
ತಲಪಾಡಿ : ತಲಪಾಡಿಯ ಶಾರದ ವಿದ್ಯಾನಿಕೇತನ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2024-25ನೇ ಸಾಲಿನ ಇಂಟರ್ಯಾಕ್ಟ್ ಸಂಘದ ಅಧ್ಯಕ್ಷನಾಗಿ ವಿದ್ಯಾರ್ಥಿ ಪ್ರತಿನಿಧಿ ಧರ್ಮಾದಿತ್ಯ ಆಯ್ಕೆಗೊಂಡಿದ್ದು, ಪದಗ್ರಹಣದ ಸವಿನೆನಪಿಗಾಗಿ ನೂತನ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಶಾಲಾ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ವಿಶೇಷ ಸಂದೇಶ ನೀಡಿದರು.
ರೋಟರಿ ಕ್ಲಬ್ನ ಮಂಗಳೂರು ವಿಭಾಗದ ಅಧ್ಯಕ್ಷರಾದ ರೋ. ದೇವರಾಜ್ ಫೆರ್ನಾಂಡಿಸ್ ನೂತನ ಅಧ್ಯಕ್ಷರ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೊ. ಕೆವಿನ್ ವಾಸ್, ರೊ. ಪಾರ್ವತಿ, ಶಾಲಾ ಪ್ರಾಂಶುಪಾಲ ಮೋಹನ್, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಇಂಟರಾಕ್ಟ್ ಸಂಘದ ಸಂಯೋಜಕಿ ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಹರ್ಷಿತಾ ಶೆಟ್ಟಿ ವಂದಿಸಿದರು.