Site icon Ullalavani

ಕಾರ್ಪೊ ರೇಶನ್ ಬ್ಯಾಂಕ್ ಮ್ಯಾನೇಜರ್ ಗೆ ಬೀಳ್ಕೊಡುಗೆ

UN NETWORKS

ಉಳ್ಳಾಲ: ಕಾರ್ಪೊರೇಶನ್ ಬ್ಯಾಂಕ್‍ನಲ್ಲಿ ಮೂವತ್ತೈದು ವರ್ಷ ಉದ್ಯೋಗಿಯಾಗಿ ಸದ್ಯ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಯನ್ನು ಅಲಂಕರಿಸಿ ನಿವೃತ್ತರಾದ ಕೆ. ಸಂತೋಷ್ ಕುಮಾರ್ ಗೆ ಬೀಳ್ಕೊಡುಗೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಇವರು ಉತ್ತಮ ಸೇವೆಗಾಗಿ ಠೇವಣಿ ಸಂಗ್ರಹಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಉತ್ತಮ ಕ್ರಿಕೆಟ್ ಪಟುವಾಗಿ ಬ್ಯಾಂಕ್‍ನ ತಂಡದ ನಾಯಕರಾಗಿ ಹಲವಾರು ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಚಿಕ್ಕ ಮಗಳೂರು, ಮುಂಬೈ, ಮೈಸೂರು, ಮಂಗಳೂರು, ಉಡುಪಿ ಯಲ್ಲಿ ಸೇವೆ ಸಲ್ಲಿಸಿದ ಇವರು ದೇರಳಕಟ್ಟೆ ಶಾಖೆ ಯಲ್ಲಿ ಸೇವೆ ಮಾಡಿ ನಿವೃತ್ತರಾಗುತ್ತಿದ್ದಾರೆ. ಇವರ ಬೀಳ್ಕೊಡುಗೆ ಸಮಾರಂಭ ಕಾರ್ಯ ಕ್ರಮದಲ್ಲಿ ಕಾರ್ಪೋರೇಷನ್ ಬ್ಯಾಂಕ್‍ನ ಡಿಜಿಎಂ ಎ.ಕೆ. ವಿನೋದ್, ಶಾಖಾ ಮ್ಯಾನೇಜರ್ ಶೇಖರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Exit mobile version