿ ನೀಡಲಾಗುತ್ತದೆ.
ನಿರ್ವಹಣೆ:
ಸಂಘದ ಅಧ್ಯಕ್ಷತ್ವವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜ ವಹಿಸಿಕೊಂಡಿದ್ದಾರೆ. ಉಪಾಧ್ಯಕ್ಷರಾಗಿದ್ದು ಶ್ರೀ ಸಿರಿಲ್ ಡಿಸೋಜ, ಕಾರ್ಯದರ್ಶಿ ಶ್ರೀ ಪ್ರಮೋದ್ ವಾಸ್. ನಿರ್ದೇಶಕರಾಗಿ ಶ್ರೀ ಪಿ.ಪಿ. ವರ್ಗೀಸ್, ಶ್ರೀ ಅನೀಲ್ ಡಿಸೋಜ, ಶ್ರೀ ವಸಂತ ಶೆಟ್ಟಿ, ಶ್ರೀ ರಾಜೇಶ್, ಶ್ರೀ ಬಾಸ್ಕರ್ ರಾವ್, ಶ್ರೀ ಚಂದ್ರಶೇಖರ್ ಎಂ., ಶ್ರೀ ಓಲ್ವಿನ್ ಗೊ. ಪಿಂಟೊ, ಶ್ರೀ ಚಂದ್ರಶೇಖರ ಕೆ., ಶ್ರೀಮತಿ ವಿದ್ಯ ವಿನಯ ತೋರಸ್, ಶ್ರೀಮತಿ ಬಬಿತ ಡಿಸೋಜ, ಶ್ರೀ ಜೇಮ್ಸ್ ಜೆ. ಮಾಡ್ತಾ, ಶ್ರೀ ಎಡ್ವರ್ಡ್ ಅಲ್ವಿನ್ ಫರ್ನಾಂಡಿಸ್, ಶ್ರೀ ಶೌವಾದ್ ಎಂ., ಶ್ರೀ ವಿಶ್ವನಾಥ ಹಾಗೂ ಶ್ರೀ ಜಮಾಲುದ್ದೀನ್ ಕದಿಕೆ ಸೇವೆ ಸಲ್ಲಿಸುತ್ತಿದ್ದಾರೆ.
ಹೊಸ ಶಾಖೆಯ ಉದ್ಘಾಟನೆಯು ಸಮೀಪದಲ್ಲೇ ನಡೆಯಲಿದ್ದು, ಸಂಘದ ಸದಸ್ಯರಾಗಿ ನೊಂದಾಯಿಸಲು ಹಾಗೂ ಅದರ ಸೇವೆಗಳಿಂದ ಲಾಭ ಪಡೆಯಲು ತೊಕ್ಕೊಟ್ಟು–ಪೆರ್ಮನ್ನೂರು ಪ್ರದೇಶದ ಚಾಲಕರಿಗೆ ಸಂಘ ಕೋರಿಕೆ ಮಾಡಿದೆ. ಸಂಸ್ಥೆಯ ಸೇವೆಗಳಿಂದ ಚಾಲಕರ ಆರ್ಥಿಕ ಶಕ್ತಿ ಹೆಚ್ಚಿಸಲು ಸಹಕಾರ ನೀಡಲು ಸಂಘ ಕಳಕಳಿಯಾಗಿ ಆಹ್ವಾನಿಸಿದೆ.
