Site icon Ullalavani

ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಶಾಲೆ ಮುಚ್ಚಿ-ಬೆಳಗಾವಿ ಚಲೋ ಎಚ್ಚರಿಕೆ

UN NETWORKS

ಮಂಗಳೂರು : ಅನುದಾನಿತ ಶಾಲಾ ಶಿಕ್ಷಕರ ವಿಧ್ಯಾರ್ಥಿಗಳ ಹಾಗೂ ಶಾಲೆಗಳಿಗೆ ಸಂಬಂಧಿಸಿರುವ ತಾರತಮ್ಯಗಳ ಬಗ್ಗೆ ವಿಧಾನ ಸಭೆಯ ಬೆಳಗಾವಿ ಅಧಿವೇಶನದ ಮೊದಲು ಸಮಾಧಾನಕರ ಘೋಷಣೆಯಾಗದಿದ್ದರೆ ರಾಜ್ಯದ ಎಲ್ಲಾ ಅನುದಾನಿತ ಶಾಲೆಗಳನ್ನು ಮುಚ್ಚಿ ಅನುದಾನಿತ ಶಿಕ್ಷಕರು ಬೆಳಗಾವಿ ಛಲೋ ನಡೆಸಿ ಅಧಿವೇಶನದ ಸಮಯದಲ್ಲಿ ಸಾಮೂಹಿಕ ಮುಷ್ಕರ ಹೂಡಲಾಗುವುದು ಎಂಬ ತೀರ್ಮಾನವನ್ನು ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವ್ಯಕ್ತಪಡಿಸಲಾಗಿದೆ.

ಈ ವೇಳೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ ಮಾತನಾಡಿ ಅನುದಾನಿತ ಶಾಲೆಗಳಿಗೆ ಕನಿಷ್ಠ ಐದು ವರ್ಷಗಳ ಮಾನ್ಯತೆ ನೀಡಬೇಕು. ಈ ಬಾರಿಯ ನವೀಕರಣದ ಶುಲ್ಕವನ್ನು ಇಲಾಖೆ ಜೊತೆಗೆ ಚರ್ಚಿಸಿದ ನಂತರವೇ ಕಟ್ಟಲಾಗುವುದು. ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಮತ್ತು 15 ವರ್ಷಗಳನ್ನು ಪೂರೈಸಿರುವ ಅನುದಾನಿತ ಶಾಲೆಗಳಿಗೆ ಶಾಶ್ವತ ಮಾನ್ಯತೆ ನೀಡಲು ಸರಕಾರದ ಆದೇಶವಿದೆ. ಆದರೂ ಇಲಾಖೆಯು ಅನುದಾನಿತ ಶಾಲೆಗಳನ್ನು ಸತಾಯಿಸುತ್ತಲೇ ಬಂದಿದೆ. ಕೆಲವು ಜಿಲ್ಲೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಉತ್ತಮ ಸ್ಪಂಧನ ನೀಡುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ| ಕೆ.ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಕಾಲ್ಪನಿಕ ವೇತನ , ಎನ್‍ಪಿಎಸ್, ಮಕ್ಕಳಿಗೆ ಕರ್ನಾಟಕ ದರ್ಶನ, ಸಮವಸ್ತ್ರ, ಶೂ ಭಾಗ್ಯ, ಕನ್ನಡ ಮುಂಭಡ್ತಿ, ಜ್ಯೋತಿ ಸಂಜೀವಿನಿ, ಖಾಲಿಹುದ್ದೆಗಳ ಭರ್ತಿ, ಮುಖ್ಯೋಪಾಧ್ಯಾಯರಿಗೆ, 20, 25, 30 ವರ್ಷಗಳ ಭಡ್ತಿ, ಶಾಲಾನುದಾನದ ಮುಂದುವರಿಕೆ, ಹೆಚ್ಚುವರಿ ಶಿಕ್ಷಕರನ್ನು ಅನುದಾನಿತ ಶಾಲೆಗೆ ಮೊದಲ ಆದ್ಯತೆಯಲ್ಲಿ ನೇಮಿಸುವುದು ನಂತರ ಹುದ್ದೆ ಸಮೇತ ಸರಕಾರಿ ಶಾಲೆಗಳಿಗೆ ನೇಮಕ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ರಾಜ್ಯ ಕಾರ್ಯಾಧ್ಯಕ್ಷ ರಾಜಗೋಪಾಲ್ , ಉಪಾಧ್ಯಕ್ಷ ಮುತ್ತಯ್ಯ ಹೂಗಾರ್ ಮೊದಲಾದವರು ಉಪಸ್ಥಿತರಿದ್ದರು.

Exit mobile version