UN NETWORKS
ಬಾಯಾರ್ : ಸಹಸ್ರಾರು ಜನರು ಬಹಳಷ್ಟು ಸಂಖ್ಯೆಯಲ್ಲಿ ಸೇರಲಿರುವ ಮುಜಮ್ಮಉಸ್ಸಖಾಫತಿ ಸುನ್ನಿಯ್ಯ ಸಂಸ್ಥೆಯಲ್ಲಿ ಪ್ರತೀ ತಿಂಗಳು ನಡೆಯಲಿರುವ ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಸಾಮೂಹಿಕ ಕೂಟು ಪ್ರಾರ್ಥನೆ ಫೆಬ್ರವರಿ 15 ಶುಕ್ರವಾರ ಮಗ್ರಿಬ್ ನಮಾಝಿನ ನಂತರ ನಡೆಯಲಿದೆ.
ಸಯ್ಯಿದ್ ನಿಝಾಮುದ್ದೀನ್ ಬಾಫಖಿ ತಂಙಳ್ ಮಲ್ಲೂರು ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ,ಬಿ ಎಸ್ ಅಬ್ದುಲ್ಲಾ ಕುಂಞಿ ಪೈಝಿ, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಅಬ್ದುಲ್ಲತೀಫ್ ಸಅದಿ ಪಝಶ್ಶಿ, ಹಂಝ ಮಿಸ್ಬಾಹಿ ಒಟಪಡವು, ಅಶ್ರಫ್ ಸಅದಿ ಮಲ್ಲೂರು , ಜಬ್ಬಾರ್ ಸಖಾಫಿ ಪಾತೂರ್ ಸಮೇತ ಇರುವ ಅನೇಕ ಉಲಮಾ ಉಮರಾರು ಸಾದಾತುಗಳು ರಾಜಕೀಯ ಮುಖಂಡರು ಶಿಕ್ಷಣ ತಜ್ಞರು ಸಮಾಜ ಸೇವಕರು ಭಾಗವಹಿಸುವರು.