Site icon Ullalavani

ಸರಕಾರಿ ಕಾರ್ಯಕ್ರಮಕ್ಕೆ ಪ್ರಧಾನಿ ಭೇಟಿ ಟ್ರಾಫಿಕ್‌ ಸಮಸ್ಯೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ  : ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ

UN networks

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಧಿಕೃತ ಸರ್ಕಾರಿ ‌ಕಾರ್ಯಕ್ರಮಕ್ಕೆ‌ ಬರ್ತಾ ಇದಾರೆ. ಈ ಸಂಬಂಧ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಎನ್.ಎಂಪಿಎ ನೇತೃತ್ವದಲ್ಲಿ ತಯಾರಿ ಆಗಿದೆ
ಎನ್ಎಂಪಿಎ ಸೇರಿ ಹಲವು ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ‌ನೆರವೇರಿಸಲಿದ್ದಾರೆ. ಕೊಚ್ಚಿನ್ ನಿಂದ ಮಂಗಳೂರಿಗೆ ಆಗಮಿಸಿ ಸಮಾವೇಶದಲ್ಲಿ ‌ಪಾಲ್ಗೊಳ್ತಾರೆ ಎಂದು ದ.ಕ ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಈ ಸಮಾವೇಶದಲ್ಲಿ ‌ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳು ಇರ್ತಾರೆ. ಸುಮಾರು ಒಂದು ‌ಲಕ್ಷಕ್ಕೂ ಅಧಿಕ ಜನರು ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಸೇರ್ತಾರೆ.
ಹಲವು ಭದ್ರತೆ ಹಿತದೃಷ್ಟಿಯಿಂದ ಹಲವು ಕ್ರಮಗಳನ್ನು ‌ಕೈಗೊಳ್ಳಲಾಗಿದೆ. ಫಲಾನುಭವಿಗಳನ್ನ ಕರೆ ತರಲು ಸರ್ಕಾರಿ ಬಸ್ ಗಳನ್ನ ಬಳಕೆ ಮಾಡಲಾಗ್ತಿದೆ. ಬಸ್ ಗಳ ಕಾರ್ಯನಿರ್ವಹಣೆ ಹಾಗೂ ಟ್ರಾಫಿಕ್ ನಲ್ಲಿ ಸಮಸ್ಯೆ ಆಗಬಹುದು. ಹೀಗಾಗಿ‌ ಕಮಿಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ
ಅಧಿಕೃತ ಸರ್ಕಾರಿ‌ ಕಾರ್ಯಕ್ರಮವಾದ ಕಾರಣ ಜಿಲ್ಲಾಡಳಿತ ಪೂರ್ಣ ಸಿದ್ದತೆ ಮಾಡಿದೆ ಎಂದರು.

Exit mobile version