UN NETWORKS
ಮುಡಿಪು : ಮುಡಿಪಿನ ಕುರ್ನಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಅಂತರ್ ಕಾಲೇಜು ಮಟ್ಟದ ಒಂದು ದಿನದ ಕಾರ್ಯಗಾರ ಮುಡಿಪು ಶ್ರೀ ಗೋಪಾಲಕೃಷ್ಣ ಸಂಭಾಗಣದಲ್ಲಿ ನಡೆಯಿತು.
ಡಾ. ರಿತೇಶ್ ಡಿ ಕುನ್ಹಾ ಪ್ರಥಮ ಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.ಅಂತರ್ ಕಾಲೇಜು ಮಟ್ಟದ ರಸ ಪ್ರಶ್ನೆ ಹಾಗೂ ಬೀದಿ ನಾಟಕ ಸ್ಪರ್ಧೆಗಳು ನಡೆಯಿತು. ರಂಗಭೂಮಿ ಹಾಗೂ ಚಲನ ಚಿತ್ರನಟ ದೀಕ್ಷಿತ್ ಕೆ, ಉಪನ್ಯಾಸಕ ಪ್ರದೀಪ್ ಬಂಗೇರ ಹಾಗೂ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಶೋಭಾಮಣಿ ಬೀದಿ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.ವಿದ್ಯಾರ್ಥಿಗಳಾದ ಪ್ರಮೀಳಾ ಡಿಸೋಜ ಪರಿಚಯಿಸಿದರು. ಅಫ್ವಾನ್ರವರು ಕಾರ್ಯಕ್ರಮ ನಿರೂಪಿಸಿದರು.ಶಾಕೀರ್ ರವರು ವಂದಿಸಿದರು.