Site icon Ullalavani

ತಲಪಾಡಿ: ಹಿರಿಯ ಅರ್ಚಕರಿಗೆ ಗುರುವಂದನೆ

UN NETWORKS

ತಲಪಾಡಿ : ಸಂಸ್ಕಾರ ಭಾರತಿ ಮಂಗಳೂರು ಕಳೆದ 16 ವರ್ಷಗಳಿಂದ ಗುರುಪೂರ್ಣಿಮೆಯಂದು ನಾಡಿನ ಹಿರಿಯ ಕಲಾ ಸಂಘಟಕರಿಗೆ, ಸಮಾಜಸೇವಕರನ್ನು ಗುರುತಿಸಿ ಗೌರವಿಸುವ ಕೆಲಸ ಶ್ಲಾಘನೀಯ ಎಂದು ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರ. ಅರ್ಚಕ ಗಗೇಶ್ ಭಟ್ ದೇವಿನಗರ ಅಭಿಪ್ರಾಯಪಟ್ಟರು.

ದೇವಿನಗರ ಶ್ರೀ ಅವಿನಾಶಿ ಮಹಾದೇವ ಭಜನಾ ಮಂದಿರದಲ್ಲಿ ದೇವಸ್ಥಾನ, ದೈವಸ್ಥಾನಗಳಲ್ಲಿ ಶೇರಿಗಾರ ವೃತ್ತಿ ಮಾಡಿಕೊಂಡು , 65 ವರ್ಷಕ್ಕಿಂತ ಹೆಚ್ಚುಕಾಲ ಸೇವೆ ಸಲ್ಲಿಸಿದ ದೇವಿನಗರದ ಜನಾರ್ಧನ ಶೇರಿಗಾರ ಅವರಿಗೆ ಗುರುವಂದನೆ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭ ಜನಾರ್ದನ ಶೇರಿಗಾರ್ ಮತ್ತು ವಾರಿಜಾ ದಂಪತಿ ಗಳನ್ನು ಸನ್ಮಾನಿಸಿ, ನಿಟ್ಟೆ ಶಿಕ್ಷಣ ಸಂಸ್ಥೆಯ ವತಿಯಿಂದ ನಗದು ಪುರಸ್ಕಾರ ಮತ್ತು ಸನ್ಮಾನ ಪತ್ರ ನೀಡಿ ಗುರುನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ತಲಪಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ, ಸಂಸ್ಕಾರ ಭಾರತಿಯ ದಯಾನಂದ ಕತ್ತಾಲ್ ಸಾರ್, ಕಿನ್ಯ ಕೇಶವ ಶಿಶುಮಂದಿರದ ವ್ಯವಸ್ಥಾಪಕ ನಾರಾಯಣ ಕಜೆ, ಜನಾರ್ಧನ ಶೇರಿಗಾರ್, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿ ಪ್ರಫುಲ್ ಕುಮಾರ್ ದೇವಿನಗರ, ಶ್ರೀ ಅವಿನಾಶಿ ಮಹಾದೇವ ಭಜನಾ ಮಂದಿರದ ಅಧ್ಯಕ್ಷ ನವೀನ್ ಆಳ್ವ, ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮಯ್ಯ ಕಿಲ್ಲೆ ದೇವಿನಗರ, ಶ್ರೀ ರಕ್ತೇಶ್ವರಿ ಸೇವಾ ಟ್ರಸ್ಟ್‍ನ ಸಂಚಾಲಕ ಮಂಜುನಾಥ್ ಭಟ್, ಶ್ರೀ ಅವಿನಾಶಿ ಮಹಾದೇವ ಭಜನಾ ಮಂದಿರದ ಅರ್ಚಕ ಐತಪ್ಪ ಮೇಸ್ತ್ರಿ ದೇವಿನಗರ, ರಾಷ್ಟ್ರೀಯ ಸ್ವಯಂ ಸೇವಕ ಸಂತೋಷ್, ತಾಲೂಕು ಸ್ಥರದ ಕಾರ್ಯಕರ್ತರಾದ ಲೋಹಿತ್ ಬಂಗೇರ, ತಲಪಾಡಿ ಮಂಡಲದ ಕಾರ್ಯವಾಹ ಯೋಗೀಶಾ ರಾವ್, ಮಂದಿರದ ಕಾರ್ಯದರ್ಶಿ ರೂಪೇಶ್, ಮಂದಿರದ ಸದಸ್ಯ ಶೇಖರ್ ಟೈಲರ್, ಪುರಂದರ, ಯವರಾಜ್, ಮಾತೃ ಮಂಡಳಿ ಅಧ್ಯಕ್ಷೆ ಬೇಬಿ ಪಕ್ಕಳ , ಸನಾತನ ನಾಟ್ಯಾಲಯದ ಶಾರದಾಮಣಿ ಶೇಖರ್, ಸಂಸ್ಕಾರ ಭಾರತಿ ರಾಜ್ಯ ಸಹ ಕಾರ್ಯದರ್ಶಿ ನಾಗರಾಜ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮಾಧವ ಭಂಡಾರಿ, ಸಂಘಟನಾ ಕಾರ್ಯದರ್ಶಿ ಗಣೇಶ್ ಬೋಳೂರು, ಕೋಶಾಧಿಕಾರಿ ರಘುವೀರ್, ಉಪಾಧ್ಯಕ್ಷ ಧನ್‍ಪಾಲ್ ಶೆಟ್ಟಿಗಾರ್, ಸದಸ್ಯರಾದ ಚಂದ್ರಕಾಂತ್, ಶರತ್ ಕದ್ರಿ, ಸುಖಲತ , ವಾರಿಜ, ನಿರ್ಮಲ, ಚಂದ್ರಾವತಿ, ಶ್ರೀಪತಿ ಆಚಾರ್ಯ, ರಾಜಶ್ರೀ, ಮಾಧವ ಭಂಡಾರಿ ಉಪಸ್ಥಿತರಿದ್ದರು.

Exit mobile version