UN NETWORKS
ಮುಡಿಪು : ಮುಸ್ಲಿಂ ಸಮಾಜದಲ್ಲಿ ಧಾರ್ಮಿಕ ಶಿಕ್ಷಣದ ಕೊರತೆ ಎದುರಾದಾಗ ಅವರಲ್ಲಿ ದುಷ್ಟಮನೋಭಾವನೆ ಬೇರೂರುತ್ತದೆ. ಸಮಾಜಘಾತುಕ ಕೃತ್ಯಗಳನ್ನು ನಡೆಸಲು ಮುಂದಾಗುತ್ತಾರೆ. ದೇಶದ ಜನತೆಗೆ ಬೇಡವಾದ ಕೃತ್ಯ ನಡೆಸುವ ಮುಸ್ಲಿಂ ಸಮಾಜದ ಯಾರೇ ಆದರೂ ಅವರನ್ನು ನೈಜ ಇಸ್ಲಾಂ ಎಂದಿಗೂ ಒಪ್ಪದು ಎಂದು ಧಾರ್ಮಿಕ ಮುಖಂಡ ಸಿಟಿಎಂ ಮುಹಮ್ಮದ್ ಸಲೀಂ ಅಸ್ಸಖಾಫ್ ತಂಙಳ್ ಹೇಳಿದರು.
ಆಶಿಖ್ರ್ರಸೂಲ್ ಅಬ್ದುಲ್ ಖಾದರ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಸಈದ್ ಸಅದಿ ಕಾವುಂಬಡಿ ಕಾರ್ಯಕ್ರಮ ಉದ್ಘಾಟಿಸಿದರು.
ಹಂಝ ಮಿಸ್ಬಾಯಿ ಓಟಪಡವು ಮುಖ್ಯ ಭಾಷಣ ಮಾಡಿದರು. ಪಿ.ಕೆ. ಮದನಿ, ಆಸಿಫ್ ಸಖಾಫಿ ಅಲ್ ಅಝ್ಅರಿ, ಹೈದರ್ ಪರ್ತಿಪ್ಪಾಡಿ, ಹಸನ್ ಹಾಜಿ ಸಾಂಬಾರ್ತೋಟ, ಇಬ್ರಾಹಿಂ ಕೋಡಿಜಾಲ್, ಉಮರ್ ಪಜೀರ್, ಪುತ್ತುಬಾವ ಹಾಜಿ ಸಾಂಬಾರ್ತೋಟ, ಏಷ್ಯನ್ ಹಾಜಿ ಸಾಂಬರ್ತೋಟ, ಅಬ್ದುಲ್ ಮಜೀದ್ ಕಾಮಿಲ್ ಸಖಾಫಿ, ಎ.ಪಿ. ಸಿದ್ದೀಕ್ ಪಜೀರ್, ಇಬ್ರಾಹಿಂ ದಾರಿಮಿ, ಇಬ್ರಾಹಿಂ ಹಾಜಿ ತೋಟಾಲ್ ಕೆ.ಇ. ಅಬ್ದುಲ್ ಖಾದರ್ ರಝ್ವಿ, ಅಬ್ದುಲ್ಲಹಾಜಿ, ಮೂಸಕುಂಞ, ಪಿ.ಎಸ್. ಬಾವ ಸಾಂಬಾರ್ತೋಟ, ಎಸ್. ಮಹಮ್ಮದ್ ಸಾಂಬಾರ್ ತೋಟ ಉಪಸ್ಥಿತರಿದ್ದರು. ಮುಹಮ್ಮದ್ ಸಾಧಿಕ್ ಸಖಾಫಿ ಸ್ವಾಗತಿಸಿದರು.