Site icon Ullalavani

ಛಲವಾದಿ ಛಾಯಗ್ರಾಹಕ ಇನ್ನಿಲ್ಲ

UN networks

ಕೊಣಾಜೆ: ಕೊಣಾಜೆ ಬೊಳ್ಳೆಕುಮೇರು ನಿವಾಸಿ ಲಕ್ಷ್ಮಣ ಪೂಜಾರಿ ಅವರ ಪುತ್ರ ಧರಣೇಶ್ ಕೊಣಾಜೆ (39) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಇದ್ದರೂ ಛಲವಾದಿಯಾಗಿ ಯಶಸ್ವಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದರು.

ಅಸೌಖ್ಯವಿದ್ದರೂ ದುಡಿಯಲು ಅಸಾಧ್ಯ ಎಂದು ಭಾವಿಸದ ಧರಣೇಶ್, ಗಂಜಿಮಠ ಸ್ನೇಹಿತನ ಸ್ಟುಡಿಯೋದಲ್ಲಿ ಕ್ಯಾಮರಾ ತರಬೇತಿ ಪಡೆದುಕೊಂಡರು. ಬಳಿಕ ತಾನೋರ್ವ ಛಾಯಗ್ರಾಹಕನಾಗಬೇಕೆಂಬ ಹಂಬಲದಿಂದ ಕ್ಯಾಮರಾ ಖರೀದಿಸಿ ಛಾಯಗ್ರಾಹಕ ವೃತ್ತಿ ಯನ್ನು ಆರಂಭಿಸಿದವರು. 15 ವರ್ಷಗಳಿಂದ ಛಾಯಗ್ರಾಹಕನಾಗಿ ಹಲವು ಮದುವೆ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಫೋಟೋಗಳನ್ನು ಕ್ಲಿಕ್ಕಿಸಿದವರು. ಪ್ರತಿ ದಿನವೂ ಉತ್ಸಾಹದಿಂದಲೇ ಇರುತ್ತಿದ್ದ ವ್ಯಕ್ತಿ ಎಲ್ಲರಿಗೂ ಪರಿಚಿತರು.

ಕೊಣಾಜೆ – ಸ್ಟೇಟ್ ಬ್ಯಾಂಕ್ ನಡುವೆ ಚಲಿಸುವ ಸುಷ್ಮಿತಾ ಬಸ್ಸಿನಲ್ಲಿ ಬೆಳಿಗ್ಗೆ ತೆರಳುವ ದಿನಚರಿ ಹೊಂದಿದ್ದ ಇವರು ಬಸ್ ನಿರ್ವಾಹಕ ನಾರಾಯಣ ಅವರ ಜತೆಗೆ ಸೇರಿಕೊಂಡು ಸದ್ದಿಲ್ಲದೆ ಅಶಕ್ತರಿಗೂ ಧನ ಸಂಗ್ರಹಿಸಿ ಸಹಾಯ ಮಾಡಿದವರು.

Exit mobile version