
ಕುತ್ತಾರು: ಬಿಜೆಪಿ ರಾಜ್ಯ ಫಲಾನುಭವಿ ಪ್ರಕೋಷ್ಠದ ಸದಸ್ಯೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ, ಮಂಗಳೂರು ವಿಶ್ವವಿದ್ಯಾಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸದಸ್ಯೆಯಾಗಿರುವ ಧನಲಕ್ಷ್ಮಿ ಗಟ್ಟಿ ಇವರ ಮುನ್ನೂರು ಬೊಳ್ಳಿ ಬೊಲ್ಪು ಭಂಡಾರ ಬೈಲ್ ಗುಡ್ಡೆಯ ಮನೆಯಲ್ಲಿ ಬೆಳೆಸಲಾದ ಗೆಣಸು ಗದೆಯ ಸ್ವರೂಪವನ್ನು ಪಡೆದುಕೊಂಡಿದೆ. ದೊಡ್ಡ ಗಾತ್ರದಲ್ಲಿ ಬೆಳೆದಿರುವ ಈ ಗೆಣಸು 1 ಕೆ.ಜಿ. ಯಿಂದ ಅಧಿಕ ತೂಕವನ್ನು ಹೊಂದಿದೆ.