ಉಳ್ಳಾಲ: ಮಹಿಳೆಯರೇ ಸಂಘಟನಾತ್ಮಕವಾಗಿ, ಒಗ್ಗಟ್ಟಿನಿಂದ ಕೆಲಸ ಮಾಡುವುದು ಸುಲಭವಲ್ಲ, ಇಂತಹ ಸಂದರ್ಭದಲ್ಲಿ ನಿರಂತರ ಸಾಮಾಜಿಕವಾಗಿ ಕಾರ್ಯನಿರ್ವಹಿಸುತ್ತಾ, ಸ್ವಂತ ಕಟ್ಟಡದ ಮೂಲಕ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ದುರ್ಗಾವಾಹಿನಿ ಮಹಿಳಾ ಮಂಡಲದ ಮಹಿಳೆಯರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಜರಗಿದ ದುರ್ಗಾವಾಹಿನಿ ಮಹಿಳಾ ಮಂಡಲ ಕುತ್ತಾರು ಇದರ ಬೆಳ್ಳಿಹಬ್ಬ ಮತ್ತು ಸ್ವಂತ ಕಟ್ಟಡದ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲವನ್ನೂ ಮೀರಿ ಸಮಾಜದಲ್ಲಿ ಕೆಲಸವನ್ನು ನಿರ್ವಹಿಸುವುದು ನಾಯಕತ್ವ. ಅಂತಹ ನಾಯಕತ್ವವನ್ನು ದುರ್ಗಾವಾಹಿನಿಯ ಬಹುತೇಕ ಸದಸ್ಯರು ಪೂರೈಸಿದ್ದಾರೆ. ರಾಜಕೀಯ, ಸಾಂಸ್ಕೃತಿಕ, ದೇವಸ್ಥಾನ, ಉತ್ಸವ ಸಮಿತಿಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಮೂಲಕ ನಾಯಕತ್ವವನ್ನು ಬೆಳೆಸಿಕೊಂಡು ದುರ್ಗಾವಾಹಿನಿ ಮಂಡಲ ಆದರ್ಶವಾದ ಸಂಘಟನಾತ್ಮಕ ಕೆಲಸವನ್ನು ಮಾಡಿದೆ ಎಂದರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಮಾತನಾಡಿ, ಸರಕಾರ ಪಂಚ ಗ್ಯಾರಂಟಿ ಯೋಜನೆಯನ್ನು ಮಹಿಳೆಯರಿಗೆ ನೀಡಿದೆ. ತಾಯಿ ಕೈಗೆ ಹಣ ಸಿಕ್ಕರೆ ಅದನ್ನು ಸಂಸಾರಕ್ಕಾಗಿ ಸಮರ್ಪಕವಾಗಿ ವಿನಿಯೋಗಿಸುತ್ತಾರೆ ಅನ್ನುವ ಉದ್ದೇಶದೊಂದಿಗೆ ಜಾರಿಗೊಳಿಸಲಾಗಿದೆ. ಯೋಜನೆ ಬಾರದೇ ಇದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು, ಅರ್ಹರಿಗೆ ಸಿಗುವಂತೆ ಮಾಡಲು ದುರ್ಗಾವಾಹಿನಿ ಮಂಡಲದ ಸದಸ್ಯರು ಸಹಕರಿಸಬೇಕು . ಮಕ್ಕಳಿಗೆ ವಿದ್ಯೆ ನೀಡಿದಲ್ಲಿ ಕೊನೆಯವರೆಗೂ ಅವರಿಗೆ ದಾರಿದೀಪವಾಗಲಿದೆ. ಅದನ್ನು ಪೂರೈಸುವ ಕಾರ್ಯವನ್ನು ಎಲ್ಲಾ ತಾಯಂದಿರು ಮಾಡಬೇಕಿದೆ ಎಂದರು.
ಕಾರ್ಯಕ್ರಮವನ್ನು ಕೃಷಿಕೆ, ಹಿರಿಯ ಮೀನಾಕ್ಷಿ ಸೀತಾರಾಮ ಶೆಟ್ಟಿ ಮೇಗಿನಮನೆ ಪಿಲಾರ್ ಇವರು ಬೆಳ್ಳಿಹಬ್ಬದ ಪ್ರಯುಕ್ತ ಬೆಳ್ಳಿ ಪಾತ್ರೆಯಲ್ಲಿ ಬೆಳ್ಳಿ ಕಲಶಕ್ಕೆ ಹಾಲನ್ನೆರೆಯುವ ಮೂಲಕ ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಾರ್ಖಂಡ್ ನಲ್ಲಿ ನಡೆಯಲಿರುವ ರಾಷ್ಟçಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಬಬ್ಬುಕಟ್ಟೆ ಹಿ.ಪ್ರಾ.ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಪೂಜಾರಿ , ಹಾಗೂ ದುರ್ಗಾವಾಹಿನಿ ಮಹಿಳಾ ಮಂಡಲ 25 ವರ್ಷಗಳನ್ನು ಪೂರೈಸಲು ಸಹಕರಿಸಿದ ಪ್ರಧಾನ ಸಲಹೆಗಾರ, ಸ್ಥಾಪಕ ಪವಿತ್ರ ಕುಮಾರ್ ಗಟ್ಟಿ , ಜಗನ್ನಾಥ್ ಸಾಲ್ಯಾನ್, ರಾಜೇಶ್ ಅತ್ತಾವರ, ಪುರೋಹಿತ ರಾಘವೇಂದ್ರ ಹೊಳ್ಳ ಇವರನ್ನು ಸನ್ಮಾನಿಸಲಾಯಿತು. ಹಿರಿಯರಾದ ನಳಿನಿಯಮ್ಮ, ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ವೇದ ಪವಿತ್ರ ಗಟ್ಟಿ, ಶಶಿಕಲಾ, ತಂಗಮ್ಮ, ಧನಲಕ್ಷಿö್ಮÃ ಗಟ್ಟಿ , ಸಂಘದ ಹಿರಿಯ ಸದಸ್ಯರುಗಳಾದ ಶಾರದಮ್ಮ, ಪದ್ಮಾವತಿ, ಆಶಾಲತಾ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು.
ದಿ ಮೈಸೂರ್ ಇಲೆಕ್ಟಿçಕಲ್ಸ್ ನಿಗಮದ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ , ತುಳು ನಾಟಕ ಹಾಗೂ ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ , ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ರಾಜೇಶ್ ಅತ್ತಾವರ, ರತ್ನ ಎಜ್ಯುಕೇಷನ್ ಟ್ರಸ್ಟ್ ನ ಸೌಮ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು , ಯಕ್ಷಧ್ರುವ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಬಿ.ಆಳ್ವ , ಮೆಸ್ಕಾಂ ಕಿರಿಯ ಸಹಾಯಕ ಅಭಿಯಂತರ ನಿತೇಶ್ ಹೊಸಗದ್ದೆ , ಪುರೋಹಿತ ರಾಘವೇಂದ್ರ ಹೊಳ್ಳ , ಮಂಡಲದ ಸ್ಥಾಪಕರು ಹಾಗೂ ಗೌರವ ಸಲಹೆಗಾರ ಪವಿತ್ರ ಕುಮಾರ ಗಟ್ಟಿ
ದುರ್ಗಾವಾಹಿನಿ ಕಟ್ಟಡ ಸಮಿತಿ ಅಧ್ಯಕ್ಷ ಜಗನ್ನಾಥ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿದ್ದರು. ಇದೇ ವೇಳೆ ಮಹಿಳಾ ಸಂಘಗಳಿಗೆ ಹಮ್ಮಿಕೊಳ್ಳಲಾದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮಾಜಿ ಶಾಸಕ ಜಯರಾಮ ಶೆಟ್ಟಿ, ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್, ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನವ್ಯಾ ಬಾಬುರಾಜ್ ಪ್ರಾರ್ಥಿಸಿದರು. ದುರ್ಗಾವಾಹಿನಿ ಮಹಿಳಾ ಮಂಡಲದ ಅಧ್ಯಕ್ಷೆ ಸುನಿತಾ ಗಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಶಸ್ತಿ ವಿಜೇತರ ವಿವರವನ್ನು ಆಶ¯ತಾ ಕುಶಾಲಪ್ಪ ನೀಡಿದರು. ಜಿ.ಪಂ ಮಾಜಿ ಸದಸ್ಯೆ ಧನಲಕ್ಷಿö್ಮÃ ಗಟ್ಟಿ ನಿರೂಪಿಸಿದರು. ಪ್ರ.ಕಾ ಶಶಿಕಲಾ ಗಟ್ಟಿ ವಾರ್ಷಿಕ ವರದಿ ವಾಚಿಸಿದರು. ಶ್ರುತ ಗಟ್ಟಿ ವಂದಿಸಿದರು.
ಸಾAಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ಹಾಗೂ ಶಿವದೂತೆ ಗುಳಿಗೆ ಇದರ 666ನೇ ನಾಟಕ ಪ್ರದರ್ಶನ ಜರಗಿತು.
