UN NETWORKS
ಉಳ್ಳಾಲ: ಮಂಗಳೂರು – ಕುಂಪಲ ನಡುವೆ ಒಟ್ಟು 6 ನಗರ ಸಾರಿಗೆ ಬಸ್ಸುಗಳು ಓಡಾಟ ನಡೆಸುತ್ತಿದ್ದು ಇದೀಗ ಅದರಲ್ಲಿ ಮೂರು ಬಸ್ಸುಗಳು ಓಡಾಟ ನಿಲ್ಲಿಸುದುದರ ಪರಿಣಾಮವಾಗಿ ಕುಂಪಲ ಪರಿಸರದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ.
ಕುಂಪಲ ಪರಿಸರದ ಶಾಲಾ,ಕಾಲೇಜು ಮಕ್ಕಳು,ಬಡ ಕೂಲಿ ಕೆಲಸಗಾರರು ನಗರಸಾರಿಗೆ ಬಸ್ಸುಗಳನ್ನೇ ನೆಚ್ಚಿಕೊಂಡಿದ್ದು,ಆದಷ್ಟು ಬೇಗನೆ ಕುಂಪಲ ಪ್ರದೇಶಕ್ಕೆ ನಗರ ಸಾರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ದಿನೇಶ್ ಕುಂಪಲ ಅವರು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗೆ ಮನವಿ ನೀಡಿದರು.