UN NETWORKS
ಉಳ್ಳಾಲ: ದೇಶದಾದ್ಯಂತ ಲಾಭ ಗಳಿಸಿ ಸೇವೆ ನಡೆಸುತ್ತಿದ್ದಂತಹ ವಿಜಯ ಬ್ಯಾಂಕ್ ತುಳುನಾಡಿಗೆ ಕೀರ್ತಿಯನ್ನು ತಂದು ಕೊಟ್ಟಿತ್ತು. ಆದರೆ ಆರ್ಥಿಕ ನೀತಿ ಗೊತ್ತಿಲ್ಲದ ಪ್ರಧಾನಿ ಮೋದಿಯವರಿಂದಾಗಿ ದೇಶ ಆರ್ಥಿಕತೆಯಲ್ಲಿ 10 ವರ್ಷ ಹಿಂದೆ ಹೋಗಿದೆ ಎಂದು ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದ್ದಾರೆ.
ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, ದೇಶಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರ. ಇಂತಹ ಬಂಟ ಸಮುದಾಯದ ಹಿರಿಯರೇ ಸ್ಥಾಪಿಸಿದ ವಿಜಯ ಬ್ಯಾಂಕ್ ಅನ್ನು ಬಂಟ ಪುತ್ರನೇ ನಾಶಗೊಳಿಸುತ್ತಿರುವುದು ವಿಪರ್ಯಾಸ. 10 ವರ್ಷಗಳಲ್ಲಿ ಸಂಸದರಾಗಿ ನಳಿನ್ ಕಟೀಲ್ ಸಾಧನೆ ಶೂನ್ಯ. ಬಾವುಟಗುಡ್ಡೆಯ ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರನ್ನು ಅಳಿಸುವ ಕೆಲಸದ ಕುರಿತು ಪ್ರತಿ ಬಂಟ ಸಮುದಾಯದ ಮನೆಗೆ ತೆರಳಿದ ಸಂಸದರು ಅಪಪ್ರಚಾರ ನಡೆಸಿ , ಶಾಸಕ ಜೆ.ಆರ್ ಲೋಬೋ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಈ ಬಾರಿ ವಿಜಯ ಬ್ಯಾಂಕ್ ವಿಲೀನಗೊಳಿಸುವ ಮೂಲಕ ಜಿಲ್ಲೆಗೆ ಅವಮಾನಗೊಳಿಸಲು ಮುಂದಾದ ಸಂಸದರನ್ನು ಜಿಲ್ಲೆಯ ಜನ ಮರು ಆಯ್ಕೆ ನಡೆಸುವುದಿಲ್ಲ ಎಂದರು.
ದ.ಕ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷ ಎನ್.ಎಸ್ ಕರೀಂ ಮಾತನಾಡಿ, ಜಿಲ್ಲೆಯ ಜನ ವಿದ್ಯಾವಂತರು ಎಲ್ಲರಿಗೂ ಕೆಲಸ ಸಿಗಬೇಕಿದೆ. ಇತರೆ ಬ್ಯಾಂಕುಗಳಲ್ಲಿ ಹೊರರಾಜ್ಯದವರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ವಿಜಯಬ್ಯಾಂಕಿನಲ್ಲಿ ಸ್ಥಳೀಯರ ಹೆಚ್ಚಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೂ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡುವಲ್ಲಿ ಇಲ್ಲಿನ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ದೇವರ ವಿಚಾರದಲ್ಲಿ ಆಯಾಯ ಧರ್ಮದವರು ತೀರ್ಮಾನಿಸುವವರಿದ್ದಾರೆ. ಆದರೆ ಅವರ ನಡುವೆ ಯಾರೂ ಮೂಗು ತೂರಿಸುವ ಆವಶ್ಯಕತೆಯಿಲ್ಲ ಎಂದು ಆಗ್ರಹಿಸಿದರು. ಉಳ್ಳಾಲ ನಗರ ಸಭೆ ಮಾಜಿ ಸದಸ್ಯ ದಿನೇಶ್ ರೈ, ದ.ಕ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷ ಎನ್.ಎಸ್ ಕರೀಂ, ಟಿ.ಎಸ್ ಅಬೂಬಕರ್, ಅಹಾರ ಇಲಾಖೆಯ ನಿರ್ದೇಶಕ ಜ ಟಿ.ಎಸ್ ಅಬ್ದುಲ್ಲ, ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯ ಇಸ್ಮಾಯಿಲ್ ದೊಡ್ಡಮನೆ, ಕುಂಞ ಬಾವ ಹಾಜಿ ಕಲ್ಕಟ್ಟ, ಕಿನ್ಯ ಗ್ರಾ.ಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ, ಸದಸ್ಯ ಫಾರೂಕ್ ಕಿನ್ಯ, ಉದ್ಯಮಿ ಶರೀಫ್ ನಾಟೆಕಲ್, ಅಲ್ವೀನ್ ಡಿ ಸೋಜಾ, ತಾ.ಪಂ ಸದಸ್ಯ ಹೈದರ್ ಕೈರಂಗಳ, ತಾ.ಪಂ ಮಾಜಿ ಸದಸ್ಯ ನೆಕ್ಕರೆ ಬಾವು, ಮಂಜನಾಡಿ ವಲಯ ಯುವ ಕಾಂಗ್ರೆಸ್ ಮುಖಂಡ ರಫೀಕ್ ಕಲ್ಕಟ್ಟ, ಎಸ್ ವೈಎಸ್ ಮಂಜನಾಡಿ ಸೆಂಟರ್ನ ಮಹಮೂದ್ ಹಾಜಿ ಖಂಡಿಕ, ಹಿರಿಯ ಫಕೀರ್ ಸಾಹೆಬ್, ಇಬ್ರಾಹೀಂ ಖಂಡಿಕ, ಯುತ್ ಕಾಂಗ್ರೆಸ್ ಸದಸ್ಯ ಇಸ್ಹಾಕ್ ಕಲ್ಕಟ್ಟ, ಸಿದ್ದೀಕ್ ಕಲ್ಕಟ್ಟ ಉಪಸ್ಥಿತರಿದ್ದರು.