UN NETWORKS
ಕೊಣಾಜೆ: ಇಂದಿನ ಯುವಜನತೆ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮಾಧ್ಯಮಗಳನ್ನು ಪರಸ್ಪರರಲ್ಲಿ ದ್ವೇಷ ಹರಡುವ ಕಾರ್ಯಕ್ಕೆ ಉಪಯೋಗಿಸುತ್ತಿರುವುದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ನಾವು ಸಮಸ್ತದ ನೇತಾರರನ್ನು ಮಾದರಿಯಾಗಿಸಬೇಕಾಗಿದೆ ಎಂದು ಖ್ಯಾತ ವಾಗ್ಮಿ ಬಹು ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಹೇಳಿದರು.
ಸಮಾರಂಭದಲ್ಲಿ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ನಡುಪದವು, ಹಾಜಿ ಎ.ಎಚ್.ಅಬ್ದುಲ್ ಖಾದರ್, ಪಟ್ಟೋರಿ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್ ಲಾಡ, ನಡುಪದವು ಮಸೀದಿ ಅಧ್ಯಕ್ಷ ಅಬ್ದುಲ್ ನಾಸೀರ್, ಎನ್.ಎಸ್.ನಾಸೀರ್ ನಡುಪದವು, ಇಬ್ರಾಹಿಂ ಕೊಣಾಜೆ, ಪುತ್ತು ಹಾಜಿ ಇಸ್ಮಾಯಿಲ್, ಸಿ.ಎಂ.ಶರೀಫ್ ಪಟ್ಟೋರಿ, ಅಬ್ದುಲ್ ರಹ್ಮಾನ್ ಕಲ್ಲೆಗುಂಡಿ, ಸಿದ್ದೀಕ್ ನಡುಪದವು, ಎನ್.ಎಸ್.ಅಬ್ದುಲ್ಲಾ, ಎನ್.ಎಂ.ಅಬ್ದುಲ್ ರಹಿಮಾನ್, ಹಮೀದ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.ನಝೀರ್ ದಾರಿಮಿ ಸ್ವಾಗತಿಸಿ, ಹಮೀದ್ ಅಝ್ಹರಿ ಪಟ್ಟೋರಿ ವಂದಿಸಿದರು. ಇರ್ಫಾನ್ ಮೌಲವಿ ಮಲಾರ್ ಕಾರ್ಯಕ್ರಮ ನಿರೂಪಿಸಿದರು.