Site icon Ullalavani

ಕೊಂಡಾಣ ಈ ಬಾರಿಯ ಜಾತ್ರೆ ರದ್ದು , ದೈವಗಳಲ್ಲಿ ಕ್ಷಮಾಪಣೆ ಪ್ರಾರ್ಥನೆ

ದೈವಗಳಲ್ಲಿ ಕ್ಷಮಾಪಣೆ ಬೇಡಿ ಇಂದು ಪ್ರಾರ್ಥನೆ
ದೈವಗಳಲ್ಲಿ ಕ್ಷಮಾಪಣೆ ಬೇಡಿ ಇಂದು ಪ್ರಾರ್ಥನೆ
ದೈವಸ್ಥಾನದ ಬಾಗಿಲು ಮುಚ್ಚಲಾಗಿರುವುದು

ಉಳ್ಳಾಲ: ಕಾರಣಿಕ ಕ್ಷೇತ್ರ ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಡ ಮುಂಡತ್ತಾಯ ದೈವಸ್ಥಾನದ ವಾರ್ಷಿಕ ಜಾತ್ರೆ ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಈ ಬಾರಿಯೂ ರದ್ದುಗೊಳಿಸಲಾಗಿದೆ.
ಕಳೆದ ವರ್ಷವೂ ರದ್ದಾಗಿದ್ದು, ಕಳೆದ ವರ್ಷ ಜಾತ್ರೆ ರದ್ದಾದ ಕಾರಣಕ್ಕೆ ಪ್ರಾಯಶ್ಚಿತ್ತ ರೂಪದಲ್ಲಿ ಒಂದು ತಿಂಗಳ ಹಿಂದೆ ಜಾತ್ರೆ ನಡೆಸಲು ಮುಜರಾಯಿ ಇಲಾಖೆ ಅನುಮತಿ ನೀಡಿತ್ತು. ಆದರೆ ಈ ಬಾರಿಯೂ ಕೊರೊನಾ ಮಹಾಮಾರಿ ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊರಡಿಸಿರುವ ಆದೇಶಗಳ ಹಿನ್ನೆಲೆಯಲ್ಲಿ ಜಾತ್ರೆ ರದ್ದಾಗಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಮತ್ತು ಆಡಳಿತ ಮಂಡಳಿ ಹಾಗೂ ಊರ ಹತ್ತು ಸಮಸ್ತರು ಜೊತೆ ಸೇರಿ ದೈವಗಳಲ್ಲಿ ಕ್ಷಮಾಪಣೆ ಬೇಡಿ ಇಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

Exit mobile version