Site icon Ullalavani

ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ನೃತ್ಯ ಶಿಕ್ಷಣ ಸಂಸ್ಥೆಯಿಂದ ಗುರುಕುಲ ಉತ್ಸವ -೨೦೧೫

ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ : ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ನೃತ್ಯ ಶಿಕ್ಷಣ ಸಂಸ್ಥೆಯಿಂದ ಗುರುಕುಲ ಉತ್ಸವ -೨೦೧೫ ಮತ್ತು ಯಕ್ಷ ನಾಟ್ಯಗುರು ಶ್ರೀ ಸಬ್ಬಣಕೋಡಿ ರಾಮ ಭಟ್ ಅವರಿಗೆ ‘ಯಕ್ಷ ಮಂತ್ರ್ಯಕ ಪ್ರಶಸ್ತಿ’ ಪ್ರಧಾನ ಕಾರ್ಯಕ್ರಮ ತೊಕ್ಕೊಟ್ಟು ಅಂಬಿಕಾರೋಡ್ ಬಳಿಯಿರುವ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು24ullal1
ಗುರುಕುಲ ಉತ್ಸವಕ್ಕೆ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಹಿರಿಯ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಚಾಲನೆ ನೀಡಿ ಪ್ರಪಂಚದಲ್ಲಿ ಭರತನಾಟ್ಯದಂತಹ ವಿದ್ಯೆ ಬೇರೊಂದಿಲ್ಲ. ಎಲ್ಲಾ ಸರ್ವಸ್ವವನ್ನು ಹೊಂದಿರುವ ಕಲೆ ಅದು ಭರತನಾಟ್ಯ ಮಾತ್ರ. ತಾಳ್ಮೆಯಿಂದ ಕಲೆಯನ್ನು ಪೋಷಿಸಿಕೊಂಡು ಮತ್ತು ಗುರುಗಳ ಮಾರ್ಗದರ್ಶನವನ್ನು ಕಾಪಾಡಿಕೊಂಡವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ .ಅದನ್ನು ಉಳಿಸಿ ಬೆಳೆಸುವ ಕಾರ್‍ಯ ಮುಂದಿನ ಪೀಳಿಗೆಯಿಂದ ಆಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಕಲೆಯಿಲ್ಲದ ಜೀವನ ವ್ಯರ್ಥ. ಪಾಶ್ಚಾತ್ಯ ಸಂಸ್ಕೃತಿಗಳಿಂದ ಭರತನಾಟ್ಯದಂತಹ ಕಲೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಅದರ ನಡುವೆಯೂ ಮಂತ್ರನಾಟ್ಯಕಲಾ ಗುರುಕುಲ ನೃತ್ಯ ಶಿಕ್ಷಣ ಸಂಸ್ಥೆಯವರು ಮಕ್ಕಳಿಗೆ ಕಲೆಯ ಪರಿಚಯ ಮಾಡುವುದು ಶ್ಲಾಘನೀಯ ಎಂದರು.
ಯಕ್ಷ ನಾಟ್ಯಗುರು ಶ್ರೀ ಸಬ್ಬಣಕೋಡಿ ರಾಮ ಭಟ್ ಅವರಿಗೆ ‘ಯಕ್ಷ ಮಂತ್ರ್ಯಕ ಪ್ರಶಸ್ತಿ’ಯನ್ನು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಪ್ರಧಾನ ಮಾಡಿದರು. ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರ ಕುಕ್ಕಾಜೆ ತಂತ್ರಿವರ್ಯರಾದ ಕೃಷ್ಣ ಕುಕ್ಕಾಜೆ ಆಶೀರ್ವಚನ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ , ಶ್ರೀ ಚೀರುಂಭ ಭಗವತೀ ತೀಯಾ ಸಮಾಜ ಸೇವಾ ಸಂಘ ಉಳ್ಳಾಲ ಇದರ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್, ನಾಟ್ಯನಿಕೇತನ ಕೊಲ್ಯ ಇದರ ನೃತ್ಯ ನಿರ್ದೇಶಕಿ ವಿದುಷಿ ರಾಜಶ್ರೀ ಉಳ್ಳಾಲ್, ಪೊಲದವರು ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ವಿಶ್ವನಾಥ್ ಗಟ್ಟಿ ವಗ್ಗ, ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರ ಮಾಜಿ ಆಡಳಿತ ಮೊಕ್ತೇಸರ ಯು.ಎಸ್. ಪ್ರಕಾಶ್, ಧಾರ್ಮಿಕ ದತ್ತಿ ಇಲಾಖೆಯ ನಿವೃತ್ತ ಅಽಕಾರಿ ಪ್ರತಿಭಾ ವಿಜಯ ಕುಮಾರ್, ಉದ್ಯಮಿ ಜನಾರ್ಧನ್ ಸಾಲ್ಯಾನ್ , ಸಂಸ್ಥೆಯ ಅಧ್ಯಕ್ಷೆ ಶಕಿಲಾ ಜನಾರ್ಧನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ವಿದ್ಯಾಧರ್ ಶೆಟ್ಟಿ, ಶಶಿಧರ ಪೊಯ್ಯತ್ತಬೈಲ್, ವಸಂತ್ ಎನ್. ಕೊಣಾಜೆ, ದಯಾನಂದ ಕುಕ್ಕಾಜೆ, ನಿಶಾಂತ್ ಮುಂಗಾತ್, ಮೋಹನ್ ಕುತ್ತಾರ್ ಅವರಿಗೆ ಮಂತ್ರ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗುರುಕುಲ ಉತ್ಸವದ ಅಂಗವಾಗಿ ಭರತನಾಟ್ಯ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪ್ರಥಮ ಭೂಮಿಕಾ ವಸಂತ್ ,ದ್ವಿತೀಯ ಲಿಖಿತಾ ಲೋಕೇಶ್, ಹಿರಿಯರ ವಿಭಾಗದಲ್ಲಿ ಪ್ರಥಮ ಮಾನಸ, ದ್ವಿತೀಯ ಸುಮಂತ್.ಯಸ್.ಅಯ್ಯಂಗಾರ್, ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಯಶಸ್ವಿ ಕಲಾಕೇಂದ್ರ ಹಾಗೂ ದ್ವಿತೀಯ ಶುತಿಲಯ ಕಲಾಕೇಂದ್ರ ಪ್ರಶಸ್ತಿಯನ್ನು ಪಡೆದರು. ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ ವಿದುಷಿ ಸೌಮ್ಯಾ ಸುಧೀಂದ್ರ ರಾವ್, ವಿದುಷಿ ಶ್ರುತಿ ಗುರುರಾಜ್ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯಾಂಗಿಕಂ ಬೆಂಗಳೂರು ಇಲ್ಲಿನ ಅದಿತಿ ಅರಕ್ಕಳಿ ಮತ್ತು ಶ್ವೇತಾ ಬಿ. ಎಂ. ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಮಂತ್ರ ನಾಟ್ಯಕಲಾ ಗುರುಕುಲದ ವಿದ್ಯಾರ್ಥಿಗಳಿಂದ ‘ನೂಪುರ ನಾಟ್ಯಕಲಾ ದರ್ಶಿನಿ’ ನೃತ್ಯ ಕಾರ್ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಪ್ರಾಯೋಜಕತ್ವದಲ್ಲಿ ಪಡ್ರೆ ಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ ಇವರಿಂದ ಶ್ರೀ ಕೃಷ್ಣ ಚರಿತಾಮೃತ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಮಂತ್ರನಾಟ್ಯಕಲಾ ಗುರುಕುಲದ ನೃತ್ಯ ನಿರ್ದೇಶಕ ವಿದ್ವಾನ್ ಶ್ರವಾಣ್ ಉಳ್ಳಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಕಿರಣ್ ಉಳ್ಳಾಲ್ ವಂದಿಸಿದರು. ಧನಲಕ್ಷ್ಮಿ ವಂದಿಸಿದರು.

Exit mobile version