ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಿಡ್ನಿ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ 24ರ ಹರೆಯದ ಯುವಕನೋರ್ವ ನಿನ್ನೆ ಮೃತಪಟ್ಟ ಘಟನೆ ದೇರಳಕಟ್ಟೆಯ ಯೆನೆಪೋಯದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ತಂಡವೊಂದು ದಾಂಧಲೆ ನಡೆಸಿ ಇಬ್ಬರು ವೈದ್ಯರು, ಇಬ್ಬರು ಬ್ರದರ್ಸ್ ಹಾಗೂ ಇಬ್ಬರು ದಾದಿಯರಿಗೆ ಹಲ್ಲೆ ನಡೆಸಿರುವ ಘಟನೆ ನಡೆದರೆ, ಇನ್ನೊಂದೆಡೆ ವೈದ್ಯರು ಯುವಕನ ಹೆತ್ತವರಿಗೆ ಹಲ್ಲೆ ನಡೆಸಿದ್ದಾರೆಂದು ತಂಡ ಆರೋಪಿಸಿದೆ.
ಕೋಟೆಕಾರು ಬೀರಿಯ ಮ್ಯಾರೇಜ್ ಹಾಲ್ ಬಳಿಯ ನಿವಾಸಿ ಮಹಮ್ಮದ್ ಫೈಝಲ್ (24) ಮೃತ ಯುವಕ. ಎಂಟು ತಿಂಗಳ ಹಿಂದೆ ಗಲ್ಫ್ ರಾಷ್ಟ್ರಕ್ಕೆ ತೆರಳಿದ್ದ ಈತ ಕಿಡ್ನಿ ಸಂಬಂಧಿ ಕಾಯಿಲೆಗೆ ತೊಂದರೆಗೀಡಾದ ನಂತರ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ಬಳಿಕ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಫೈಝಲ್ಗೆ ಡಯಾಲಿಸಿಸ್ಗೆ ಸೂಚಿಸಿದ್ದರು. ಅದರಂತೆ ನಿರಂತರ ಡಯಾಲಿಸಿಸ್ ನಡೆಸುತ್ತಾ ಬಂದಿದ್ದ ಫೈಝಲ್ ನ ಆರೋಗ್ಯ ನಿನ್ನೆ ಗಂಭೀರ ಸ್ಥಿತಿಗೆ ತಲುಪಿತ್ತು.
ರೋಗಿಯ ಡಯಾಲಿಸಿಸ್ ನಿರಂತರವಾಗಿ ನಡೆಯುತಿತ್ತು. ಆದರೆ ನಿನ್ನೆ ಸ್ಥಿತಿ ಚಿಂತಾಜನಕ ಹಂತವನ್ನು ತಲುಪಿತ್ತು. ಅದಕ್ಕಾಗಿ ಸಂಬಂಧಿಕರಿಂದ ರಕ್ತವನ್ನು ಪಡೆದು ಎರಡು ಬಾಟಲಿಯಷ್ಟು ನೀಡಲಾಗಿತ್ತು. ಇಂತಿಷ್ಟು ಸಮಯದ ನಡುವೆ ರಕ್ತ ಕೊಡಬೇಕು. ಆದ್ದರಿಂದ ಎರಡು ಬಾಟಲಿಗಳು ಉಳಿದಿತ್ತು. ಇದನ್ನೇ ತಪ್ಪಾಗಿ ಪರಿಗಣಿಸಿ ರೋಗಿಯ ಸಂಬಂಧಿಕರು ಹಲ್ಲೆ ನಡೆಸಿದ್ದಾರೆಂದು ವೈದ್ಯರು ಪತ್ರಿಕೆಗೆ ತಿಳಿಸಿದ್ದಾರೆ.
ಡಾ. ಪ್ರಶಾಂತ್ , ಡಾ.ರೋಷನ್
