Site icon Ullalavani

ಕಿಟೆಲ್ ಪದವಿಪೂರ್ವ ಕಾಲೇಜಿನಲ್ಲಿ ತುಳು ಸಂಸ್ಕøತಿ ಬೊಕ್ಕ ಪರ್ಬೊಲೆನ ಪೊಲಬು

 

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಗೋರಿಗುಡ್ಡ: ತುಳು ಬದುಕು ಎಲ್ಲರಿಗೂ ಹಂಚಿಹೋಗಬೇಕು. ಶಾಲೆಯಲ್ಲಿ ತುಳುವಿನ ಪರಂಪರೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ತುಳು ಸಂಸ್ಕøತಿಯನ್ನು ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದು ಕುಳಾಯಿ ಶ್ರೀ ವೆಂಕಟ್ರಮಣ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಕೆ.ಪೇಜಾವರ ಹೇಳಿದ್ದಾರೆ.

ಅವರು ಗೋರಿಗುಡ್ಡ ಕಿಟೆಲ್ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ` ತುಳು ಸಂಸ್ಕøತಿ ಬೊಕ್ಕ ಪರ್ಬೊಲೆನ ಪೊಲಬು ಪಿರಾಕ್‍ದ ವಸ್ತುಲೆನ ಪ್ರದರ್ಶನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

ಈ ಸಂದರ್ಭ ಕೊಣಾಜೆ ಪಂಚಾಯಿತಿ ಸದಸ್ಯೆ ಮುತ್ತು.ಎನ್.ಶೆಟ್ಟಿ ಕೊಣಾಜೆ , ಮಾಜಿ ಸದಸ್ಯ ಹಾಗೂ ಕೃಷಿಕ ಸುದರ್ಶನ ಭಟ್, ಉಳ್ಳಾಲ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸುಹಾಸಿನಿ ಬಬ್ಬುಕಟ್ಟೆ, ಗಂಜಿಮಠದ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ, ಕಿಟೆಲ್ ಪ್ರೌಢಶಾಲೆ ಮುಖ್ಯಶಿಕ್ಷಕಿ ಡಯಾನ ಜ್ಯೋತಿ ಫ್ರ್ಯಾಂಕ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ವಿಠಲ್ ಕಾರ್ಯಕ್ರಮ ನಿರ್ವಹಿಸಿದರು.

ಇದೇ ಸಂದರ್ಭ ಹಿಂದಿನ ಕಾಲದ ವಸ್ತುಗಳ ಪ್ರದರ್ಶನ ಮತ್ತು ತುಳು ಸಂಸ್ಕøತಿಯ ನೃತ್ಯ ಪ್ರದರ್ಶನ ವಿದ್ಯಾರ್ಥಿಗಳಿಂದ ನಡೆಯಿತು.

Exit mobile version