Site icon Ullalavani

ಸೋಮೇಶ್ವರಕ್ಕೆ ಹರಿದುಬಂದ ಜನಸಾಗರ

UN NETWORKS
ಉಳ್ಳಾಲ:  ಕಡಲ ತಟ ಹಾಗೂ ಎತ್ತರದ ಬಂಡೆ ಮೇಲೆ ಇರುವ ಅಪರೂಪದ ದೇವಸ್ಥಾನವಾಗಿರುವ ಪುಣ್ಯಕ್ಷೇತ್ರ ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನಕ್ಕೆ ಈ ಬಾರಿಯ ಮಹಾಶಿವರಾತ್ರಿಗೆ ಭಕ್ತರ ಅಭಿಪ್ರಾಯದಂತೆ ಕಳೆದ ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ದರ್ಶನ ಪಡೆದು ಕೃತಾರ್ಥರಾದರು.
ಶಿವನ ಆರಾಧನೆಗೆ ಶಿವರಾತ್ರಿ ಪ್ರಾಶಸ್ತ್ಯ ಸಮಯವೂ ಆಗಿರುವುದರಿಂದ ಪಾಪಕರ್ಮಗಳನ್ನು ತೊಳೆದುಕೊಳ್ಳುವ ಸಲುವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ ಪಡೆಯುವುದು ವಾಡಿಕೆ. ಮಹಾ ಶಿವರಾತ್ರಿ ಮಾಘ ಮಾಸ ಹಾಗೂ ಸೋಮವಾರದ ದಿನ ಶಿವರಾತ್ರಿ ಬಂದಿರುವುದು ಎಲ್ಲ ಶಿವನ ಭಕ್ತರನ್ನು ಧನ್ಯಗೊಳಿಸಿದೆ. ಈ ದಿನ ತನ್ನನ್ನು ಪೂಜಿಸುವ ಭಕ್ತರಿಗೆ ಶಿವ ವಿಶೇಷವಾದ ಅನುಗ್ರಹ ನೀಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಪುರಾಣ ಕಥೆಗಳು ಸಾರುವಂತೆ ಶಿವಪಾರ್ವತಿ ವಿವಾಹ ದಿನ, ಸಮುದ್ರ ಮಂಥನದಿಂದ ವಿಷ ಕುಡಿದ ಶಿವನ ಗಂಟಲಿನಿಂದ ವಿಷ ಕೆಳಗಿಳಿಯದಂತೆ ಪಾರ್ವತಿ ಗಂಟಲಲ್ಲಿ ತಡೆದು ಪೂರ್ಣ ರಾತ್ರಿ ಜಾಗರಣೆ ಮಾಡಿದ್ದಕ್ಕೆ ಶಿವರಾತ್ರಿ ಜಾಗರಣೆ ಹೆಸರು ಬಂತು ಎಂಬ ನಂಬಿಕೆಯೂ ಇದೆ. ಶಿವ ವಿಷ ಕುಡಿದ ಪರಿಣಾಮ ಮಹಾಶಿವರಾತ್ರಿ, ಜಾಗರಣೆ ಹೀಗೆ ಬಹಳಷ್ಟು ಕಥೆಗಳಿದ್ದರೂ ಜನರು ಇಂದಿಗೂ ಜಾಗರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದಶಕಗಳ ಹಿಂದಿನಂತೆ ಅಕ್ಕಪ್ಕಕದ ಬೀದಿಯಲ್ಲಿ ತೊಂದರೆ ಕೊಡುವುದು, ನೆರೆಮನೆಗೆ ಕಾಟ ಕೊಡುವುದು, ಸಾಧನ ಸಾಮಾನು ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಅಡಗಸಿಡುವುದು ಮೊದಲಾದ ಚೇಷ್ಠೆಗೆ ಕಡಿವಾಣ ಬಿದ್ದಿದೆ. ಹಾಗಿದ್ದರೂ ಆಚರಣೆ ಜೋರಾಗಿ ನಡೆಯುತ್ತದೆ.
ಸೋಮೆಶ್ವರ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ನಿರೀಕ್ಷೆಯಂತೆ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದೆ. ಭಕ್ತರಿಗೆ ಅನುಕೂಲವಾಗುವಂತೆ ಎಲ್ಲ ರೀತಿಯ ವ್ಯವಸ್ಥೆ ಆಗಿದೆ. ಭಯ ಹುಟ್ಟಿಸಿ ಭಯ ಹೋಗಲಾಡಿಸಿ ಶಿವ ರಕ್ಷಣೆ ಮಾಡುತ್ತಾನೆ. ಭಕ್ತರ ಬಹುದಿನಗಳ ಕನಸಾಗಿರುವ ದೇವಸ್ಥಾನ ಸಂಪರ್ಕಿಸುವ ಸುಸಜ್ಜಿತ ರಸ್ತೆ ಉದ್ಘಾಟನೆಗೆ ಸಜ್ಜಾಗಿದೆ. 1.21ಕೋಟಿ ರೂ. ಗಳ ಸುಂದರವಾದ ಸಭಾಭವನ ಹಾಗೂ  ಭಕ್ತರಿಗೆ ತಂಗಲು ಅನುಕೂಲವಾಗಲು ಯಾತ್ರೀ ಭವನವನ್ನು ಸಚಿವರು ಒದಗಿಸಿದ್ದಾರೆ. ಶ್ರೀಕ್ಷೇತ್ರದ ಭಕ್ತರಿಗೆ ಶ್ರೀ ಸೋಮನಾಥ ಆರೋಗ್ಯ ಕರುಣಿಸಲಿ.
ವಿಶ್ವನಾಥ ಗಟ್ಟಿ ವಗ್ಗ 
ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ 
Exit mobile version