UN NETWORKS
ಉಳ್ಳಾಲ: ಆರೋಗ್ಯ ಸಂಬಂಧ ಮಾಹಿತಿ ದಾಖಲೀಕರಣ ತಂತ್ರಜ್ಞಾನ, ವೈದ್ಯರಿಂದ ರೋಗಗಳ ಕುರಿತು ವೈಯಕ್ತಿಕ ಮಾರ್ಗದರ್ಶನ ಪಡೆಯುವಲ್ಲಿ ಮೊಬೈಲ್ ಆ್ಯಪ್ ಗಳ ಸೇವೆ ದೇಶದೆಲ್ಲೆಡೆ ಆರಂಭವಾಗಬೇಕಿದೆ ಎಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಯನ್ ಚಿಪ್ಲುಂಕರ್ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ ನಿರ್ದೇಶಕಿ ಡಾ.ಇಂದ್ರಾಣಿ ಕರುಣಾಸಾಗರ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಗುಣಮಟ್ಟ ಕಾಯ್ದಿರಿಸುವಿಕೆ ಅತಿಮುಖ್ಯ. ಫಾರ್ಮಸಿ ತರಬೇತಿ ಪಡೆದವರು ಕೇವಲ ವೈದ್ಯಕೀಯ ಕ್ಷೇತ್ರವನ್ನು ಮಾತ್ರ ಆರಿಸದೆ ಕಾಸ್ಮೆಟಿಕ್ಸ್, ಆಹಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳಬಹುದು ಎಂದರು.
ನಿಟ್ಟೆ ಗುಲಾಬಿ ಶೆಟ್ಟಿ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ| ಸಿ.ಯಸ್ ಶಾಸ್ತ್ರಿ ಉಪಸ್ಥಿತರಿದ್ದರು.ಬೆಂಗಳೂರು ಬೈಕುಂಜೆ ಕನ್ಸಲ್ಟೆನ್ಸಿಯ ಡಾ.ಉಮೇಶ್ ಬೈಕುಂಜೆ, ಬೆಂಗಳೂರು ಐಕ್ಯೂವಿಐಎ ಇದರ ಸೀನಿಯರ್ ಎಕ್ಸಿಕ್ಯೂಟಿವ್ ಡೇಟಾ ಮ್ಯಾನೇಜ್ ಮೆಂಟ್ ಸೌಮ್ಯಾ ತೆಟ್ಟಲಿಕ್ಕಲ್, ಸ್ಟೀರ್ ಇಂಜಿನಿಯರಿಂಗ್ ಮತ್ತು ಫಾರ್ಮಸಿಟಿಕಲ್ಸ್ ಇದರ ಸೀನಿಯರ್ ರಿಸ ಅಸೋಸಿಯೇಟ್ ರಕ್ಷಿತ್ ಶೆಟ್ಟಿ, ರಣದೀಪ್ ರಾಜೇಂದ್ರನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಡೇವಿನ್ ಮೆಂಡೋನ್ಸಾ , ರೆಲ್ಮಾ ಫುಟಾರ್ಡೊ ಕಾರ್ಯಕ್ರಮ ನಿರೂಪಿಸಿದರು. ಫಿಸಿಯೋಥೆರಪಿ ಕಾಲೇಜು ಉಪಪ್ರಾಂಶುಪಾಲ ಡಾ. ಆರ್. ನಾರಾಯಣ ಆಚಾರ್ಯುಲು ಸ್ವಾಗತಿಸಿದರು. ಡಾ. ಮರೀನಾ ಕೋಲಾಂಡ್ ವಂದಿಸಿದರು.