Site icon Ullalavani

ಎಸ್ ಡಿಪಿಐ ಜಿಲ್ಲಾಧ್ಯಕ್ಷ ವಿರುದ್ಧ ಪ್ರಕರಣ : ಉಳ್ಳಾಲ ಠಾಣೆಗೆ ಮುತ್ತಿಗೆ

UN NETWORKS

ಉಳ್ಳಾಲ: ಜಿಲ್ಲೆಯ ಉಸ್ತುವಾರಿ ಸಚಿವರ ಪ್ರೇರಣೆಯಿಂದಲೇ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರ ಆಪ್ತರು, ಬಾಬರಿ ಮಸೀದಿ ಮೇಲೆ ಅಭಿಮಾನ ಇರುವ ಕಾಂಗ್ರೆಸ್ಸಿಗನ ಮೂಲಕವೇ ಗಮನಕ್ಕೆ ಬಂದಿದೆ ಎಂದು ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ನಾಯಕರ ಹಾಗೂ ಇತರರ ಮೇಲೆ ದಾಖಲಾದ ಸ್ವಯಂಪ್ರೇರಿತ ಪ್ರಕರಣ ಹಿಂತೆಗೆಯಲು ಒತ್ತಾಯಿಸಿ ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಉಳ್ಳಾಲ ಆರಕ್ಷಕ ಠಾಣೆ ಎದುರು ಮಂಗಳವಾರ ಜರಗಿದ ಬೃಹತ್ ಮಟ್ಟದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಬಾಬರಿ ಮಸೀದಿ ಧ್ವಂಸ ಪ್ರಕರಣ ಮುಸಲ್ಮಾನರ ಸಮಸ್ಯೆಯಲ್ಲ, ದೇಶದ ಜಾತ್ಯಾತೀತವಾದಿಗಳಿಗೆ ಮಾಡಿದ ಅವಮಾನವಾಗಿದೆ. ಸಂವಿಧಾನ ವಿರೋಧಿ ಕೃತ್ಯವಾಗಿದೆ. ಜಾತ್ಯಾತೀತ ವ್ಯಕ್ತಿಗಳು ಜಾಗರೂಕರಾಗಬೇಕು ಅನ್ನುವ ಉದ್ದೇಶದಿಂದ ದೇಶದಾದ್ಯಂತ ಹಮ್ಮಿಕೊಂಡಿರುವ ಅಭಿಯಾನದ ಅಂಗವಾಗಿ ಉಳ್ಳಾಲದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಬಾಬರಿ ಮಸೀದಿ ಧ್ವಂಸ ವಿಚಾರದಲ್ಲಿ ಸಂಘಪರಿವಾರಕ್ಕಿಂತ ಹೆಚ್ಚು ಆಸಕ್ತಿ ಜಾತ್ಯಾತೀತ ಕಾಂಗ್ರೆಸ್ ಪಕ್ಷಕ್ಕಿದೆ ಇರುವಂತೆ ಇದೆ. ಧ್ವಂಸ ಸಂದರ್ಭದಲ್ಲಿಯೂ ದೇಶದಲ್ಲಿ ಅಧಿಕಾರ ಇದ್ದವರು ಕಾಂಗ್ರೆಸ್ಸಿಗರು, ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ಲಿಬರ್ ಹನ್ ವರದಿಯಂತೆ ಆರೋಪಿಗಳಿಗೆ ಈವರೆಗೂ ಶಿಕ್ಷೆಯಾಗಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು ಅಧಿಕಾರಿ ದುರುಪಯೋಗಪಡಿಸಿಕೊಂಡು ಎಸ್ ಡಿಪಿಐ ನಾಯಕರನ್ನು ಜೈಲಿಗೆ ಹಾಕಬಹುದು. ಆದರೆ ಹೋರಾಟದ ಕಿಚ್ಚಿನಿಂದಲೇ ಎಸ್ ಡಿಪಿಐ ಪಕ್ಷವನ್ನು ಕಟ್ಟಲಾಗಿದೆ ಅನ್ನುವುದನ್ನು ಸಚಿವರು ಗಮನದಲ್ಲಿಟ್ಟುಕೊಳ್ಳಬೇಕಿದೆ. ಜಿಲ್ಲಾಧ್ಯಕ್ಷರ ವಿರುದ್ಧ ಹಾಕಿರುವ ಪ್ರಕರಣವನ್ನು ಹಿಂಪಡೆಯದೇ ಇದ್ದಲ್ಲಿ ಗ್ರಾಮ ಮಟ್ಟದಲ್ಲಿ ಅಭಿಯಾನಕ್ಕೆ ಸಜ್ಜಾಗುತ್ತೇವೆ. ಸಂವಿಧಾನ ವಿರೋಧಿಗಳಿಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಹೇಳಿದ ಸಚಿವ ಯು.ಟಿ.ಖಾದರ್ ಅವರು ಕಡೆಗೆ ಅವರ ಪ್ರತಿಭಟನೆಗಳಿಗೆ ಮಣಿದು ಸುಮ್ಮನಾಗಿರುವುದು ವಿಪರ್ಯಾಸ. ಸಂವಿಧಾನ ಪಾಲಿಸುವ ಜನಪ್ರತಿನಿಧಿಯಾಗಿದ್ದರೆ ಅವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟುವಂತೆ ಮಾಡಬೇಕಿತ್ತು. ತನ್ನ ಕ್ಷೇತ್ರದಲ್ಲಿ ಸಂಸದ ನಳಿನ್ ಕಟೀಲ್ ಬೆಂಕಿ ಹಾಕುತ್ತೇನೆ ಎಂದರೂ ಪೊಲೀಸರು ಸ್ವಯಂಪ್ರೇರಿತರಾಗಿ ಕೇಸು ದಾಖಲಿಸಿಲ್ಲ.

ಜಗದೀಶ ಶೇಣವ ಕುದ್ರೋಳಿ ಕುರಿತು ಪ್ರಚೋದನಕಾರಿ, ನೆಹರೂ ಮೈದಾನದಲ್ಲಿ 40,000 ಮಸೀದಿಗಳನ್ನು ಒಡೆಯುವ ಮಾತು, ಬೆಳ್ತಂಗಡಿ ಪೆರಾಡಿಯ ಪ್ರಚೋದನೆ ಮಾತು, ಖಾಸಗಿ ಸುದ್ಧಿವಾಹಿನಿ ನಿರೂಪಕನ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಧ್ಯವಾಗಿಲ್ಲ. ಎಸ್ ಡಿಪಿಐ ಉಳ್ಳಾಲದಾದ್ಯಂತ ಬೆಳೆಯುತ್ತಿರುವ ಪರಿಣಾಮ ಯು.ಟಿ.ಖಾದರ್ ಕುರ್ಚಿ ಅಲುಗಾಡುತ್ತಾ ಇದೆ. ಅದಕ್ಕಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಉಳ್ಳಾಲದಲ್ಲಿ ನಡೆದ ಬಾಬರಿ ಮಸೀದಿ ಪ್ರದರ್ಶನದಲ್ಲಿ ಮಸೀದಿ ಧ್ವಂಸ ಸಂದರ್ಭ ಕಳಪೆ ರಾಜಕೀಯ ವ್ಯವಸ್ಥೆ, ಲಿಬರ್ ಹನ್ ವರದಿ, ಆಗಿನ ಪ್ರಧಾನಿ ನರಸಿಂಹ ರಾವ್ ಕೈಗೊಂಡ ನಿರ್ಣಯಗಳು ಕುರಿತ ನೈಜ ವಿಚಾರಗಳನ್ನು ಪ್ರದರ್ಶಿಸಲಾಗಿದೆ. ಹಿಂದೂ ಸಂಘಟನೆಯೊಂದು ಹಿಂದೂ ರಾಷ್ಟ್ರ ನಿರ್ಮಾಣದ ಬ್ಯಾನರ್,. ಪೋಸ್ಟರ್ ಗಳನ್ನು ಹಾಕಿದ್ದರೂ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಲ್ಲ. ಧೋರಣೆ ನೀತಿಯನ್ನು ಅನುಸರಿಸುವ ರಾಜ್ಯ ಸರಕಾರ ಪ್ರಕರಣ ಹಿಂಪಡೆಯದೇ ಇದ್ದಲ್ಲಿ ಉಗ್ರ ರೀತಿಯಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಎಸ್ ಡಿಪಿಐ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐ.ಎಂ.ಆರ್ ಮಾತನಾಡಿ ಪೊಲೀಸರನ್ನು ಉಪಯೋಗಿಸಿ ಕೇಸು ಹಾಕಿರುವುದು ಖೇದಕರ. ರಾಜಕೀಯದವರೇ ಖುದ್ದಾಗಿ ದೂರು ಹಾಕಬಹುದಿತ್ತು. ಪೊಲೀಸರು ಒತ್ತಡಕ್ಕೆ ಮಣಿದು ಕೇಸು ಹಾಕಿದ್ದಾರೆ. ಶೀಘ್ರವೇ ರಾಜ್ಯ ಸರಕಾರ ಹಾಕಿರುವ ಪ್ರಕರಣವನ್ನು ಹಿಂಪಡೆಯದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ನೈಜ ಕೋಮು ಭಾವನೆ ಪ್ರಚೋದಿಸುವವರ ವಿರುದ್ಧ ಕೇಸುಗಳಾಗುತ್ತಿಲ್ಲ. ಬಾಬರಿ ಮಸೀದಿ ಧ್ವಂಸ ವಿಚಾರದಲ್ಲಿ ನೈಜ ವಿಚಾರವನ್ನು ತೋರಿಸುವಾಗ ಕೇಸು ದಾಖಲಿಸಲಾಗುತ್ತಿದೆ. ದೇಶಾದ್ಯಂತ ಅಭಿಯಾನ ನಡೆದರೂ, ಉಳ್ಳಾಲದಲ್ಲಿ ಮಾತ್ರ ಕೇಸು ದಾಖಲಾಗಲು ರಾಜಕೀಯ ದ್ವೇಷ ಕಾರಣ ಎಂದರು.

ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯಾ, ಮುನೀಬ್ ಬೆಂಗ್ರೆ, ಝಾಹಿದ್ ಮಲಾರ್, ಎ.ಆರ್ ಅಬ್ಬಾಸ್, ಉಳ್ಳಾಲ ನಗರಸಭೆ ಸದಸ್ಯರುಗಳಾದ ರಮೀಝ್ ಉಳ್ಳಾಲ್, ಅಸ್ಗರ್ ಅಲಿ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದರು. ಠಾಣೆಗೆ ಮುತ್ತಿಗೆ ಹಾಕುವ ವಿಚಾರದಿಂದ ಉಳ್ಳಾಲ ಠಾಣೆಗೆ ಅಡ್ಡವಾಗಿ ಬ್ಯಾರಿಕೇಡ್ ಹಾಕಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಫೆ.1 ರಂದು ಉಳ್ಳಾಲ ದರ್ಗಾ ಗೇಟಿನ ಎದುರುಗಡೆ ಬಾಬರಿ ಮಸೀದಿ ಎಕ್ಸ್ ಪೋ-2019 ಎಸ್ ಡಿಪಿಐ ರಾಷ್ಟ್ರಮಟ್ಟದ ಅಭಿಯಾನ ಕಾರ್ಯಕ್ರಮ ನಡೆಸಲಾಗಿತ್ತು. ಬಾಬರಿ ಮಸೀದಿ ಧ್ವಂಸಗೈದ ಪ್ರಕರಣ ಹಾಗೂ ಆ ಬಳಿಕ ನಡೆದಂತಹ ಬೆಳವಣಿಗೆಗಳ ಕುರಿತು ಭಾವಚಿತ್ರಗಳು, ವೀಡಿಯೋ ಮೂಲಕ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೋಮು ಪ್ರಚೋದನಾಕಾರಿ ಕಾರ್ಯಕ್ರಮ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಸೇರಿದಂತೆ ಇತರರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿತ್ತು.

Exit mobile version