Site icon Ullalavani

“ವಿದ್ಯಾರ್ಥಿಗಳು, ಹಳ್ಳಿ ಜನರಿಂದ ಕೃಷಿ ಸಂಸ್ಕೃತಿ ಉಳಿಸಲು ಸಾಧ್ಯ”

UN NETWORKS

ಕೊಣಾಜೆ : ವಿದ್ಯಾರ್ಥಿಗಳೊಂದಿಗೆ ಹಳ್ಳಿಯ ಜನರೂ ಜತೆಗೂಡಿದಾಗ ಅಳಿಯುತ್ತಿರುವ ಕೃಷಿ ಸಂಸ್ಕೃತಿ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೊಣಾಜೆ ಗ್ರಾಮೋತ್ಸವವು ಯಶಸ್ವಿಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿಯತ್ತಾಯ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ ಗ್ರಾ.ಪಂ., ಮಂಗಳಾ ಗ್ರಾಮೀಣ ಯುವಕ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಂಗಳೂರು ವಿವಿ ಎನ್‌ಎಸ್‌ಎಸ್‌ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಕೊಣಾಜೆ ಕಲ್ಲಿಮಾರ್‌ ಗದ್ದೆಯಲ್ಲಿ ಎರಡು ದಿನ ನಡೆಯಲಿರುವ “ಕೊಣಾಜೆ ಗ್ರಾಮೋತ್ಸವ-2019 ‘ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮಂಗಳೂರು ವಿಶ್ವವಿದ್ಯಾನಿಲಯ ಸಮರ್ಥವಾಗಿ ಅರ್ಥಮಾಡಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ಎಲ್ಲ ಕಾಲೇಜು ವಿದ್ಯಾರ್ಥಿಗಳ ನಡೆ ರೈತರ ಕಡೆಗಿರಲಿ ಎಂದರು.

ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ಪ್ರಸಾದ್‌ ರೈ ಕಲ್ಲಿಮಾರ್‌ ಅಧ್ಯಕ್ಷತೆ ವಹಿಸಿ, ಯುವವಿದ್ಯಾರ್ಥಿಗಳು, ಯುವ ಸಮುದಾಯಕ್ಕೆ ಕೃಷಿ, ಗ್ರಾಮೀಣ ಬದುಕು ಪರಿಚಯಿಸುವುದು, ಸಾಮರಸ್ಯದ ಜೀವನಕ್ಕೆ ಆದ್ಯತೆ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಕೊಣಾಜೆ ಗ್ರಾ.ಪಂ. ಅಧ್ಯಕ್ಷ ನಝರ್‌ ಷಾ ಪಟ್ಟೋರಿ, ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಮಂಗಳೂರು ವಿವಿ ಎನ್‌ಎಸ್‌ಎಸ್‌ ಘಟಕ ವಿನುತಾ ರೈ, ಮಂಗಳಾ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಅಬ್ದುಲ್‌ ರಹ್ಮಾನ್‌ ಎ.ಕೆ., ಮಾಜಿ ಅಧ್ಯಕ್ಷ ಅಬ್ದುಲ್‌ ರಹ್ಮಾನ್‌ ಕೋಡಿಜಾಲ್‌, ಪ್ರಗತಿಪರ ಕೃಷಿಕ ರಘುರಾಮ ಕಾಜವ ಪಟ್ಟೋರಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ವಿಜಯ ಕುಮಾರ್‌ ಪಾವೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸತೀಶ್‌ ಶೆಟ್ಟಿ, ಪ್ರಾಧ್ಯಾಪಕ ರವಿಶಂಕರ್‌, ತಾ. ಪಂ.ಸದಸ್ಯೆ ಪದ್ಮಾವತಿ ಪೂಜಾರಿ, ರವೀಂದ್ರ ರೈ ಕಲ್ಲಿಮಾರ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 101 ಕಾಲೇಜು ಗಳಿಂದ 361 ಎನ್‌ಎಸ್‌ಎಸ್‌, ಮಂಗ ಳೂರು ವಿವಿಯ ವಿದೇಶಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಬ್ದುಲ್‌ ನಾಸೀರ್‌ ಕೆ.ಕೆ. ಸ್ವಾಗತಿಸಿ, ಅಚ್ಯುತ್‌ ಗಟ್ಟಿ ಪ್ರಾಸ್ತಾವಿಸಿದರು. ಹರೀಶ್‌ ಪೂಜಾರಿ ವಂದಿಸಿದರು. ತ್ಯಾಗಂ ಹರೇಕಳ, ರಾಜೀವ್‌ ನಾಯಕ್‌ ನಿರೂಪಿಸಿದರು.

Exit mobile version