UN NETWORKS
ಅಲೇಕಳ: ಇಸ್ಲಾಂ ಧರ್ಮ ಯಾರೋ ಸ್ಥಾಪಿಸಿದ್ದಲ್ಲ, ಇಸ್ಲಾಂ ಹೆಸರನ್ನು ಹೇಳಿಕೊಂಡು ದುರಾಚಾರ ನಡೆಸುವ ಹಕ್ಕು ಯಾರಿಗೂ ಇಲ್ಲ. ಅಲ್ಲಾಹನ ವಿರುದ್ಧ, ಪ್ರವಾದಿ(ಸ) ಸಂದೇಶದ ವಿರುದ್ಧ ಮಾಡಿದ ಕೃತ್ಯ ಎಸಗಿರುವ ಉಗ್ರರ ಮೇಲೆ ದೇವನ ಶಾಪವಿದೆ ಎಂದು ಉಳ್ಳಾಲ ನಗರಸಭೆಯ ಸದಸ್ಯ ಅಯೂಬ್ ಮಂಚಿಲ ಅಭಿಪ್ರಾಯಪಟ್ಟರು.
ಮುಖಂಡ ಯು.ಕೆ.ಮುಸ್ತಫ ಮಾತನಾಡಿ, ವಿಶ್ವದ ಇತರ ದೇಶಗಳು ಆದಾಯದ ಶೇ.60 ದೇಶದ ಭದ್ರತೆಗಾಗಿ ವಿನಿಯೋಗಿಸುತ್ತಾರೆ, ಅದೇ ರೀತಿ ನಮ್ಮ ದೇಶದಲ್ಲೂ ಭದ್ರತೆ, ಸೈನಿಕರ ಅತ್ಯಾಧುನಿಕ ವ್ಯವಸ್ಥೆಗಾಗಿ ಹೆಚ್ಚಿನ ಆದ್ಯತೆ ಕಲ್ಪಿಸಬೇಕಾಗಿದೆ. ಕೃತ್ಯ ಎಸಗಿರುವ ಸಂಘಟನೆಯನ್ನು ನಾಮವಶೇಷ ಮಾಡಬೇಕಾಗಿದೆ ಎಂದು ತಿಳಿಸಿದರು.ಯು.ಎ.ಇಸ್ಮಾಯಿಲ್, ಅಸ್ಗರ್ ಅಲಿ, ನುಸ್ರತುಲ್ ಕಾರ್ಯದರ್ಶಿ ಯು.ಎನ್.ಮುಹಮ್ಮದ್, ಮುಹಮ್ಮದ್ ಹನೀಫ್, ಮುಹಮ್ಮದ್ ಫಾರೂಕ್, ಆಸಿಫ್ ಮಾರ್ಗತ್ತಲೆ, ಕಬೀರ್ ಅಲೇಕಳ, ರಹ್ಮತ್ ಅಲೇಕಳ, ನಝೀರ್ ಆರ್.ಕೆ., ದರ್ಗಾ ಸದಸ್ಯರಾದ ಕುಂಞಿಮೋನು, ಅಲಿಮೋನು, ಜಾಫರ್ ಅಲೇಕಳ, ಇಬ್ರಾಹಿಂ ಕಕ್ಕೆತೋಟ, ಯು.ಬಿ.ಸಿದ್ದೀಕ್, ಶಕೀಲ್, ರಿಯಾಝ್ ಮಾರ್ಗತ್ತಲೆ ಇನ್ನಿತರರು ಉಪಸ್ಥಿತರಿದ್ದರು.