UN NETWORKS
ಕಣಚೂರು: ದಾದಿಯರನ್ನು ವೈದ್ಯರೇ ನಿಯಂತ್ರಿಸುತ್ತಾರೆ ಅನ್ನುವ ತಪ್ಪು ಮಾಹಿತಿಯಿದೆ. ಆದರೇ ಜ್ಞಾನ ಸಂಪಾದನೆಯಿಂದ , ತಮ್ಮ ಕರ್ತವ್ಯದ ಅರಿವು ಇದ್ದಲ್ಲಿ ಯಾರನ್ನೂ ಅನುಸರಿಸುವ ಅಗತ್ಯ ದಾದಿಯರಿಗೆ ಇರುವುದಿಲ್ಲ ಎಂದು ನಿಟ್ಟೆ ಉಷಾ ನರ್ಸಿಂಗ್ ವಿಜ್ಞಾನ ಸಂಸ್ಥೆಗಳ ಪ್ರಾಂಶುಪಾಲೆ ಡಾ. ಫಾತಿಮಾ ಡಿಸಿಲ್ವಾ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್ ಮಾತನಾಡಿ ಸಂಶೋಧನೆಗಳಿಗೆ ಹೆಚ್ಷಿನ ಅನುದಾಗಳಿಲ್ಲ , ಆದರೆ ಖಾಸಗಿ ಸಂಸ್ಥೆ ಗಳ ಒಗ್ಗೂಡುವಿಕೆಯ ನಿರ್ಧಾರದ ಮೂಲಕ ದೇಶದ ಆಡಳಿತವನ್ನು ಹೆಚ್ಚಿನ ಅನುದಾನಗಳಿಗೆ ಒತ್ತಾಯಿಸಬಹುದು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಸಂಸ್ಥೆಯ ಆಡಳಿತ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದರಿಂದ ಸಾಧ್ಯ. ದಾದಿಯರು ಮೂಲ ಜ್ಞಾನವನ್ನು ಪಡೆಯುವುದು ಅಗತ್ಯ. ರೋಗಿಗಳಿಗಾಗಿ ತಾವು ತಮ್ಮನ್ನು ವೃದ್ಧಿಸುವ ಮೂಲಕ ವೈದ್ಯರು ಗೌರವಿಸುವ ಕಾರ್ಯ ಮಾಡುತ್ತಾರೆ. ಈ ಮೂಲಕ ಎಲ್ಲರೂ ಹುದ್ದೆಯನ್ನು ಗೌರವಿಸಲು ಮುಂದಾಗುತ್ತಾರೆ ಎಂದರು.