Site icon Ullalavani

ಮಲೇಷಿಯಾ ಸ್ಪೀಕರ್‌ರನ್ನು ಭೇಟಿಯಾದ ಕರ್ನಾಟಕದ ಸ್ಪೀಕರ್ ಯು.ಟಿ.ಖಾದರ್

ಮಲೇಷಿಯಾ ಪ್ರವಾಸದಲ್ಲಿರುವ ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ರವರು ಮಲೇಷ್ಯಾ ಜನ ಪ್ರತಿನಿಧಿಗಳ ಸಭೆಯ ಸ್ಪೀಕರ್ (Speaker Of Dewan Rakyat) ವೈಬಿ ತಾನ್ ಶ್ರೀ ದಾತೋ (ಡಾ.) ಜೋಹರಿ ಬಿನ್ ಅಬ್ದುಲ್ ರವರನ್ನು ಮಲೇಷಿಯಾ ಪಾರ್ಲಿಮೆಂಟ್ ಹೌಸ್ ನಲ್ಲಿ ಭೇಟಿಯಾಗಿ ಪ್ರಜಾ ಪ್ರಭುತ್ವದ ಪ್ರಸಕ್ತ ರಾಜಕೀಯ ಸನ್ನಿವೇಶಗಳ ಕುರಿತು ಚರ್ಚೆ ನಡೆಸಿದರು.

ಮುಂದಿನ ದಿನಗಳಲ್ಲಿ ಮಲೇಷಿಯಾ ಜನ ಪ್ರತಿನಿಧಿಗಳು ಹಾಗೂ ಕರ್ನಾಟಕ ಶಾಸಕರ ಮದ್ಯೆ ಎರಡು ದೇಶದ ಪ್ರಜಾ ಪ್ರಭುತ್ವ ಸಂಸದೀಯ ವ್ಯವಹಾರಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.

Exit mobile version