UN NEWS NETWORKS
ಉಳ್ಳಾಲ: ೭೫ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಉಳ್ಳಾಲ ನಗರಸಭೆ ವ್ಯಾಪ್ತಿಯ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸುಮಾರು ೧೧೦ ಅಡಿ ಎತ್ತರದಲ್ಲಿ ಬೃಹತ್ ರಾಷ್ಟ್ರಧ್ವಜದ ಧ್ವಜಾರೋಹಣವನ್ನು ಶಾಸಕ ಯು.ಟಿ ಖಾದರ್ ನಡೆಸಿದರು. ಈ ಸಂದರ್ಭ ಉಳ್ಳಾಲ ತಾಲೂಕು ವ್ಯಾಪ್ತಿಯ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಧ್ವಜಾರೋಹಣ ನಡೆಯುವ ಸ್ಥಳದತ್ತ ಪಥಸಂಚಲನ ನಡೆಯಿತು. ಉಳ್ಳಾಲ ತಾಲೂಕು ರಚನೆ ನಂತರ ನಡೆದ ಮೊದಲ ಸ್ವಾತಂತ್ರ್ಯ ದಿನದ ಆಚರಣೆ ಅದ್ಧೂರಿಯಾಗಿ ನೆರವೇರಿತು.
