UNN special
ಸಾಧನೆ ಎಂಬ ಹಾದಿಯಲ್ಲಿ ಛಲದ ಜೊತೆ ಪರಿಶ್ರಮದಿಂದ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ಉದಾಹರಣೆ ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ರೀತಿಯಲ್ಲಿ ಸಾಧನೆ ಮಾಡಿದ ಸಾಧಕರನ್ನು ನಾವು ಕಾಣುತ್ತೇವೆ. ಏನಾದರೂ ಸಾಧಿಸಬೇಕು ಅಪ್ಪನ ಕನಸ್ಸನ್ನು ನನಸು ಮಾಡಬೇಕು ಎಂದು ಸಂಗೀತ ಕ್ಷೇತ್ರದಲ್ಲಿ ಹೆಜ್ಜೆ ಹಾಕುತ್ತಿರುವ ಪೋರಿ
ತಬಲಾ ಕ್ಷೇತ್ರದಲ್ಲಿ ಕೊಲ್ಕತ್ತಾದ `ಸುನಂದ ಭಾರತ’ ಲಲಿತ ಕಲಾ ಸಂಸ್ಥೆಯ ನಂದನ್ ಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಕರ್ನಾಟಕದ ಮೊದಲ ತಬಲಾ ಕಲಾವಿದೆಯಾದ ಹಿಮಾಂಗಿ ಡಿ.ಉಳ್ಳಾಲ್.
ತಬಲಾ ಕಲಾವಿದ ದೀಪಕ್ ರಾಜ್ ಉಳ್ಳಾಲ್ ಹಾಗೂ ಧನಲಕ್ಮ್ಷಿ ಡಿ ಉಳ್ಳಾಲ್ ಅವರ ಏಕೈಕ ಪುತ್ರಿ. ಹುಟ್ಟೂರು ಉಳ್ಳಾಲದ ಮೋಗವೀರಪಟ್ನವಾದರೂ ಪ್ರಸ್ತುತ ಸುರತ್ಕಲ್ ನಲ್ಲಿ ವಾಸವಾಗಿದ್ದಾರೆ.
ಅಪ್ಪನ ಕನಸನ್ನು ನನಸು ಮಾಡುವುದೇ ಜೀವನದ ಗುರಿ:
ತಂದೆ ಟಬಲಾ ಕಲಾವಿದರಾಗಿದ್ದು ಸಂಗೀತ ಕ್ಷೇತ್ರ ನನಗೆ ಹೊಸದೇನು ಅಲ್ಲ. ಸಂಗೀತ ಜಗತ್ತಿನಲ್ಲಿಯೇ ಏನಾದರೂ ಸಾಧನೆ ಮಾಡಬೇಕೆಂಬುದು ಅಪ್ಪನ ಕನಸು. ಅಪ್ಪನ ಕನಸು ನನಸು ಮಾಡುವುದೇ ನನ್ನ ಜೀವನ ದೊಡ್ಡ ಗುರಿ. ಮಾರ್ಗದರ್ಶಕರಾಗಿ ಅಪ್ಪ ನನ್ನ ಬೆನ್ನ ಹಿಂದೆ ನಿಂತಿದ್ದಾರೆ. ತಬಲದಲ್ಲಿ ನನಗೆ ತುಂಬಾ ಆಸಕ್ತಿ ಇರುವ ಕಾರಣದಿಂದ ತಬಲ ಕಲಿಕೆಗೆ ಸೇರಿಸಿದ್ದಾರೆ. ಇದರ ಜೊತೆಗೆ ಸಂಗೀತ ತರಭೇತಿಯನ್ನು ಪಡೆಯುತ್ತಿದ್ದೇನೆ ಎನ್ನುತ್ತಾರೆ ಹಿಮಾಂಗಿ ಡಿ. ಉಳ್ಳಾಲ್.
ತಬಲಾ ಬಾರಿಸುವ ಜೊತೆಗೆ ಸುಮಧುರ ಕಂಠದ ಬಹುಮುಖ ಪ್ರತಿಭೆ ಹಿಮಾಂಗಿ ಇಂದ್ರಾಳಿ ಜಂಕ್ಷನ್ ನ ಶಿರ್ಷಿಕೆ ಗೀತೆಯಲ್ಲಿ ಮತ್ತು ಇತ್ತೀಚೆಗೆ ಬಿಡಿಗಡೆಯಾದ ಬಾರ್ಕೂರು ಏಕನಾಥೇಶ್ವರ ದೇವಿಯ ಸುಪ್ರಭಾತ ಧ್ವನಿ ಸುರುಳಿಯಲ್ಲಿ ಹಾಡನ್ನು ಹಾಡಿದ್ದಾರೆ.
ಅಪ್ಪನ ಜೊತೆಗೆ ರಸಮಂಜರಿ ಕಾರ್ಯಕ್ರಮಗಳಿಗೆ ಹೋಗಿ ಹಾಡುತ್ತೇನೆ.
ಬೆಳಿಗ್ಗೆ 5ಗಂಟೆಗೆ ಎದ್ದು 8ಗಂಟೆಯ ವರೆಗೆ ಸಂಗೀತ ಅಭ್ಯಾಸ ಮಾಡುತ್ತೇನೆ. ಸಂಜೆ ಶಾಲೆಯ ಚಟುವಟಿಕೆಯನ್ನು ಮಾಡುತ್ತೇನೆ. ಮಂಗಳೂರಿನಲ್ಲಿ ಸಂಗೀತ ತರಭೇತಿ ಪಡೆಯುತ್ತಿದ್ದೇನೆ. ಮೊದಲು ಅಪ್ಪನ ಜೊತೆ ಕುಳಿತು ತಬಲ ಕಲಿಯುತ್ತಿದೆ. ಈಗ ಹಿಂದೂಸ್ತಾನಿ ತಬಲಾ ವಾದಕರಾದ ಉಡುಪಿ ವಿದ್ವಾನ್ ಮಾಧವ್ ಆಚಾರ್ಯರ ಜೊತೆಗೆ ತಬಲಾ ಕಲಿಯುತ್ತಿದ್ದೇನೆ. ಹಿಂದೂಸ್ತಾನಿ ಸಂಗೀತವನ್ನು ಮಣಿಪಾಲದ ಹಿಂದೂಸ್ತಾನೀ ಸಂಗೀತ ಗುರು ವಿದ್ವಾನ್ ರವಿಕಿರಣ್ ರ ಜೊತೆ ಅಭ್ಯಾಸ ಮಾಡುತ್ತಿದ್ದೇನೆ,
ಮುಂದೆ ಅಸ್ಸಾಂ ನ ನಂದನ್ ಶ್ರೀ ಪ್ರಶಸ್ತಿ ಪುರಸ್ಕೃತ ನಿರಂಜನ್ ಸಾಯಿಕಿಯಾರಲ್ಲಿ ತಬಲಾ ಉನ್ನತ ವ್ಯಾಸಂಗ ಮುಂದವರಿಸಲಿದ್ದಾರೆ.
ಸಂಗೀತದ ಬಗ್ಗೆ ಆಸಕ್ತಿ ಹೇಗೆ?
ಸಣ್ಣವಯಸ್ಸಿನಿಂದಲೇ ಅಪ್ಪನ ಬಳಿ ಕೂತು ತಬಲಾ ಬಾರಿಸುವುದನ್ನು ಕೇಳುತ್ತಿದ್ದೆ, ಅಪ್ಪ ಭಾರಿಸುವ ತಬಲ ಅವರ ಅದರಲ್ಲಿ ಪಳಗಿದ ರೀತಿ ಎಲ್ಲವೂ ಕ್ರಮೇಣ ಇದರ ಬಗ್ಗೆ ಒಲವು ಹೆಚ್ಚಾಗುವಂತೆ ಮಾಡಿತು. ಅದೇ ಮುಂದೆ ಆಸಕ್ತಿಯಾಗಿ ಬೆಳೆಯಿತು. ಇಂದಿನ ನನ್ನ ಸಾಧನೆಗೆ ಅಪ್ಪನ ಛಲ,ಅಮ್ಮನ ಪೋತ್ಸಾಹದ ಜೊತೆಗೆ ನನ್ನ ಪರಿಶ್ರಮವೇ ಕಾರಣ. ಅಪ್ಪ ನನ್ನ ಸಾಧನೆಯ ಸ್ಫೂರ್ತಿ. ಭವಿಷ್ಯದಲ್ಲಿ ಕೊಲ್ಕತ್ತಾದಲ್ಲಿ ತಬಲದಲ್ಲಿ ಪಿಎಚ್ ಡಿ ಮಾಡಬೇಕು ಎಂಬ ಬಹುದೊಡ್ಡ ಆಸೆ ಹಿಮಾಂಗಿ ಹಾಗೂ ಅವರ ಹೆತ್ತವರ ಮೇಲಿದೆ.
ತಬಲಾದಲ್ಲಿ ಏನಾದರೂ ಸಾಧಿಸಬೇಕು ಎಂಬ ಕಾರಣಕ್ಕಾಗಿ ಹಿಂದೂಸ್ಥಾನಿ ಸಂಗೀತವನ್ನು ಆಯ್ಕೆ ಮಾಡಿಕೊಂಡೆ. ಇದು
ಮುಂದೆ ತಬಲಾ ಪರೀಕ್ಷೆಗೆ ಸಹಕಾರಿಯಾಗುತ್ತದೆ. ಕರ್ನಾಟಕ ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಬರೆದಿದ್ದರೂ ನನ್ನ ಒಲವು ಹಿಂದೂಸ್ಥಾನಿ ಸಂಗೀತದ ಕಡೆಯೇ ಇತ್ತು ಕುಟುಂಬದವರು, ಸ್ನೇಹಿತರು, ಶಿಕ್ಷಕರು ಪ್ರತಿ ಭಾರಿ ನನಗೆ ತುಂಬಾ ಸಹಕಾರದ ಜೊತೆಗೆ ಹುರಿದುಂಬಿಸುತ್ತಿದ್ದಾರೆ.
ಮಗಳ ಸಾಧನೆ ತುಂಬಾ ಖುಷಿ ಕೊಡುತ್ತಿದೆ. ಆದರೆ ಜವಾಬ್ದಾರಿ ಇನ್ನು ಹೆಚ್ಚಾಗಿದೆ. ಪ್ರಶಸ್ತಿ ಸಿಕ್ಕಿದೇ ಎಂಬ ಅಹಂ ಯಾವತ್ತೂ ಬೇಡ. ಸಾಧನೆ ಇನ್ನು ನಿಂತಿಲ್ಲ. ಬೀಗುವುದನ್ನು ಬಿಟ್ಟು ಅದು ಮುಂದಿನ ಸಾಧನಗೆ ಬಂದಿರುವ ಇನ್ನಷ್ಟು ಜವಾಬ್ಧಾರಿ ಅನ್ನೋದು ಮನಸ್ಸಿನಲ್ಲಿರಬೇಕು. ಈಗ ಮಾಡುತ್ತಿರುವ ಸಂಗೀತ ಅಭ್ಯಾಸಕ್ಕಿಂತ
2 ಗಂಟೆ ಹೆಚ್ಚಿನ ಅಭ್ಯಾಸ ಇನ್ನಷ್ಟು ಮಾಡಬೇಕು. ಬೆಳಿಗ್ಗೆ ಬೇಗ ಎಬ್ಬಿಸುವುದು, ತಬಲ ಪರೀಕ್ಷೆಯ ಸಂದರ್ಭದಲ್ಲಿ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯ್ನು ನೀಡುತ್ತೇನೆ.
ಮೊದಲು ನಾನು ನನ್ನ ರಸಮಂಜರಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುತ್ತಿದೆ.
ರಾಷ್ಟ್ರೀಯ ಮಟ್ಟದಲ್ಲಿ ಅಂತಃರಾಷ್ಟ್ರೀಯ ಮಟ್ಟದಲ್ಲಿ ತಬಲದಲ್ಲಿ ಸಾಧನೆ ಮಾಡಬೇಕೆಂಬುವುದು ನನ್ನ ಆಸೆ ಅದೇ ರೀತಿಯಲ್ಲಿ ಅವಳಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದೇನೆ ಎನ್ನುವುದು ತಬಲಾ ಕಲಾವಿದರಾಗಿರುವ ದೀಪಕ್ ರಾಜ್ ಉಳ್ಳಾಲ್ ಅವರ ಮಾತು .
ಪ್ರಶಸ್ತಿ ಸನ್ಮಾನಗಳು:
ಕೊಲ್ಕತ್ತಾದ `ಸುರ್ನಂದನ್ ಭಾರತ’ ಲಲಿತ ಕಲಾ ಸಂಸ್ಥೆಯು ತಬಲಾ ಕ್ಷೇತ್ರದಲ್ಲಿ ನೀಡಿರುವ ನಂದನ್ ಶ್ರೀ ಅವಾಡ್ ೯ ಪ್ರಶಸ್ತಿಯನ್ನು ತಬಲಾ ಕಲಾವಿದೆ ಹಿಮಾಂಗಿಯವರು ಪಡೆದುದ್ದು ಕರ್ನಾಟಕದಲ್ಲಿ ಈ ಪ್ರಶಸ್ತಿ ಪಡೆದ ಮೊದಲ ಪ್ರತಿಭೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುರತ್ಕಲ್ ಸಾಂಸ್ಕೃತಿಕ ವಿಕಾಸ ಕೇಂದ್ರ ವು ‘ರಿದಂ ಶ್ರೀ ಅವಾಡ್೯, ಮಹಾರಾಷ್ಟ್ರ ದ ಔರಂಗಾಬಾದ್ನ ಮದರ್ ತೆರೇಸಾ ಡೆವಲಪ್ಮೆಂಟ್ ಸೊಸೈಟಿಯು 2015 ರ ಏರ್ಪಡಿಸಿದ್ದ ರಾಷ್ಟ್ರೀಯ ಕಲರಿಂಗ್ ಸ್ಪರ್ಧೆ ಯಲ್ಲಿ ಪ್ರಶಂಸಿಸಲ್ಪಟ್ಟು ಬೆಸ್ಟ್ ಸ್ಟೂಡೆಂಟ್ ಆವಾಡ್ ೯ ನೀಡಿ ಗೌರವಿಸಿದೆ.
ನಿನಾದ್ ಮತ್ತು ಭಾರತೀಯ ವಿದ್ಯಾಭವನ ಮಂಗಳೂರು ಇವರು ನಡೆಸಿದ ತಬಲಾ ಸೋಲೋ ಸ್ಪರ್ಧೆಯಲ್ಲಿ ಕೂಡ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯು 2017ರಲ್ಲಿ ನಡೆಸಿದ ಜೂನಿಯರ್ ಗ್ರೇಡ್ ತಾಳವಾದ್ಯ ಪರೀಕ್ಷೆಯಲ್ಲಿ ದ.ಕ ಜಿಲ್ಲೆಗೆ ಪ್ರಥಮ ಸ್ಥಾನ, 2019 ರ ರಾಗತರಂಗ ಮತ್ತು ಭಾರತೀಯ ವಿಧ್ಯಾಭವನವು ಏರ್ಪಡಿಸಿದ ಅಂತರ್ ಜಿಲ್ಲಾ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದೇನೆ ಎನ್ನುತ್ತಾರೆ.
ಕರ್ನಾಟಕ ಸಂಗೀತದಲ್ಲಿ ಜೂನಿಯರ್ ಹಂತದ ವರೆಗೂ ಕಲಿತಿರುವ ಈಕೆಯ ಅಜ್ಜ ಕರ್ನಾಟಕ ಸಂಗೀತದ ಆಮೋನಿಯಂ ಪ್ಲೇಯರ್, ಅಜ್ಜಿ ನಾಟಕ ಕಲಾವಿದೆ. ಚಿಕ್ಕಪ್ಪ ಕೀಭೋಡ್ ಪ್ಲೇಯರ್. ಹೀಗೆ ಕುಟುಂಬವೇ ಸಂಗೀತ ಕ್ಷೇತ್ರಕ್ಕೆ ಮುಡಿಪಾಗಿದೆ.