ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಮೂಳೂರು ಬಂಗಾರುಗುಡ್ಡೆ ನಿವಾಸಿಗಳು ದಲಿತ ಕಾಲನಿಗೆ ಹೋಗುವ ರಸ್ತೆ ದುರಸ್ತಿಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
5 ದಶಕಗಳ ಹಳೆಯದಾದ ದಲಿತ ಕಾಲನಿ ರಸ್ತೆ ತೀವ್ರವಾಗಿ ಕಡೆಗಣಿಸಲಾಗಿದೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಗರಿಕರ, ದಲಿತರ ಕೂಗು, ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ದಲಿತ ಕಾಲನಿಯಲ್ಲಿ ವೃದ್ದರು, ಬುದ್ಧಿಮಾಂದ್ಯರು, ಅಂಗವಿಕಲ ಮಕ್ಕಳಿದ್ದಾರೆ. ಕಿಡ್ನಿ ಸಂಬಂಧಿ ತೊಂದರೆಗೊಳಪಟ್ಟ ರೋಗಿಗಳಿದ್ದಾರೆ. ಇವರನ್ನು ಆಸ್ಪತ್ರೆಗೆ ಶುಶ್ರೂಷೆಗೆ ಕೊಂಡೊಯ್ಯಲು ಒಂದೇ ರಸ್ತೆ ಇದೆ. ಅದೂ ತೀರಾ ನಾದುರಸ್ತಿಯಲ್ಲಿರುವುದರಿಂದ ರಿಕ್ಷಾ ಚಾಲಕರು ಬರಲು ಹಿಂಜರಿಯುತ್ತಿದ್ದಾರೆ. ಒಂದು ವೇಳೆ ಬಂದರೂ ದುಬಾರಿ ದ್ವಿಗುಣ ಬಾಡಿಗೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ಸಂದರ್ಭ ಶಿವಪ್ರಸಾದ್ ಆಳ್ವ ನರಿಗುತ್ತು, ಜಲ್ಲಿ ಅಬೂಬಕರ್, ರಾಮ ಬಂಗಾರುಗುಡ್ಡೆ, ದಿವ್ಯರಾಜ್ ಆರಂತಾಡಿ, ಬಾಳೆಪುಣಿ ಪಂಚಾಯಿತಿ ಸದಸ್ಯ ಅಬ್ಬಾಸ್, ಸತೀಶ್ ನಡಿಗುತ್ತು, ಅಂಗನವಾಡಿ ಕಾರ್ಯಕರ್ತೆ ಉಷಾ, ಅಂಗಾರ ಭಟ್ರಕೋಡಿ, ಜಾನಕಿ ಬಂಗಾರುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.