UN NETWORKS
ಉಳ್ಳಾಲ: ಬಡ ನಿರ್ಗತಿಕ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮತ್ತು ಉಳ್ಳಾಲ ಪರಿಸರದವರಿಗೆ ಆಂಬ್ಯುಲೆನ್ಸ್ ಸೇವೆ ಒದಗಿಸುವ ಸಲುವಾಗಿ ಕ್ರಿಕೆಟ್ ಪಂದ್ಯಾಟವನ್ನು ನಡೆಸಿದ ಬಿ,ಬಾಯ್ಸ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅವರ ಸಾಮಾಜಿಕ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಉಳ್ಳಾಲ ನಗರ ಸಭಾ ಸದಸ್ಯ ಯು.ಪಿ.ಅಯ್ಯೂಬ್ ಮಂಚಿಲ ಹೇಳಿದರು.
ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ತ್ವಾಹಾ , ಕಾರ್ಯದರ್ಶಿ ಯು.ಎ. ಹನೀಫ್ , ಉಳ್ಳಾಲ ಅಳೇಕಲ ಸ್ಪೋಟ್ರ್ಸ್ನ ಅಧ್ಯಕ್ಷ ಯುಬಿ.ಫಾರೂಕ್, ಮದನಿ ಎಜುಕೇಶನ್ ಟ್ರಸ್ಟ್ ಸದಸ್ಯ ಯು.ಎನ್. ಇಬ್ರಾಹಿಂ, ಉಳ್ಳಾಲ ನಗರಸಭಾ ಸದಸ್ಯ ಅಸ್ಗರ್ ಅಲಿ, ಯು.ಎ.ಇಸ್ಮಾಯಿಲ್, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಬಿ ಸಲೀಂ, ಮಕ್ಸೂದ್ ಖಾನ್, ಯು.ಬಿ. ರಹೀಂ, ಬಿ.ಬಾಯ್ಸ್ ಅಧ್ಯಕ್ಷ ಯು.ಡಿ ಹನೀಫ್, ಉಪಾಧ್ಯಕ್ಷ ಅಲೀ ಮಾರ್ಗತಲೆ, ಕಫ್ತಾನ ಶಬೀರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಯು.ಎಚ್.ಹಿದಾಯತ್ ಕಾರ್ಯಕ್ರಮ ನಿರೂಪಿಸಿದರು.
ಕ್ರಿಕೆಟ್ ಪಂದ್ಯಾಟದಲ್ಲಿ ಉಳ್ಳಾಲ ಬೈಲ್ ಕೀರ್ತಿ ತಂಡ ಚಾಂಪಿಯನ್ ಮತ್ತು ಮಂಚಿಲ ಸಫರ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ದ್ವಿತೀಯ ಸ್ಥಾನ ಪಡೆಯಿತು.