ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ಕಳವು ನಡೆಸಿ ಕಳವುಗೈದ ಮಾಲನ್ನೇ ಬಿಟ್ಟು ಕಳ್ಳರು ಪರಾರಿಯಾದ ಘಟನೆ ಕೊಣಾಜೆಯಲ್ಲಿ ನಡೆದಿದ್ದರೆ, ಇಲ್ಲೊಂದು ಕಳ್ಳರ ತಂಡ ಒಂದು ಲಕ್ಷ ಬೆಲೆಬಾಳುವ ಬೈಕನ್ನು ಕಳವಿಗೆ ಯತ್ನಿಸಿ ಕೇವಲ ಅದರ ಟಯರನ್ನೇ ಕಳವು ನಡೆಸಿ ಪರಾರಿಯಾಗಿರುವ ಪ್ರಸಂಗ ಕುತ್ತಾರು ಸಮೀಪದ ಮುಂಡೋಳಿ ಎಂಬಲ್ಲಿ ನಡೆದಿದೆ.
ಟಯರನ್ನೇ ದೋಚುವ ತಂಡ
ಮುಂಡೋಳಿ ಸಮೀಪ ಇಂತಹ ಟಯರ್ ಕಳವು ನಡೆಸುವ ಪ್ರಕರಣ ಇದು ಮೊದಲೇನಲ್ಲ. ಹಿಂದೆಯೂ ಬಾಡಿಗೆ ಮನೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗೆ ಸೇರಿದ ಕಾರಿನ ನಾಲ್ಕೂ ಟಯರುಗಳನ್ನು ಕಳಚಿ ಕಲ್ಲಿನ ಆಧಾರದಲ್ಲಿ ಅದನ್ನು ನಿಲ್ಲಿಸಿ ಪರಾರಿಯಾಗಿದ್ದರು. ಅಲ್ಲದೆ ಬೈಕೊಂದರ ಎರಡು ಟಯರುಗಳನ್ನು ಕಳವುಗೈದಿರುವ ಘಟನೆಯೂ ಇಲ್ಲಿ ನಡೆದಿರುವ ವಿಚಾರ ಸ್ಥಳೀಯರಿಂದ ಕೇಳಿಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರುಗಳು ದಾಖಲಾದರೂ ಪೊಲೀಸರು ಮಾತ್ರ ಟಯರ್ ಕಳ್ಳರನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿದೆ.