Site icon Ullalavani

ಹೊಸ ಮನೆಯ ಕೀಲಿಕೈ ಹಸ್ತಾಂತರ

UN NETWORKS

ಉಳ್ಳಾಲ: ಸೋಮೇಶ್ವರ ಗ್ರಾಮದ ಕುತ್ತಾರ್ ಮುಂಡೋಳಿ ಪರಿಸರದ ಆದಿಸ್ಥಳ ಶ್ರೀ ರಕ್ತೇಶ್ವರಿ ಏಳುವರೆ ಸಿರಿಗಳು ಕೊರಗಜ್ಜ ಕ್ಷೇತ್ರ ನಿರ್ಮಾಣ ಆಗುತ್ತಿರುವ ಜಾಗದಲ್ಲಿ ವಾಸ್ತವವಿದ್ದ ಸುಂದರಿಯವರ ಮನೆಯನ್ನು ಕ್ಷೇತ್ರದ ನಿರ್ಮಾಣದ ಪ್ರಯುಕ್ತ ತೆರವು ಮಾಡಿದ ಹಿನ್ನೆಲೆಯಲ್ಲಿ ಸಮಿತಿಯವರು ಕೊಟ್ಟ ಮಾತಿನಂತೆ ಅವರಿಗೆ ರಕ್ತೇಶ್ವರಿ ಕ್ಷೇತ್ರದ ಬಳಿ ನಿರ್ಮಿಸಲಾದ ಹೊಸ ಮನೆಯ ಹಸ್ತಾಂತರ ಶನಿವಾರ ನಡೆಯಿತು.

ಸಮಿತಿಯ ಅಧ್ಯಕ್ಷ ಉದ್ಯಮಿ ಹರೀಶ್ ಕುತ್ತಾರ್ ಮನೆಯ ಕೀಲಿಕೈ ಸುಂದರಿಯವರ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಮನೆಯವರಿಗೆ ಕೊಟ್ಟ ಭಾಷೆಯನ್ನು ಪಾಲಿಸಿ ಶಿಲಾನ್ಯಾಸಕ್ಕಿಂತ ಮೊದಲೇ ಹೊಸ ಮನೆಯನ್ನು ನಿರ್ಮಿಸಿಕೊಟ್ಟಿದ್ದೇವೆ ಶ್ರೀ ರಕ್ತೇಶ್ವರಿ, ಏಳುವರೆ ಸಿರಿಗಳು ಕೊರಗಜ್ಜ ದೈವದ ಅನುಗ್ರಹದಲ್ಲಿ ಮನೆಯ ಕೆಲಸ ಆಗಿದೆ ಎಂದರು. ರಮಾನಾಥ ದಿನೇಶ್ ಕಾಜವ, ಸದಾಶಿವ ಆಚಾರ್ಯ, ಮಧುಸೂದನ, ಭವಾನಿ ಶಂಕರ್, ಉದಯಶಂಕರ್, ನಾಗೇಶ್ ಗಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗೃಹಪ್ರವೇಶದ ಪ್ರಯುಕ್ತ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ , ಅನ್ನ ಸಂತರ್ಪಣೆ ನಡೆಯಿತು.

Exit mobile version