Site icon Ullalavani

ಪರಸ್ಪರ ಬೆರೆಯಲು‌‌‌ ಯುವ‌ಮಿಲನ್ ಸಹಕಾರಿ: ಜೂಲಿಯಾನ ಪಾಯಸ್

UN NETWORKS

ಪಾನೀರ್ : ಇಂದು ಒತ್ತಡ ಜೀವನದ‌ ಕಾರಣ ಯುವಸಮುದಾಯ ಒಂದೆಡೆ ಸೇರಿ ಪರಸ್ಪರ ಸಂತೋಷ‌ ಹಂಚಿಕೊಳ್ಳುವ ಅವಕಾಶ ಕಡಿಮೆ ಸಿಗುತ್ತಿದೆ, ಇಂತಹ ಸಂದರ್ಭಗಳಲ್ಲಿ ಯುವ ಮಿಲನದಂತಹ ಕಾರ್ಯಕ್ರಮ ಅಯೋಜಿಸುವುದು ಅತೀ‌ ಮುಖ್ಯ ಎಂದು ಆಸಿಸ್ಸಿ ಸೆಂಟ್ರಲ್‌ ಶಾಲೆ‌ ಪ್ರಾಂಶುಪಾಲೆ ಸಿಸ್ಟರ್ ಜೂಲಿಯಾನ ಪಾಯಸ್ ಅಭಿಪ್ರಾಯಪಟ್ಟರು.

ಪಾನೀರ್ ಮೆರ್ಸಿಯಮ್ಮನವರ ಇಗರ್ಜಿ ವತಿಯಿಂದ ಭಾನುವಾರ ನಡೆದ ಇಗರ್ಜಿಯ ಸಭಾಂಗಣದಲ್ಲಿ ನಡೆದ ಯುವ ಮಿಲ್ನ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೀವು ಯಾವ ಕುಟುಂಬ, ಯಾವ ಊರಿನಿಂದ ಬಂದಿದ್ದೀರಿ ಎನ್ನುವುದು ಮುಖ್ಯವಲ್ಲ, ನೀವು ಸಮಾಜದಲ್ಲಿ ಯಾವ ರೀತಿ ಬೆರೆಯುತ್ತೀರಿ ಎನ್ನುವುದು ಮುಖ್ಯ. ಯುವ ಮಿಲನ್ ಎಂದರೆ ಕೇವಲ ನರ್ತಿಸುವುದು ಮಾತ್ರ ಎಂದು ಭಾವಿಸದೆ ಇದರಲ್ಲಿ ಭಾಗವಹಿಸಿದವರು ಜೀವನಕ್ಕೆ ಸಂಬಂಧಿಸಿ‌ ಒಂದಷ್ಟು ಅನುಭವ ಪಡೆದುಕೊಂಡು ಕಾರ್ಯಕ್ರಮ ಸಾರ್ಥಕ ಎನಿಸುವಂತೆ ಮಾಡಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ‌ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಮಾತನಾಡಿ, ಯೌವನ ಎನ್ನುವುದು ಜೀವನದ ಪ್ರಮುಖ ಘಟ್ಟವಾಗಿರುತ್ತದೆ. ಯುವ ಮಿಲನ್ ನಲ್ಲಿ ನಡೆಯುವ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಜೊತೆಗೆ ಯುವಸಮುದಾಯದ‌ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದರು.

ಫಾ.ಜವಾಹರ್ ಜೇರಿ ಕುಟೊನ್ಹೋ, ಫಾ.ಆಲ್ವಿನ್ ಸೆರವೋ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಡೆನ್ನಿಸ್ ಗೊನ್ಸಾಲ್ವಿಸ್, ಐಸಿವೈಎಂ ವಾರ್ಡ್ ಅಧ್ಯಕ್ಷ ಜೀವನ್ ಮೊಂತೆರೋ, ವಾರ್ಡ್ ಅಧ್ಯಕ್ಷ ಕಿಶೋರ್‌ ಡಿಸೋಜ, ಯೂನಿಟ್ ಅಧ್ಯಕ್ಷ ಮೆಲ್ಸ್ಟನ್ ಲೋಬೋ, ಬ್ರದರ್ ಜೈಸನ್ ಕುಟಿನ್ಹಾ, ಕೆಥೋಲಿಕ್ ಸಭಾ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಮೊದಲಾದವರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಮಂಡಳಿಯು ಉಪಾಧ್ಯಕ್ಷ ಎಲಿಯಾಸ್ ಡಿಸೋಜ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕ ದೀನತ್ ಡೇಸಾ ವಂದಿಸಿದರು. ಅಶ್ವಿನ್‌ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.

Exit mobile version