UN NETWORKS
ಮೊಂಟೆಪದವು: ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷ ಸೈನಿಕರ ಹೆಸರಿನಲ್ಲಿ ಸುಳ್ಳು ಹೇಳಿ ರಾಜಕಾರಣ ಮಾಡುವುದನ್ನು ಬಿಟ್ಟು ಸೈನಿಕರ ಸುರಕ್ಷತೆಗೆ ಅತ್ಯಾಧುನಿಕ ವಾಹನ, ಸುರಕ್ಷತಾ ಉಪಕರಣ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ಟೀಂ ಇಂಡಿಯಾ ಸಂಘಟನೆಯ ಮುಖಂಡ ಅಶ್ರಫ್ ಕೆಸಿ ರೋಡ್ ಹೇಳಿದರು.
ಬಳಿಕ ಅಗಲಿದ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಕಾರ್ಯದರ್ಶಿ ರಜಾಕ್ ಮೊಂಟೆಪದವು, ಪಂಚಾಯಿತಿ ಸದಸ್ಯರಾದ ಇಸ್ಮಾಯಿಲ್ ಮೋನು, ಫಯಾಜ್ ಮೊಂಟೆಪದವು, ಮಾಜಿ ಸದಸ್ಯ ಎಂ.ಎಂ. ಕುಂಞ, ಮಸೀದಿ ಕಾರ್ಯದರ್ಶಿ ಅಬ್ದುಲ್ ಖಾದರ್ , ಉದ್ಯಮಿ ಅಶ್ರಫ್ ಪದಿಂಜಾರ್, ಡಿವೈಎಫ್ಐ ಮೊಂಟೆಪದವು ಘಟಕದ ಅಧ್ಯಕ್ಷ ಸಿರಾಜ್ ಬಿ.ಎಂ., ಹಿದಾಯತ್, ಸಂಶುದ್ದೀನ್ ಯು.ಟಿ, ಆರಿಫ್ ಮೊಂಟೆಪದವು, ಶಾಫಿ ಬಿ.ಎಂ , ಮನ್ಸೂರ್ ತೋಟಾಲ್ ಹಾಗೂ ಮಂಗಳೂರು ವಿವಿ ವಿದ್ಯಾರ್ಥಿ ನಾಯಕ ಸಿರಾಜ್ ಉಪಸ್ಥಿತರಿದ್ದರು.