ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಆಡಂಕುದ್ರು: ಇಸ್ಕಾನ್ ಸಂಸ್ಥೆಯ ಅನುಯಾಯಿ ಬೆಂಗಳೂರು ಮೂಲದ ಎಂ.ಟೆಕ್ ಪದವೀಧರನ ಕೊಳೆತ ಶವ ಸಂಶಯಾಸ್ಪದವಾಗಿ ಉಳ್ಳಾಲ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಆಡಂಕುದ್ರು ಬಳಿ ಭಾನುವಾರ ಮಧ್ಯಾಹ್ನ ವೇಳೆ ಪತ್ತೆಯಾಗಿದೆ. ಇದೊಂದು ಕೊಲೆ ಎಂಬ ಆರೋಪವನ್ನು ಮೃತರ ಕುಟುಂಬ ಮೂಲಗಳು ಮಾಡಿ ಉಳ್ಳಾಲ ಪೊಲೀಸರಿಗೆ ಮಂಗಳೂರಿನ ಇಸ್ಕಾನ್ ಮುಖ್ಯಸ್ಥರ ವಿರುದ್ಧ ದೂರು ನೀಡಿದ್ದಾರೆ.
ಬೆಂಗಳೂರಿನ ಜಿಂದಾಲ್ ಬಳಿಯ ತಿಪ್ಪೇನಹಳ್ಳಿ ನಿವಾಸಿ ಕೆ.ನರಸಿಂಹ ಮೂರ್ತಿ ಮತ್ತು ಸರಸ್ವತಿಯಮ್ಮ ದಂಪತಿ ಪುತ್ರ ರವಿ ಕುಮಾರ್ (25) ಮೃತದೇಹ ಸಂಶಾಯಸ್ಪದವಾಗಿ ಪತ್ತೆಯಾಗಿದೆ. ಮೃತದೇಹದ ಕುತ್ತಿಗೆಗೆ ಮೊಬೈಲಿನ ಚಾರ್ಜರ್ ಬಿಗಿದು ಕೈಯಲ್ಲಿದ್ದ ಚೀಲದಲ್ಲಿ ಕಲ್ಲು ಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕೊಲೆ ಆರೋಪ ಮಾಡಿರುವ ರವಿಕುಮಾರ್ ಕುಟುಂಬಸ್ಥರು ಇಸ್ಕಾನ್ ಸಂಸ್ಥೆಯ ಮಂಗಳೂರಿನ ಮುಖ್ಯಸ್ಥ ತಾರುಣ್ಯಸಾಗರ ದಾಸ್ ವಿರುದ್ಧ ಕೊಲೆ ಆರೋಪವನ್ನು ಮಾಡಿದ್ದಾರೆ.
ಬೆಂಗಳೂರಿನ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಮೆಕಾನಿಕ್ನಲ್ಲಿ ಬಿ.ಇ. ಶಿಕ್ಷಣ ಪಡೆದ ಬಳಿಕ ಸುರತ್ಕಲ್ನ ಎನ್ಐಟಿಕೆಯಲ್ಲಿ ಮ್ಯಾನುಪೇಕ್ಚರಿಂಗ್ ವಿಭಾಗದಲ್ಲಿ ಎಂಟೆಕ್ ಶಿಕ್ಷಣ ಪಡೆದಿದ್ದು, ಈ ಸಂದರ್ಭದಲ್ಲಿ ತಾಂತ್ರಿಕ ವಿಶ್ವವಿದ್ಯಾನಿಲಯಕ್ಕೆ ಟಾಪರ್ ಆಗಿದ್ದರು ಎಂದು ರವಿ ಸಹೋದರ ನರೇಂದ್ರ ಮಾಹಿತಿ ನೀಡಿದರು.
ಧಾರ್ಮಿಕ ಆಸಕ್ತಿ :
ಎಂಟೆಕ್ ಪದವೀಧರನಾಗಿದ್ದರೂ ಧಾರ್ಮಿಕತೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ರವಿ ಕುಮಾರ್ ಹೊಂದಿದ್ದರು. ಅದಕ್ಕೆ ಪೂರಕವಾಗಿ ಸುರತ್ಕಲ್ ನ ಎನ್ ಐ ಟಿಕೆಯಲ್ಲಿ ಎಂಟೆಕ್ ಪದವಿ ಪಡೆಯುವ ಸಂದರ್ಭ ಇಸ್ಕಾನ್ ಅನುಯಾಯಿಗಳ ಪರಿಚಯವಾಗಿ, ಇವರನ್ನು ಅನುಯಾಯಿಯನ್ನಾಗಿಸಿತ್ತು. ಶಿಕ್ಷಣ ಮುಗಿಸಿದ ಕಳೆದ ನಾಲ್ಕು ವರ್ಷಗಳಿಂದ ಇಸ್ಕಾನ್ ನಲ್ಲಿಯೇ ಪೂರ್ಣಾವಧಿಯಾಗಿ ತೊಡಗಿಸಿಕೊಂಡಿದ್ದರು.
ಒಂದು ವಾರದಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ :
ರವಿ ಕುಮಾರ್ ಕಳೆದ ನಾಲ್ಕು ವರ್ಷಗಳಿಂದ ಇಸ್ಕಾನ್ ನಲ್ಲಿ ಪೂರ್ಣಾವಧಿಯಾಗಿ ತೊಡಗಿಸಿಕೊಂಡ ಬಳಿಕ ಮಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ಬೆಂಗಳೂರಿಗೆ ಪ್ರವಚನಕ್ಕೆಂದು ಹೋಗುವ ಸಂದರ್ಭ ಮನೆಗೆ ಭೇಟಿ ನೀಡುತ್ತಿದ್ದರು. ಕಳೆದ ಮೇ. ತಿಂಗಳಲ್ಲಿ ಜಾಗದ ವಿಚಾರಕ್ಕೆ ಸಂಬಂ„ಸಿದಂತೆ ಕುಟುಂಬದ ಸದಸ್ಯರೆಲ್ಲರು ಒಟ್ಟಾಗಿದ್ದೆವು. ಆದರೆ ವಾರಕ್ಕೆ ಎರಡರಿಂದ ಮೂರು ಬಾರಿ ದೂರವಾಣಿ ಮೂಲಕ ಮಾತನಾಡುತ್ತಿದ್ದರು ಎನ್ನುವ ಅವರು ಕಳೆದ ಒಂದು ವಾರದಿಂದ ಯಾವುದೇ ದೂರವಾಣಿ ಸಂಪರ್ಕ ಸಿಕ್ಕಿರಲಿಲ್ಲ . ಹೆಚ್ಚಾಗಿ ಅವರು ಪ್ರವಚನ ನೀಡಲು ಹೊರಗಡೆ ಹೋದಾಗ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಆ ಹಿನ್ನಲೆಯಲ್ಲಿ ನಾವು ಸುಮ್ಮನಿದ್ದೆವು ಎಂದು ನರೇಂದ್ರ ತಿಳಿಸಿದರು.
ಕಾಲೇಜ್ ಸಹಪಾಠಿಯಿಂದ ದೂರವಾಣಿ :
ರವಿ ವಾರದಿಂದ ಸಂಪರ್ಕಕ್ಕೆ ಇಲ್ಲ ಇಸ್ಕಾನ್ನಲ್ಲಿ ಕೇಳಿದರೆ ಮಾಹಿತಿ ಇಲ್ಲ ಎಂದು ರವಿ ಅವರ ಕ್ಲಾಸ್ಮೇಟ್ ಕಳೆದ ಶುಕ್ರವಾರ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಮಾಹಿತಿಯಂತೆ ಮಂಗಳೂರಿಗೆ ಆಗಮಿಸಿದ್ದ ನಮಗೆ ಇಸ್ಕಾನ್ನಿಂದ ಸರಿಯಾದ ಮಾಹಿತಿ ನೀಡಿರಲಿಲ್ಲ. ರವಿ ಕಾಣೆಯಾದ ವಿಚಾರ ನಮಗೆ ತಿಳಿದ ಬಳಿಕ ಇಸ್ಕಾನ್ನಿಂದ ಶರತ್ ವಿಹಾರಿ ದಾಸ್ ಎಂಬವರು ನಮಗೆ ರವಿ ಕಾಣೆಯಾಗಿರುವ ವಿಚಾರದಲ್ಲಿ ಮಾಹಿತಿ ನೀಡಿದರು. ಆದರೆ ಇಸ್ಕಾನ್ ನಮಗೆ ಯಾವುದೇ ಸತ್ಯಾಂಶವನ್ನು ಬಾಯಿ ಬಿಟ್ಟಿಲ್ಲ ಎನ್ನುತ್ತಾರೆ ನರೇಂದ್ರ.
ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರೇ ಕೊಲೆ ಮಾಡಿದ್ದಾರೆ : ರವಿಯನ್ನು ಹುಡುಕಿಕೊಂಡು ಮಂಗಳೂರಿಗೆ ಬಂದಾಗ ಇಸ್ಕಾನ್ ಸಂಸ್ಥೆಯವರು ನಮಗೆ ಸರಿಯಾದ ಮಾಹಿತಿ ನೀಡಿಲ್ಲ. ನಾವು ಆತ ಉಡುಪಿ ಕಡೆ ಹೋಗಿರುವ ಸಾಧ್ಯತೆಯ ಬಗ್ಗೆ ಹುಡುಕಾಡಿದ್ದೆವು. ಆದರೆ ಇಂದು ರವಿ ನೇತ್ರಾವತಿ ನದಿಯಲ್ಲಿ ಶವವಾಗಿ ಸಿಕ್ಕಿದ್ದಾನೆ ಎಂದು ಇಸ್ಕಾನ್ ಮುಖ್ಯಸ್ಥರು ಮಾಹಿತಿ ನೀಡಿದ್ದು, ನಾವು ಕೇಳಿದ ಪ್ರಶ್ನೆಗಳಿಗೆ ಉಡಾಫೆಯಾಗಿ ವರ್ತಿಸುತ್ತಿದ್ದು ನಮಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ರವಿ ಕುಮಾರ್ ಸಾವಿಗೆ ಇಸ್ಕಾನ್ ಸಂಸ್ಥೆ ಮತ್ತು ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರೇ ಹೊಣೆ ಎಂದು ನರೇಂದ್ರ ತಮ್ಮ ದು:ಖವನ್ನು ವ್ಯಕ್ತಪಡಿಸಿದರು.
ಕಮಿಷನರ್ ಕಾಲು ಹಿಡಿದ ರವಿ ತಂದೆ :
ರವಿ ಮೃತದೇಹದ ಮರಣೋತ್ತರ ಪರೀಕ್ಷೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ತರಲಾಗಿದ್ದು, ಅಲ್ಲಿಗೆ ಆಗಮಿಸಿದ್ದ ಕಮಿಷನರ್ ಮುರುಗನ್ ಅವರ ಕಾಲಿಗೆ ಎರಗಿದ ರವಿ ಕುಮಾರ್ ತಂದೆ ನರಸಿಂಹ ಮೂರ್ತಿ ನಮ್ಮ ಮಗನ ಸಾವು ಸಂಶಯಾಸ್ಪದವಾಗಿದ್ದು, ಇಸ್ಕಾನ್ ಸಂಸ್ಥೆಯವರು ಕೊಲೆ ಮಾಡಿಸಿದ್ದಾರೆ. ನಮಗೆ ನ್ಯಾ ಕೊಡಿಸಿ ಎಂದು ಅಲವತ್ತುಕೊಂಡರು. ಈ ಸಂದರ್ಭದಲ್ಲಿ ಸೂಕ್ತ ತನಿಖೆಯ ಭರವಸೆಯನ್ನು ರವಿ ಕುಟುಂಬಕ್ಕೆ ನೀಡಿದರು.
ಕುತ್ತಿಗೆಗೆ ಚಾರ್ಜರ್ ವಯರ್ನಿಂದ ಬಿಗಿಯಲಾಗಿತ್ತು :
ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾದಾಗ ರವಿಕುಮಾರ್ ಅವರ ಕುತ್ತಿಗೆಗೆ ಚಾರ್ಜರ್ ವಯರ್ನಿಂದ ಬಿಗಿಯಲಾಗಿತ್ತು. ರವಿ ಕುಮಾರ್ ಅವರ ಬ್ಯಾಗ್ಗೆ ಕಲ್ಲು ತುಂಬಿಸಿದ್ದು, ಆಡಂಕುದ್ರು ನಿವಾಸಿ ಕ್ಲೆಮೆಂಟ್ ಅವರು ಮೀನುಗಾರಿಕೆಗೆಂದು ನದಿ ದಡಕ್ಕೆ ಬಂದಾಗ ಮೃತದೇಹ ಕಂಡು ಬಂದಿದ್ದು, ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.