UN NETWORKS
ಉಚ್ಚಿಲಗುಡ್ಡೆ ಶಾಲೆ
ಉಳ್ಳಾಲ : ಸೋಮೇಶ್ವರ ಪುರಸಭೆ ವ್ಯಾಪ್ತಿಯ ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡೆ ಶಾಲೆಯಲ್ಲಿ ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್ ಧ್ವಜಾರೋಹಣಗೈದರು. ಈ ವೇಳೆ ಪುರಸಭೆ ಸದಸ್ಯ ಇಸ್ಮಾಯಿಲ್ ಉಪಸ್ಥಿತರಿದ್ದರು.
ಸಂಕೊಳಿಗೆ ಗ್ರಂಥಾಲಯ
ಸೋಮೇಶ್ವರ ಪುರಸಭೆಯ ಉಚ್ಚಿಲ ಸಂಕೊಳಿಗೆಯ ಪುರಸಭೆ ಗ್ರಂಥಾಲಯದಲ್ಲಿ ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್ ಧ್ವಜಾರೋಹಣಗೈದರು. ಈ ವೇಳೆ ಉಪಾಧ್ಯಕ್ಷೆ ಸುಶೀಲಾ ನಾಯಕ್, ಪಂಚಾಯಿತಿ ಸದಸ್ಯರಾದ ಸಾವಿತ್ರಿ ಗಟ್ಟಿ, ಲೋಲಾಕ್ಷಿ, ರಮಣಿ , ವೀಣಾ, ಸುಮತಿ, ರಿಕ್ಷಾ ಚಾಲಕರು, ಅಂಗನವಾಡಿ ಶಿಕ್ಷಕಿ ಪುಷ್ಪಾ, ಮತ್ತಿತರರು ಉಪಸ್ಥಿತರಿದ್ದರು.
ಸೋಮೇಶ್ವರ ಪುರಸಭೆ ಕಚೇರಿ
ಸೋಮೇಶ್ವರ ಪುರಸಭಾ ಕಚೇರಿಯಲ್ಲಿ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್ ಧ್ವಜಾರೋಹಣಗೈದರು.
ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ, ಉಪಾಧ್ಯಕ್ಷೆ ಸುಶೀಲಾ ನಾಯಕ್, ತಾ.ಪಂ ಸದಸ್ಯ ರವಿಶಂಕರ್ ಹಾಗೂ ಎಲ್ಲಾ ಸದಸ್ಯರು, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
ಅವಿನಾಶ್ ಮಹಾದೇವ ಭಜನಾ ಮಂದಿರ
ತಲಪಾಡಿಯ ದೇವಿನಗರದ ಅವಿನಾಶ್ ಮಹಾದೇವ ಭಜನಾ ಮಂದಿರದಲ್ಲಿ ಸ್ಥಳೀಯರಾದ ಮಂಜುನಾಥ್ ಭಟ್ ಧ್ವಜಾರೋಹಣಗೈದರು. ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ , ಚಂದ್ರಹಾಸ್ ದೇವಿನಗರ ಮುಂತಾದವರು ಉಪಸ್ಥಿತರಿದ್ದರು.
ತಲಪಾಡಿ ಗ್ರಾ.ಪಂ
ತಲಪಾಡಿ ಗ್ರಾ.ಪಂ ಕಚೇರಿಯಲ್ಲಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಧ್ವಜಾರೋಹಣಗೈದರು. ಪಂ. ಪಿಡಿಓ ಕೇಶವ ಪೂಜಾರಿ ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.
ತಲಪಾಡಿ ನಾರ್ಲಪಡೀಲು ಶಾಲೆ
ತಲಪಾಡಿಯ ನಾರ್ಲ ಪಡೀಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಧ್ವಜಾರೋಹಣಗೈದರು. ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯ ವೈಭವ್ ಶೆಟ್ಟಿ, ಚಂದ್ರಹಾಸ್ ದೇವಿನಗರ, ಮುಖ್ಯೋಪಾಧ್ಯಾಯಿನಿ ಇಂದಿರಾ , ಪಂ. ಸದಸ್ಯೆ ಗೀತಾ ಉಪಸ್ಥಿತರಿದ್ದರು.
ಪಿಲಿಕೂರು ಶಾಲೆ
ತಲಪಾಡಿಯ ಪಿಲಿಕೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಧ್ವಜಾರೋಹಣಗೈದರು. ಈ ವೇಳೆ ಪಂ. ಸದಸ್ಯರಾದ ಚಂದ್ರಹಾಸ್ ದೇವಿನಗರ, ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ , ತಲಪಾಡಿ ಜುಮಾ ಮಸೀದಿಯ ಮುದರ್ರಿಸ್ ಅಬ್ದುಲ್ ರಶೀದ್ ಝೈನಿ ಕಾಮಿಲ್ ಉಸ್ತಾದ್ , ಇಬ್ರಾಹಿಂ, ಅಹಮ್ಮದ್, ಸಲಾಂ ಪಿಲಿಕೂರು, ಶಿಕ್ಷಕರು ಉಪಸ್ಥಿತರಿದ್ದರು.
ಉಳ್ಳಾಲ ನಗರಸಭೆ
ಉಳ್ಳಾಲ ನಗರಸಭೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ನಗರಸಭೆ ಪೌರಾಯುಕ್ತೆ ವಾಣಿ ಆಳ್ವ ನೆರವೇರಿಸಿದರು. ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ತೊಕ್ಕೊಟ್ಟು ಭಟ್ನಗರದ ಜೈ ವೀರಮಾರುತಿ ವ್ಯಾಯಮ ಶಾಲೆಯಲ್ಲಿ 73 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣೆಯನ್ನು ವ್ಯಾಯಮ ಶಾಲೆಯ ಅಧ್ಯಕ್ಷ ಸುರೇಂದ್ರ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯಾಯಮ ಶಾಲೆ ಟ್ರಸ್ಟ್ ಅಧ್ಯಕ್ಷ ವಿಠಲ್ ಶ್ರೀಯಾನ್ , ಜಯಾನಂದ ಅಂಚನ್ , ರಾಮ ಚಂದ್ರ ತೊಕ್ಕೊಟ್ಟು, ಸತೀಶ್ ಭಟ್ನಗರ, ಪುರುಷೋತ್ತಮ ಕಲ್ಲಾಪು, ಪ್ರವೀಣ್ ಕೊಲ್ಯ, ಶರತ್ ತೊಕ್ಕೊಟ್ಟು, ದಿನೇಶ್ , ದೀಕ್ಷಿತ್ ಪೂಜಾರಿ, ಗೌತಮ್, ಪ್ರಕಾಶ್, ತರುಣ್ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರತ್ನ ಆಂಗ್ಲ ಮಾಧ್ಯಮ ಪ್ರೌಢಶಾಲೆ ದೇರಳಕಟ್ಟೆ
ಮಾಜಿ ಯೋಧ ಜೆ.ಪಿ. ರೈ ಧ್ವಜಾರೋಹಣಗೈದರು. ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು , ಕಾರ್ಯದರ್ಶಿ ಸೌಮ್ಯಾ ಆರ್. ಶೆಟ್ಟಿ, ಮುಖ್ಯ ಶಿಕ್ಷಕಿ ನಯೀಮ್ ಹಮೀದ್, ಕೆ. ಎಸ್. ಬಾಬು, ರೋಟರಿ ಮಾಜಿ ಅಧ್ಯಕ್ಷ ಪುರುಷೋತ್ತಮ ಅಂಚನ್, ಶಿಕ್ಷಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಉಳ್ಳಾಲ ಹಳೆಕೋಟೆ ಉರ್ದು ಹಿರಿಯ ಪ್ರಾಥಮಿಕ ಶಾಲೆ
ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಪ್ರೌಢ ಶಾಲೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಟ್ರಸ್ಟ್ ಉಪಾಧ್ಯಕ್ಷ ಹಾಜಿ ಇಬ್ರಾಹಿಂರವರು ದ್ವಜಾರೋಹಣಗೈದರು. ಶಾಲಾ ಸಂಚಾಲಕರಾದ ಮುಹಮ್ಮದ್ ಇಸ್ಮಾಯಿಲ್ ಹಾಜಬ್ಬ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಕರೀಂ ಯು.ಹೆಚ್, ಹಾಜಿ ಝೈನುದ್ದೀನ್, ಎಂ.ಹೆಚ್. ಇಬ್ರಾಹಿಂ, ಅಲ್ತಾಫ್, ಶಬೀರ್ ಹಸನ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮಹಮ್ಮದ್ ರಫೀಕ್, ಟ್ರಸ್ಟ್ ಸ್ಪೋಟ್ರ್ಸ್ ಹಾಗೂ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಾಗು ಫೈರೋಝ್ ಉಪಸ್ಥಿತರಿದ್ದರು.
ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಉಳ್ಳಾಲ
ಉಳ್ಳಾಲ ಕಾಪಿಕಾಡಿನ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ 73ನೇ ಸ್ವಾಂತತ್ರೋತ್ಸವದ ಧ್ವಜಾರೋಹಣವನ್ನು ಕೇಂದ್ರದ ಮುಖ್ಯಸ್ಥ ಡಾ. ಲಕ್ಷ್ಮಣ್ ನೆರವೇರಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ ಮಟ್ಟ್, ಅಧೀಕ್ಷಕ ರವಿಚಂದ್ರ, ಹಿರಿಯ ಸಹಾಯಕಿ ಜ್ಯೋತಿಲಕ್ಷ್ಮಿ, ಹಿರಿಯ ಪ್ರಯೋಗ ಶಾಲಾ ಸಹಾಯಕ ಸಂತೋಷ್.ಜೆ, ಹಿರಿಯ ಕ್ಷೇತ್ರ ಸಹಾಯಕ ಪ್ರವೀಣ್.ಎಸ್.ಕುಂಪಲ ಹಾಗೂ ಸಂಶೋಧನಾ ಕೇಂದ್ರದ ನೌಕರರು, ಕಾರ್ಮಿಕರು ಉಪಸ್ತಿತರಿದ್ದರು.
ಬಗಂಬಿಲ ಫ್ರೆಂಡ್ಸ್ ಸರ್ಕಲ್
ಬಗಂಬಿಲ ಫ್ರೆಂಡ್ಸ್ ಸರ್ಕಲ್ ವತಿಯಿಂದ ನಡೆದ ಸ್ವಾತಂತ್ರೋತ್ಸವದಲ್ಲಿ ಸುನಂದ ರಾಮಚಂದ್ರ ಧ್ವಜಾರೋಹಣಗೈದರು. ಪುರುಷೋತ್ತಮ ಪೂಜಾರಿ, ಪುಷ್ಪ ಟೀಚರ್ ಬಗಂಬಿಲ, ಹಿರಿಯರಾದ ಪರಮೇಶ್ವರ್, ಜಲಜಾಕ್ಷಿ ಕೃಷ್ಣಪ್ಪ, ಬಗಂಬಿಲ ಫ್ರೆಂಡ್ಸ್ ಸರ್ಕಲ್ನ ಗೌರವ ಅಧ್ಯಕ್ಷ ಗಿಲ್ಬರ್ಟ್ ಅಪೋನ್ಸ್ , ಮಹಾದೇವಿ ಮಂದಿರದ ಅರ್ಚಕ ಬಾಲಕೃಷ್ಣ ಪೂಜಾರಿ, ಹಿಂದೂ ಯುವ ಸೇನೆಯ ಅಧ್ಯಕ್ಷ ಪ್ರವೀಣ್ ದಾಸ್ ಹಾಗೂ ಬಗಂಬಿಲ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಮಿತ್ರೆಶ್ ಬಗಂಬಿಲ ಉಪಸ್ಥಿತರಿದ್ದರು.
ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಮತ್ತು ಕೇಸರಿ ಮಾತೃ ಮಂಡಳಿ ಕುಂಪಲ
ಕುಂಪಲ ವ್ಯಸನಗರದ ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಮತ್ತು ಕೇಸರಿ ಮಾತೃ ಮಂಡಳಿಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಜೊತೆಗೆ 73ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕೇಸರಿ ಮಿತ್ರವೃಂದ ಸೇವಾ ಟ್ರಸ್ಟ್ ಅಧ್ಯಕ್ಷ ರಾಕೇಶ್ ಪಿ. ಧ್ವಜಾರೋಹಣಗೈದರು. ಕೇಸರಿ ಮಾತೃಮಂಡಳಿಯ ಅಧ್ಯಕ್ಷೆ ಆಶಾ ಸುರೇಶ್, ಶಾಲಾ ಮುಖ್ಯ ಶಿಕ್ಷಕ , ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಕೇಸರಿ ಮಿತ್ರ ವೃಂದ ಹಾಗೂ ಕೇಸರಿ ಮಾತೃ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ತೊಕ್ಕೊಟ್ಟು ಜಂಕ್ಷನ್ ಆಟೋ ರಿಕ್ಷಾ ಮತ್ತು ಟೆಂಪೋ ಚಾಲಕ ಮಾಲಕರ ಸಂಘ
ತೊಕ್ಕೊಟ್ಟು ಜಂಕ್ಷನ್ ಆಟೋ ರಿಕ್ಷಾ ಮತ್ತು ಟೆಂಪೋ ಚಾಲಕ ಮಾಲಕರ ಸಂಘದ ವತಿಯಿಂದ ಗೌರವಾಧ್ಯಕ್ಷ ನಾಗೇಶ್ ಶೆಟ್ಟಿ ತೊಕ್ಕೊಟ್ಟು ಧ್ವಜಾರೋಹಣಗೈದರು. ದಿವಾಕರ್ ಶೆಟ್ಟಿ ಚೆಂಬುಗುಡ್ಡೆ, ಶ್ರೀನಿವಾಸ್ ಸಪಲ್ಯ ಚೆಂಬುಗುಡ್ಡೆ, ವಿಜಯ ಶೆಟ್ಟಿ ಪಂಡಿತ್ ಹೌಸ್, ನಾಸೀರ್ ಮುಂಡೋಳಿ, ಅಲ್ವಿನ್ ಡಿಸೋಜಾ ಉಪಸ್ಥಿತರಿದ್ದರು.