Site icon Ullalavani

ಸೋಮೇಶ್ವರ : ಶ್ರೀ ರಕ್ತೇಶ್ವರೀ ದೈವಸ್ಥಾನದ ವಾರ್ಷಿಕ ನೇಮೋತ್ಸವ, ರಕ್ತೇಶ್ವರಿ ಬಳಗದ ವಾರ್ಷಿಕೋತ್ಸವ

UN NETWORKS

ಸೋಮೇಶ್ವರ : ಸೋಮೇಶ್ವರ ಬಾಸ್ರಿತ್ತಾಯರಬೈಲ್ ಶ್ರೀ ರಕ್ತೇಶ್ವರೀ ದೈವಸ್ಥಾನದ ವಾರ್ಷಿಕ ನೇಮೋತ್ಸವ, ರಕ್ತೇಶ್ವರಿ ಬಳಗದ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.

ಗೋಪಾಲಕೃಷ್ಣ ಮಂಗಳೂರು ದ್ವಜಾರೋಹಣಗೈದರು. ರಕ್ತೇಶ್ವರಿ ಬಳಗದ ಹಿರಿಯ ಸದಸ್ಯ ಲಕ್ಷ್ಮಣ್ ಸೋಮೇಶ್ವರ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಪ್ರೊ. ಕಬಡ್ಡಿ ಕ್ರೀಡಾಪಟು ಸಚಿನ್ ಕೊಲ್ಯ, ಕರಾಟೆ ತರಬೇತುದಾರ ಹರೀಶ್ ಉಳಿಯ ಹಾಗೂ ಹರೀಶ್ ಉಳಿಯರ ಶಿಷ್ಯ ಕರಾಟೆಯಲ್ಲಿ ಸಾಧನೆ ಮಾಡಿದ ಮೋಹನ್ ಕೋಟೆಕಾರು ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿನ್ ಕೊಲ್ಯ ಅವರು ಮಕ್ಕಳಲ್ಲಿರುವ ಪ್ರತಿಭೆ ಬೆಳೆಯಲು ಅವಕಾಶ ಕ್ರೀಡಾಕೂಟದಿಂದ ಸಾಧ್ಯವಾಗುತ್ತದೆ. ಕಬಡ್ಡಿ ಪಂದ್ಯಾಟದಲ್ಲೂ ಅವಕಾಶ ಇದೆ. ಇದರಿಂದ ಒಳ್ಳೆಯ ಕೆಲಸ ಸಿಗುವ ಅವಕಾಶ ಕೂಡಾ ಇರುತ್ತದೆ ಎಂದು ಹೇಳಿದರು. ಮಕ್ಕಳ ಬೆಳವಣಿಗೆಗೆ ಕರಾಟೆಯಂತಹ ಕ್ರೀಡೆಯು ಸಹಕಾರ ಆಗಿದೆ. ಮಕ್ಕಳಲ್ಲಿರುವ ಆಸಕ್ತಿಗೆ ಅವಕಾಶ ನೀಡಬೇಕು, ಅವರ ಪ್ರತಿಭೆಯನ್ನು ಬೆಳೆಸಬೇಕು ಎಂದು ಹರೀಶ್ ಉಳಿಯ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಕ್ತೇಶ್ವರಿ ದೇವಸ್ಥಾನದ ತಂತ್ರಿ ವೇದಮೂರ್ತಿ ಬ್ರ್ರಹ್ಮಶ್ರೀ ಸುಬ್ರಹ್ಮಣ್ಯ ಬಾಸ್ರಿತಾಯರು, ರಕ್ತೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ರಕ್ತೇಶ್ವರಿ ಬಳಗದ ಸದಸ್ಯರ ಕೆಲಸ ಮತ್ತು ಉಮೇದುವಾರಿಕೆ ಕಾರಣವಾಗಿದೆ ಎಂದು ಆಶೀರ್ವಚನ ನೀಡಿದರು.
ರಕ್ತೇಶ್ವರಿ ಬಳಗದ ಮಾಜಿ ಅಧ್ಯಕ್ಷ ರವಿಶಂಕರ ಸೋಮೇಶ್ವರ ಸನ್ಮಾನ ಪತ್ರ ಓದಿದರು. ಶ್ರೀ ರಕ್ತೇಶ್ವರಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಮದಾಸ್ ಸೋಮೇಶ್ವರ, ಗೌರವಾಧ್ಯಕ್ಷ ಅಜಿತ್‍ಕುಮಾರ್ ಶೆಟ್ಟಿ ಅಧ್ಯಕ್ಷ ಚಂದ್ರಶೇಖರ್ ಪೆರಿಬೈಲ್, ಮಾಜಿ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಹಿರಿಯ ಸದಸ್ಯ ಪುರುಷೋತ್ತಮ ಹಾಗೂ ಕಾರ್ಯದರ್ಶಿ ವರುಣ್ ರಾಜ್ ಉಪಸ್ಥಿತರಿದ್ದರು.

ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version