UN NETWORKS
ಹರೇಕಳ: ಶಿಕ್ಷಣ ಪಡೆದ ಬಳಿಕ ತಾನು ಏನಾಗಬೇಕು ಎನ್ನುವ ತೀರ್ಮಾನ ಶಾಲಾ ಜೀವನದಲ್ಲಿಯೇ ಕೈಗೊಳ್ಳಬೇಕಿದ್ದು ಈ ನಿಟ್ಟಿನಲ್ಲಿ ಶಿಸ್ತಿನ ವಿದ್ಯೆ ಪಡೆದು ಶಿಸ್ತಿನ ಜೀವನ ನಡೆಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬಹುದು ಎಂದು ಕೊಣಾಜೆ ಠಾಣಾ ವೃತ್ತ ನಿರೀಕ್ಷಕ ರವಿ ನಾಯಕ್ ಅಭಿಪ್ರಾಯಪಟ್ಟರು.
ಪಜೀರು ಮೆರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಸುನಿಲ್ ವೇಗಸ್ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಪ್ರಹ್ಲಾದ್ ರೈ ಮುದಲೇಮಾರು, ಸದಸ್ಯರಾದ ಸೋಮಶೇಖರ್ ಚೌಟ, ಶಿಕ್ಷಕಿ ಎವುಜಿನ್ ಮುಖ್ಯ ಅತಿಥಿಗಳಾಗಿದ್ದರು.ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿದರು. ಶಾಲಾ ಸಂಚಾಲಕ ಪಿ.ಜಯರಾಮ ಆಳ್ವ ಪೋಡಾರ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
‘ ಕ್ರೀಡೆಯಲ್ಲಿರುವ ಆಕಸ್ಮಿಕ ಚಟುವಟಿಕೆಗಳು ಜೀವನಕ್ಕೆ ಪಾಠವಾಗಿದೆ. ಶಿಕ್ಷಣ ನಾಲ್ಕು ಗೋಡೆಗಳ ನಡುವೆ ಸಿಲುಕದಂತಾಗಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ’
ಸುನಿಲ್ ವೇಗಸ್, ಧರ್ಮಗುರು, ಮೆರ್ಸಿಯಮ್ಮನವರ ಇಗರ್ಜಿ