Site icon Ullalavani

SKSSF ದೇರಳಕಟ್ಟೆ ವತಿಯಿಂದ ಶಂಸುಲ್ ಉಲಮಾ ಮೌಲಿದ್ ವಾರ್ಷಿಕ ಹಾಗೂ ಶೈಖುನಾ ಮಿತ್ತಬೈಲ್ ಉಸ್ತಾದ್ ಅನುಸ್ಮರಣಾ ಸಂಗಮ

UN NETWORKS

ಉಳ್ಳಾಲ: SKSSF ದೇರಳಕಟ್ಟೆ ಶಾಖೆಯ ವತಿಯಿಂದ ಗ್ರೀನ್ ಗ್ರೌಂಡ್ ಮದರಸ ವಠಾರದಲ್ಲಿ ಸಂಶುಲ್ ಉಲಮಾ ಮೌಲಿದ್ ವಾರ್ಷಿಕ ಹಾಗೂ ಮಿತ್ತಬೈಲ್ ಉಸ್ತಾದರ ಅನುಸ್ಮರಣಾ ಸಂಗಮ ನಡೆಯಿತು.

ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರಿನ್ಸಿಪಾಲ್,ಶೈಖುನಾ ಉಸ್ಮಾನ್ ಫೈಝಿ ರವರ ಆದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯದ್ ಅಮೀರ್ ತಂಗಳ್ ಮೌಲಿದ್ ಮಜ್ಲಿಸ್ ನೇತೃತ್ವ ವಹಿಸಿದರು.ದೇರಳಕಟ್ಟೆ ಬದ್ರಿಯಾ ಜುಮಾ ಮಸ್ಜಿದ್ ಮುದರ್ರಿಸ್ ಬಹು ಶರೀಫ್ ಅರ್ಶದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಹು ಇಬ್ರಾಹಿಂ ಬಾಖಾವಿ ಉಸ್ತಾದ್ ಕೆ.ಸಿ ರೋಡ್, ಎಸ್ ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷರಾದ ಬಹು ಖಾಸಿಂ ದಾರಿಮಿ, ಮಿತ್ತಬೈಲ್ ಉಸ್ತಾದರ ಸುಪುತ್ರ ಬಹು ಇರ್ಷಾದ್ ದಾರಿಮಿ. ಹಾಫಿಲ್ ಝೈನ್ ಸಖಾಫಿ. ಅನುಸ್ಮರಣಾ ಪ್ರಭಾಷಣವನ್ನು ನಡೆಸಿದರು.ಹಾಗೂ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಪ್ರಭಾಷಣಗೈದರು.ತಹ್ಲೀಲ್ ಹಾಗೂ ದುಆ ಮಜ್ಲಿಸ್ ಗೆ ಬಹು ಸಯ್ಯದ್ ಹಾರಿಸಲಿ ಶಿಹಾಬ್ ತಂಗಳ್ ಪಾಣಕ್ಕಾಡ್ ನೇತೃತ್ವ ವಹಿಸಿದರು.ಕಾರ್ಯಕ್ರಮದಲ್ಲಿ ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಡಿ. ಇಸ್ಮಾಯಿಲ್ ಹಾಜಿ.ದೇರಳಕಟ್ಟೆ ಎಜುಕೇಷನಲ್ & ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ,ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷರಾದ ರಶೀದ್ ಹಾಜಿ.ಮದರಸ ಮ್ಯಾನೇಜ್ಮೆಂಟ್ ಗೌರವಾಧ್ಯಕ್ಷ ರಾದ ಹಾಜಿ ಅಬ್ಬಾಸ್ ಮಜಲ್, ಬದ್ರಿಯಾ ಜುಮಾ ಮಸ್ಜಿದ್ ದೇರಳಕಟ್ಟೆ ಅಧ್ಯಕ್ಷರಾದ ಅಬ್ಬಾಸ್ ಹಾಜಿ, ಮನಾರುಲ್ ಹುದಾ ಮದರಸ ಅಧ್ಯಕ್ಷರಾದ ಸಯ್ಯದ್ ಅಲಿ,ಕೇಂದ್ರ ಜುಮಾ ಮಸೀದಿ ಬೆಲ್ಮ ರೆಂಜಾಡಿ ಅಧ್ಯಕ್ಷರಾದ ಮೊಹಮ್ಮದ್ ಹನೀಫ್. ಕುಂಡೂರ್ ಜುಮಾ ಮಸೀದಿ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ಸ್ವಾಗತ್, ಎಸ್.ವೈ ಎಸ್.ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಅಲಿ, ಕಾರ್ಯದರ್ಶಿ ಹಾಜಿ ಸಿದ್ದೀಕ್, SKSSF ನಿರ್ದೇಶಕರುಗಳಾದ ಹಾಜಿ ಅಬ್ದುಲ್ ಖಾದರ್. ಮೊಹಮ್ಮದ್ ನಡುಪದವು,ಅನ್ಸಾರುಲ್ ಮುಸ್ಲಿಮೀನ್ ಅಧ್ಯಕ್ಷರಾದ ಹಾಜಿ ಇಲ್ಯಾಸ್ ಡಿ. ಮದರಸ ಮ್ಯಾನೇಜ್ಮೆಂಟ್ ಉಪಾಧ್ಯಕ್ಷರಾದ ಒಂ ಅಬ್ದುಲ್ಲಾ ರೆಂಜಾಡಿ,SKSSF ಮಂಗಳೂರು ವಲಯ ಅಧ್ಯಕ್ಷರಾದ ರಿಯಾಝ್ ರಹ್ಮಾನಿ ಕಿನ್ಯ. ಏಶ್ಯನ್ ಅಹ್ಮದ್ ಬಾವಾ ಹಾಜಿ, ಬಿ.ಕೆ.ಇಸ್ಮಾಯಿಲ್ ನಾಟೆಕಲ್,ಶಂಸುಲ್ ಉಲಮಾ ಅಕಾಡೆಮಿ ಕಿನ್ಯ ಪ್ರದಾನ ಕಾರ್ಯದರ್ಶಿ ಸಿರಾಜ್ ತಾಜ್. ಬೆಲ್ಮ ಗ್ರಾಮ ಪಂಚಾಯತ್ ಸದಸ್ಯರಾದ ಕೇಬೀರ್ ಡಿ. ಹಾಜಿ ಕೆ.ಎಸ್.ಫಾರೂಕ್ ಕಲ್ಲಡ್ಕ,ಮೊಹಮ್ಮದ್ ಪನೀರ್. ಆಸಿಫ್ ಅಬ್ದುಲ್ಲಾ ಉಳ್ಳಾಲ, ತಾಜುದ್ದೀನ್ ದೇರಳಕಟ್ಟೆ. ಮುಖ್ಯ ಅತಿಥಿಗಳಾಗಿ ಬಾಗವಹಿಸಿದರು.ಕಾರ್ಯಕ್ರಮದಲ್ಲಿ SKSSF ಕೇಂದ್ರ ಸಮಿತಿ ಸದಸ್ಯರಾದ ಬಹು ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ಸ್ವಾಗತಿಸಿ ವಂದಿಸಿದರು.

Exit mobile version