Site icon Ullalavani

ಬಾಳೆಪುಣಿಯಲ್ಲಿ ಲಸಿಕೆ ಹಾಕಿಸೋಣ ಜಾಗೃತಿ

ಕುಕ್ಕುದಕಟ್ಟೆ ಆದಿವಾಸಿ ಕೊರಗರ ಕಾಲೊನಿಯಲ್ಲಿ ಲಸಿಕೆ ಹಾಕಿಸೋಣ, ಕೊರೊನಾ ತಡೆಯೊಣ ಜಾಗೃತಿ ಕಾರ್ಯಕ್ರಮ ನಡೆಯಿತು

ಬಾಳೆಪುಣಿ: ಬಾಳೆಪುಣಿ ಗ್ರಾ.ಪಂ. ವ್ಯಾಪ್ತಿಯ ಕುಕ್ಕುದಕಟ್ಟೆ ಆದಿವಾಸಿ ಕೊರಗರ ಕಾಲೊನಿಯಲ್ಲಿ ಲಸಿಕೆ ಹಾಕಿಸೋಣ, ಕೊರೊನಾ ತಡೆಯೊಣ ಜಾಗೃತಿ ಕಾರ್ಯಕ್ರಮ ನಡೆಯಿತು. ಜನ ಶಿಕ್ಷಣ ಟ್ರಸ್ಟ್, ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಭಾಗವಹಿಸಿ ಅರಿವೇ ಔಷ„ ಮಾಸ್ಕೇ ಮದ್ದು, ಮನೆಯೇ ಆಸ್ಪತ್ರೆ, ಲಸಿಕೆ ಹಾಕಿಸಿ ಕೊರೊನಾ ಓಡಿಸಿ ಈ ಕುರಿತು ಮಾಹಿತಿ ನೀಡಿ ಸಂವಾದ ನಡೆಸಿದರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕೊರಗ ಜನಾಂಗದ ಹಿರಿಯ ಮುಂದಾಳು ಬಳ್ಳು ಕೊರಗ, ಮಾದರಿ ಗ್ರಾಮ ಅಭಿಯಾನದ ಸ್ವಯಂ ಸೇವಕಿ ವಿದ್ಯಾ, ಆಶಾ ಕಾರ್ಯಕರ್ತೆ ವಿಶಾಲಾಕ್ಷಿ ಸಂವಾದದಲ್ಲಿ ಭಾಗವಹಿಸಿದರು

Exit mobile version