Site icon Ullalavani

ಕುತ್ತಾರಿನಲ್ಲಿ ಹುಟ್ಟು ಹಬ್ಬ ಆಚರಿಸಿದ ಬಿಜೆಪಿ ಉಪಾಧ್ಯಕ್ಷ

UN network

ಕುತ್ತಾರು: ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ದಲ್ಲಿ ಆಶ್ರಮದ ಮಕ್ಕಳ ಜೊತೆಗೆ ಹುಟ್ಟು ಹಬ್ಬವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಮಂಗಳವಾರ ಸರಳವಾಗಿ ಆಚರಿಸಿದರು.

ಬೆಳಿಗ್ಗೆ 8.30 ರ ಹೊತ್ತಿಗೆ ಆಗಮಿಸಿದ ಸಂಸದರನ್ನು ಉಳ್ಳಾಲ ವಲಯದ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು.

ಮೊದಲಿಗೆ ಗೋಪೂಜೆ ನೆರವೇರಿಸಿ ನಂತರ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷರು ನಂತರ ಮಕ್ಕಳ ಜತೆಗೆ ಹುಟ್ಟುಹಬ್ಬ ಆಚರಿಸಿದರು.

Exit mobile version