UN NETWORKS
ಮಂಗಳೂರು: ಅದು ದ.ಕ ಜಿಲ್ಲೆಯ ಕಟ್ಟಕಡೆಯ ಕುಗ್ರಾಮ. ಈ ಮಧ್ಯೆ ನಕ್ಸಲ್ ಪೀಡಿತ ಪ್ರದೇಶ ಅನ್ನೋ ಹಣೆಪಟ್ಟಿ ಹೊಂದಿರೋ ಹಿಂದುಳಿದ ಪ್ರದೇಶ. ಹೀಗಾಗಿಯೇ ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿರೋ ಒಂದು ಪುಟ್ಟ ಹಳ್ಳಿ. ಆದ್ರೆ ಇಂದು ಮಾತ್ರ ಆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಹಾದಿಯಾಗಿ ಜಿಲ್ಲೆಯ ಎಲ್ಲಾ ಅಧಿಕಾರಿಗಳ ದಂಡೇ ಆಗಮಿಸುತ್ತು. ಇದಕ್ಕೆ ಕಾರಣವಾಗಿದ್ದು ರಾಜ್ಯದಲ್ಲೇ ಮೊದಲ ಬಾರಿಗೆ ದ.ಕ ಜಿಲ್ಲೆಯ ಪತ್ರಕರ್ತರು ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮ.
ಇನ್ನು ಬೆಳಿಗ್ಗೆ ಆರಂಭವಾದ ಕಾರ್ಯಕ್ರಮ ರಾತ್ರಿ ವಾಸ್ತವ್ಯದವರೆಗೂ ಮುಂದುವರೆಯಿತು. ಇನ್ನು ನಕ್ಸಲ್ ಪೀಡಿತವಾಗಿರೋ ಪ್ರದೇಶವಾಗಿರೋ ಕಾರಣದಿಂದ ದ.ಕ ಜಿಲ್ಲಾ ಪೊಲೀಸ್ ಇಲಾಖೆ ಭಾರೀ ಭದ್ರೆತೆ ಏರ್ಪಡಿಸಿತ್ತು. ಅಲ್ಲದೇ ಎಎನ್ಎಫ್ ಕುತ್ಲೂರು ಭಾಗ ಕಾಡಿನಲ್ಲಿ ಕೂಂಬಿಂಗ್ ಕೂಡ ನಡೆಸಿತ್ತು. ಈ ಮಧ್ಯೆ ಪತ್ರಕರ್ತರ ಕಾರ್ಯಕ್ರಮದ ನಡೆದ ಶಾಲೆ ಮತ್ತು ವಾಶ್ತವ್ಯ ಹೂಡಿದ ಮನೆಗಳಿಗೆ ಭಾರೀ ಭದ್ರೆತೆ ಏರ್ಪಡಿಸಲಾಗಿತ್ತು. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕೂಡ ಗ್ರಾಮವಾಸ್ತವ್ಯದಲ್ಲಿ ಪಾಲ್ಗೊಂಡು ಗ್ರಾಮದ ಜನ್ರ ನೋವು ಆಲಿಸಿದ್ರು. ಈ ವೇಳೆ ಗ್ರಾಮಸ್ಥರು ಮನೆಗೆ ವಿದ್ಯುತ್ ಒದಗಿಸೋ ಬಗ್ಗೆ, ಹಕ್ಕು ಪತ್ರ ಇಲ್ಲದಿರೋದು, ಕಸ್ತೂರಿ ರಂಗನ್ ಆತಂಕ, ಯೋಜನೆಗಳು ತಲುಪದೇ ಇರೋದು ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನ ಸಚಿವ್ರ ಗಮನಕ್ಕೆ ತಂದ್ರು. ಈ ವೇಳೆ ಸ್ಥಳದಲ್ಲೇ ಇದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಅವುಗಳನ್ನ ಬಗೆಹರಿಸೋವಂತೆ ಪಂಚಾಯತಿ ಕಟ್ಟೆಯಲ್ಲಿ ಕೂತ ಸಚಿವ ಖಾದರ್ ಖಡಕ್ ಸೂಚನೆ ನೀಡಿದ್ರು. ಈ ಮಧ್ಯೆ ಇಡೀ ಗ್ರಾಮವನ್ನ ಮತ್ತೆ ಜಂಟಿ ಸರ್ವೇ ನಡೆಸಿ ಹಕ್ಕು ಪತ್ರ ಇಲ್ಲದವ್ರಿಗೆ ಹಕ್ಕು ಪತ್ರ ವಿತರಿಸೋಕೆ ಮುಂದಾಗಿ ಅಂತ ಪುತ್ತೂರು ಉಪವಿಭಾಗಾಧಿಕಾರಿಗೆ ಸಚಿವ ಖಾದರ್ ಸೂಚನೆ ನೀಢಿದ್ರು. ಅಲ್ಲದೇ ಸರ್ಕಾರಿ ಬಸ್ಸು, ಶಾಲೆಗಳ ಅಭಿವೃದ್ದಿ ಸಂಬಂಧಪಟ್ಟಂತೆ ಅಲ್ಲಿನ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ತಿಳಿಸಿದ್ರು. ಇನ್ನು ರಾತ್ರಿ ಕುತ್ಲೂರು ಪಂಚಾಯತ್ ಉಪಾಧ್ಯಕ್ಷೆಯ ಮನೆಯಲ್ಲಿ ಪತ್ರಕರ್ತರು ವಾಸ್ತವ್ಯ ಹೂಡಿದ್ರು. ಈ ವೇಳೆ ಕುತ್ಲೂರಿನ ಇತಿಹಾಸ, ನಕ್ಸಲ್ ನಂಟಿನ ಬಗ್ಗೆ ಸುಧೀರ್ಘ ಸಂವಾದ ನಡೆಸಿದ್ರು. ಅಲ್ಲದೇ ತುಳುನಾಡ ಪಾಡ್ದನ ಹಾಡುಗಳನ್ನ ಗ್ರಾಮದ ಹಿರಿಯರು ಹಾಡೋ ಮೂಲಕ ಅರ್ಥಪೂರ್ಣ ಗ್ರಾಮ ವಾಸ್ತವ್ಯ ನಡೀತು. ಇನ್ನು ಪತ್ರಕರ್ತರ ಸಂಘ ರಾಜ್ಯದಲ್ಲೇ ಮೊದಲ ಬಾರಿಗೆ ನಡೆಸ್ತಿರೋ ಇಂಥದ್ದೊಂದು ಕಾರ್ಯಕ್ರಮದ ಬಗ್ಗೆ ಸಚಿವ ಖಾದರ್ ಮತ್ತು ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ರು. ಕೇವಲ ಸುದ್ದಿಗಳನ್ನ ಮಾಡಿ ಸಂಬಂಧಪಟ್ಟ ಇಲಾಖೆಗಳಿಗೆ ಬಿಸಿ ಮುಟ್ಟಿಸ್ತಿದ್ದ ಪತ್ರಕರ್ತವರ್ಗ ಇಂದು ಕುತ್ಲೂರು ಗ್ರಾಮದಲ್ಲೇ ಬೀಡುಬಿಟ್ಟು ಜನ್ರ ಪರ ಧ್ವನಿಯೆತ್ತಿದೆ.
ದ.ಕ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘವೂ ಸಾಥ್ ನೀಢಿದೆ. ಪರಿಣಾಮ ಅಧಿಕಾರಿ ವರ್ಗ ಜನ್ರ ನೋವು ಆಲಿಸಿ ಎಲ್ಲಾ ಅರ್ಜಿಗಳನ್ನ ಪರಿಶೀಲಿಸಿ ಪರಿಹಾರ ನೀಡಲು ನೋಡಲ್ ಅಧಿಕಾರಿಯನ್ನೇ ನೇಮಿಸಿದೆ. ಒಟ್ನಲ್ಲಿ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರೋ ಜಿಲ್ಲೆಯ ಪತ್ರಕರ್ತರ ಕಾರ್ಯ ಸದ್ಯ ಭಾರೀ ಪ್ರಶಂಸೆಗೆ ಕಾರಣವಾಗಿದೆ.