Site icon Ullalavani

ದೇರಳಕಟ್ಟೆ :ನಿಟ್ಟೆ ವಿ.ವಿ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

ನಿಟ್ಟೆ ವಿ.ವಿ ಆವರಣದಲ್ಲಿ ಬಿ.ಸಿ ಆಳ್ವ ಒಳಾಂಗಣ ಸಭಾಂಗಣವನ್ನು ಎನ್.ವಿನಯ್‌ ಹೆಗ್ಡೆ ಉದ್ಘಾಟಿಸಿದರು.
ನಿಟ್ಟೆ ಪ್ರೀಮಿಯರ್‌ ಲೀಗ್‌ ವಾಲಿಬಾಲ್‌ ಪಂದ್ಯಾಟಕ್ಕೆ ವಿಶಾಲ್‌ ಹೆಗ್ಡೆ ಚಾಲನೆ ನೀಡಿದರು.
ಡಾ.ಶಾಂತಾರಾಮ ಶೆಟ್ಟಿ ವಾಲಿಬಾಲ್‌ ಪಂದ್ಯಾಟಕ್ಕೆ ಶುಬಹಾರೈಸಿದಾಗ
ದೇರಳಕಟ್ಟೆಯಲ್ಲಿ ಶುಭಾರಂಭಗೊಂಡ ಬಿ.ಸಿ ಆಳ್ವ ಒಳಾಂಗಣ ಕ್ರೀಡಾಂಗಣ

UN NEWS NETWORKS

ಉಳ್ಳಾಲ: ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದ ಕೀರ್ತಿ ಬಿ.ಸಿ ಆಳ್ವರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ  ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿ.ವಿ ಕ್ಯಾಂಪಸ್ಸಿನಲ್ಲಿ ಉದ್ಘಾಟನೆಗೊಂಡ  ಒಳಾಂಗಣ ಕ್ರೀಡಾಂಗಣವನ್ನು ಅವರ ಹೆಸರಿನಲ್ಲಿ ಸಮರ್ಪಿಸುತ್ತಿದ್ದೇವೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್ .ವಿನಯ್ ಹೆಗ್ಡೆ ಹೇಳಿದರು.
ಅವರು  ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ದ ಕ್ಯಾಂಪಸ್ಸಿನಲ್ಲಿ ನೂತನವಾಗಿ ನಿರ್ಮಿಸಲಾದ    ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿ ಹಾಗೂ ನಿಟ್ಟೆ ವಾಲಿಬಾಲ್ ಲೀಗ್ ಪಂದ್ಯಾಟಕ್ಕೆ ಚಾಲನೆ ನೀಡಿ  ಶುಭಹಾರೈಸಿದರು.
ಸುಸಜ್ಜಿತ ಕ್ರೀಡಾಂಗಣದ ಸದುಪಯೋಗವನ್ನು ನಿಟ್ಟೆ ಸಂಸ್ಥೆಯ ಎಲ್ಲರೂ ಪಡೆದುಕೊಂಡು, ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಗಳಿಸಲಿ ಎಂದು ಹಾರೈಸಿದರು.
ಸಹಕುಲಾಧಿಪತಿ ಡಾ. ಎಂ ಶಾಂತರಾಮ್ ಶೆಟ್ಟಿ ಮಾತನಾಡಿ, ದೇಹಕ್ಕೆ ಮಣ್ಣು ತಾಗದ ರೀತಿಯಲ್ಲಿ ಸುಸಜ್ಜಿತ  ಒಳಾಂಗಣ ಕ್ರೀಡಾಂಗಣವನ್ನು ಸಂಸ್ಥೆ ಒದಗಿಸಿದೆ. ಇದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಮುಂಬರುವ ಅಂತರ್‌ ಕಾಲೇಜು ಕ್ರೀಡಾ ಪಂದ್ಯಾಟಗಳಲ್ಲಿ  ಉತ್ತಮ ಸ್ಥಾನವನ್ನು ಗಳಿಸುವುದರ ಮೂಲಕ ಸಂಸ್ಥೆಯ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಲಿ ಎಂದರು.
ಈ ಸಂದರ್ಭ ನಿಟ್ಟೆ ವಿ.ವಿ ಆಡಳಿತ ವಿಭಾಗದ ಸಹಕುಲಾಧಿಪತಿ ವಿಶಾಲ್ ಹೆಗ್ಡೆ ,   ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ಸಹಕುಲಪತಿ ಡಾ. ಎಂ.ಎಸ್ ಮೂಡಿತ್ತಾಯ, ಕುಲಸಚಿವ ಹರ್ಷ ಹಲಹಳ್ಳಿ, ಡೀನ್ ಡಾ.ಯು.ಎಸ್ ಪ್ರಕಾಶ್, ವೈಸ್ ಡೀನ್ ಡಾ. ಜೆ.ಪಿ ಶೆಟ್ಟಿ, ಫಾರ್ಮಸಿ ಕಾಲೇಜಿನ ಡೀನ್ ಡಾ. ಸಿ.ಯಸ್ ಶಾಸ್ತ್ರಿ, ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ. ದಾಣೇಶ್, ನಿಟ್ಟೆ  ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಅನಿರ್ಬಾನ್ ಚಕ್ರಬರ್ತಿ, ನಿಟ್ಟೆ ವಿ.ವಿ ದೈಹಿಕ ಶಿಕ್ಷಣ ವಿಭಾಗದ ಸಲಹೆಗಾರ ಡಾ. ಮುರಲೀಕೃಷ್ಣ ವಿ. ಹಾಗೂ ವಿವಿಧ ವಿಭಾಗಗಳ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು  ಉಪಸ್ಥಿತರಿದ್ದರು.
ಸುಸಜ್ಜಿತ ಕ್ರೀಡಾಂಗಣ : 23,000 sq feet ವಿಸ್ತೀರ್ಣ ದ ಸ್ಟೇಡಿಯಂನಲ್ಲೊ ಎರಡು ವಾಲಿಬಾಲ್ ಕೋರ್ಟ್ ,  ನಾಲ್ಕು ಶಟಲ್ ಬ್ಯಾಡ್ಮಿಂಟನ್‌ ಕೋರ್ಟ್‌ , ಒಂದು ಬಾಸ್ಕೆಟ್ ಬಾಲ್ ಕೋರ್ಟ್, ಒಂದು ಟೆನಿಸ್‌ ಕೋರ್ಟ್, 4 ಟೇಬಲ್ ಟೆನಿಸ್  ಹಾಗೂ ಚೆಸ್, ಕ್ಯಾರಂ ಆಟಗಳಿಗೆ ಕೋರ್ಟಿನ ಸ್ಥಳಾವಕಾಶ ಇದ್ದು, ಎಲ್ಲವೂ  ಒಂದೇ ಸಮಯ ಆಡಬಹುದಾಗಿದೆ.

Exit mobile version